‘ನಡೆ ಚೆನ್ನ, ನುಡಿ ಚೆನ್ನ, ಎಲ್ಲಿ ನೋಡಿದಡಲ್ಲಿ ಚೆನ್ನ, ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ. ಸವಿದು ನೋಡಿ ಅಂಬಲಿ ರುಚಿಯಾಯಿತ್ತೆಂದು ಕೂಡಲಸಂಗಮದೇವಂಗೆ ಬೇಕೆಂದು ಕೈದೆಗೆದ ನಮ್ಮ ಚೆನ್ನ’ ಎಂದು ಬಸವಣ್ಣನವರು ಮಾದಾರ ಚನ್ನಯ್ಯರ ಮನೆಗೆ ಹೋಗಿ ಅಂಬಲಿ ಕುಡಿದು ಆಹಾರ, ಆರೋಗ್ಯ, ಸಮಾನತೆಯ ಸಂದೇಶ ಸಾರಿದ್ದರು. ಇದು, ಕೇವಲ ಆಹಾರವಲ್ಲದೇ ‘ಸ್ವಾಸ್ಥ್ಯ’ದ ಸಂಕೇತವಾಗಿತ್ತು’ ಎಂದು ಬಸವಶಾಂತಲಿಂಗ ಸ್ವಾಮೀಜಿ ಬಣ್ಣಿಸಿದರು.