ಆಲೂರು: ಬುಧವಾರ ನಡೆದ ಮತ ಎಣಿಕೆ ಕಾರ್ಯ ರಾತ್ರಿ 11 ರವರೆಗೆ ನಡೆಯಿತು ಎಂದು ತಹಶೀಲ್ದಾರ್ ಶಿರೀನ್ತಾಜ್ ತಿಳಿಸಿದ್ದಾರೆ.
ಮಲ್ಲಾಪುರ ಗ್ರಾ.ಪಂ.ಗೆ ಸೇರಿದ ಕಿತ್ತಗೆರೆ ಕ್ಷೇತ್ರದಿಂದ ಪತಿ ಚಂದ್ರಶೇಖರ್ ಸೋಲಪ್ಪಿದ್ದು, ಕಾಗನೂರು ಕ್ಷೇತ್ರದಿಂದ ಪತ್ನಿ ಸವಿತಾ ಚಂದ್ರಶೇಖರ್ ಜಯಗಳಿಸಿದ್ದಾರೆ.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪೃಥ್ವಿರಾಮ್ ಕಣತೂರು ಗ್ರಾಮ ಪಂಚಾಯಿತಿಯ ಮರಸು ಹೊಸಳ್ಳಿ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಪತ್ರಕರ್ತ ಬಿ.ಕೆ. ರಂಗಸ್ವಾಮಿ ಅವರ ಪತ್ನಿ ಸವಿತಾ ಭೈರಾಪುರ ಕ್ಷೇತ್ರದಿಂದ ಗೆದ್ದಿದ್ದಾರೆ.