ಕೊಲ್ಲಹಳ್ಳಿ ಗ್ರಾಮದ ನಿವಾಸಿ ನವೀನ್ ಸಾವಿನ ದವಡೆಯಿಂದ ಪಾರಾಗಿ ಬಂದವರು. ಮಂಜು ಎನ್ನುವವರಿಗೆ ಸೇರಿದ ಮರ ಏರಿ ಗರಿಗಳನ್ನು ಕತ್ತರಿಸಿ ಕೆಳಕ್ಕಿಳಿಯುವ ವೇಳೆ ಅವರಿಗೆ ಬಿಸಿಲಿನ ತಾಪದಿಂದ ಸುಸ್ತಾಗಿದೆ. ಪ್ರಜ್ಞಾಹೀನರಾಗಿದ್ದ ಅವರು, ಮರದಲ್ಲಿ ಕತ್ತರಿಸಿದ್ದ ಗರಿಗಳ ನಡುವೆ ಸಿಕ್ಕಿಹಾಕಿಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.