ವೆಂಕಟೇಶ ನಿಂಗಪ್ಪ ಆಡೂರ (55) ಕೊಲೆಯಾದ ದುರ್ದೈವಿ. ಸರದಿಯಂತೆ ಆಟೊ ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಆಶೋಕ ಹನುಮಂತಪ್ಪ ಶೇಷಗಿರಿ, ಮತ್ತವರ ಪುತ್ರ ಅಭಿಲಾಷ ಅಶೋಕ ಶೇಷಗಿರಿ ಹಾಗೂ ವೆಂಕಟೇಶ ನಿಂಗಪ್ಪ ಆಡೂರ ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ.