ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇವಿಎಂ ಇಲ್ಲದೆ ಮತ್ತೆ ಚುನಾವಣೆ ನಡೆಸಿ ಗೆದ್ದರೆ ಯಾವತ್ತೂ ಮೋದಿಯನ್ನು ಟೀಕಿಸುವುದಿಲ್ಲ. ದೇಶದಲ್ಲಿ ನಿರುದ್ಯೋಗ, ಬಡತನ, ಆರ್ಥಿಕ ಹಿಂಜರಿತಗಳನ್ನು ಮರೆಮಾಚುವ ಸಲುವಾಗಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಜಾರಿಗೊಳಿಸಿದ್ದಾರೆ. ಪ್ರಪಂಚದ ಯಾವುದೇ ರಾಷ್ಟ್ರದಲ್ಲೂ ಕೂಡ ಜಾತಿ ಆಧಾರದ ಮೇಲೆ ಪೌರತ್ವ ಕಾಯ್ದೆ ಜಾರಿಗೆ ತಂದಿಲ್ಲ’ ಎಂದರು