<p><strong>ಹಾನಗಲ್</strong>: ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡುವ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ರಾಜ್ಯ ಸರ್ಕಾರ ಆನ್ಲೈನ್ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಇದಕ್ಕೆ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.</p>.<p>ದೊಡ್ಡ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಇಲಾಖೆಯಿಂದಲೇ ಸಹಕಾರಿ ಸಂಘಗಳಿಗೆ ಗುತ್ತಿಗೆ ಮೂಲಕ ಅವಕಾಶ ನೀಡಲಾಗುತ್ತಿತ್ತು. ಈಗ, ಇ–ಟೆಂಡರ್ ಮೂಲಕ ಕೆರೆಗಳನ್ನು ಐದು ವರ್ಷದ ಅವಧಿಗೆ ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ.</p>.<p>ಹಾನಗಲ್ ತಾಲ್ಲೂಕಿನಲ್ಲಿ 9 ಮೀನುಗಾರಿಕೆ ಸಹಕಾರಿ ಸಂಘಗಳಿದ್ದು, ಸರ್ಕಾರದ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದಾರೆ.</p>.<p>ತಾಲ್ಲೂಕಿನಲ್ಲಿ ಸುಮಾರು 700 ಕೆರೆಗಳಿವೆ. ಸಣ್ಣ ಪ್ರಮಾಣದ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಸಂಬಂಧಿತ ಗ್ರಾಮ ಪಂಚಾಯಿತಿ ಆಡಳಿತ ಅನುಮತಿ ನೀಡುತ್ತದೆ. ದೊಡ್ಡ ಕೆರೆಗಳ ಮೀನು ಕೃಷಿಯ ಚಟುವಟಿಕೆಗಳನ್ನು ಮೀನುಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತದೆ.</p>.<p>ಮೀನುಗಾರಿಕೆ ಮಹಾ ಮಂಡಳದ ಮಾಜಿ ನಿರ್ದೇಶಕರಾದ ಅಕ್ಕಿಆಲೂರಿನ ಸತ್ತಾರ್ಸಾಬ್ ಅರಳೇಶ್ವರ, ‘ದೊಡ್ಡ ಕೆರೆಗಳು, ಹಣವಂತರ ಹಿಡಿತಕ್ಕೆ ಸಿಗಲಿವೆ. ಇದರಿಂದ ಬಡ ಮೀನುಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸಂಘಗಳಿಗೆ ಮೀಸಲಾದ ಕೆರೆಗಳನ್ನು ಹೊರತುಪಡಿಸಿ ಬೇರೆ ಕೆರೆಗಳನ್ನು ಇ–ಟೆಂಡರ್ ವ್ಯಾಪ್ತಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.</p>.<p>ಹಾನಗಲ್ನ ವಿಶಾಲ ಕರ್ನಾಟಕ ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ಮುನೀರ್ಅಹ್ಮದ್ ಪಾಳಾ, ‘ಸರ್ಕಾರದ ಹೊಸ ಆದೇಶ, ಸಹಕಾರಿ ಸಂಘಗಳಿಗೆ ಮಾರಕವಾಗಿದೆ. ಗುತ್ತಿಗೆ ಮೊತ್ತವನ್ನು ಹೆಚ್ಚಿಸಿದರೆ ನಾವು ಒಪುತ್ತೇವೆ. ಆದರೆ, ಇ–ಟೆಂಡರ್ ಬೇಡ’ ಎಂದು ಆಗ್ರಹಿಸಿದರು. </p>.<div><blockquote>ಈಗ ಎರಡು ವರ್ಷದಿಂದ ಬಾಳಂಬೀಡ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆಗಳು ಚಾಲನೆಗೊಂಡಿವೆ. ಹೀಗಾಗಿ ಬಹುತೇಕ ಕೆರೆಗಳು ಏತ ನೀರಾವರಿ ವ್ಯಾಪ್ತಿಗೆ ಬರುತ್ತಿವೆ.</blockquote><span class="attribution">– ಎಸ್.ಪಿ.ದಂದೂರ, ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ</span></div>.<p><strong>‘ಇಲಾಖೆ ವ್ಯಾಪ್ತಿಯಲ್ಲಿ 81 ಕೆರೆಗಳು’</strong></p><p>‘ಹಾನಗಲ್ ತಾಲ್ಲೂಕಿನಲ್ಲಿ ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ 81 ಕೆರೆಗಳಿವೆ. 9 ಮೀನುಗಾರಿಕೆ ಸಹಕಾರಿ ಸಂಘಗಳಿವೆ. ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಪಿ.ದಂದೂರ ತಿಳಿಸಿದ್ದಾರೆ.</p><p>‘ಸರ್ಕಾರದ ಆದೇಶದ ಪ್ರಕಾರ ಸಂಘಗಳು ಕೂಡ ಏತ ನೀರಾವರಿ ವ್ಯಾಪ್ತಿಯ ಕೆರೆಗಳ ಗುತ್ತಿಗೆ ಪಡೆಯಲು ಇ–ಟೆಂಡರ್ನಲ್ಲಿ ಪೈಪೋಟಿ ನಡೆಸಬೇಕು. ಇ–ಟೆಂಡರ್ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ’ ಎಂದರು. ‘ಪ್ರತಿ ಸಹಕಾರಿ ಸಂಘಕ್ಕೆ ಆ ಭಾಗದ 3 ದೊಡ್ಡ ಕೆರೆಗಳನ್ನು 5 ವರ್ಷದ ಅವಧಿಗೆ ಗುತ್ತಿಗೆ ನೀಡುವ ವ್ಯವಸ್ಥೆಯಿತ್ತು. ಒಂದು ಹೆಕ್ಟೇರ್ ನೀರು ನಿಲ್ಲುವ ಜಲ ವಿಸ್ತೀರ್ಣಕ್ಕೆ ₹ 300 ದರ ನಿಗದಿಯಾಗಿತ್ತು. ಪ್ರತಿ ವರ್ಷ ಮೀನುಗಾರಿಕೆ ಇಲಾಖೆಯಲ್ಲಿ ಶೇ 5ರಷ್ಟು ದರ ಹೆಚ್ಚಿಸಿ ಗುತ್ತಿಗೆಯ ನವೀಕರಣ ಮಾಡಲಾಗುತ್ತಿತ್ತು. ಈಗ ಸರ್ಕಾರದ ಆದೇಶದಂತೆ ಆನ್ಲೈನ್ ಟೆಂಡರ್ನಲ್ಲಿ ಯಾರಾದರೂ ಭಾಗವಹಿಸಿ ಕೆರೆ ಗುತ್ತಿಗೆ ಪಡೆಯಬಹುದು. ಸರ್ಕಾರದ ಕನಿಷ್ಟ ದರ ಪ್ರತಿ ಹೆಕ್ಟೇರ್ಗೆ ₹1500 ನಿಗದಿ ಮಾಡಲಾಗಿದೆ’ ಎಂದು ತಾಲ್ಲೂಕಿನ ಬೊಮ್ಮನಹಳ್ಳಿಯ ಭವಾನಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ರಜಪೂತ ಹೇಳಿದರು.</p>.<p><strong>‘ಆದಾಯ ಹೆಚ್ಚಳಕ್ಕೆ ಆದೇಶ‘</strong></p><p>‘ಕೆರೆಗಳ ಮೂಲಕ ನಡೆಯುವ ಮೀನುಗಾರಿಕೆಯಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದೆ. ಆದರೆ ಸರ್ಕಾರಕ್ಕೆ ಬರುವ ಆದಾಯ ಮಾತ್ರ ಕಡಿಮೆಯಿದೆ. ಆದಾಯ ಹೆಚ್ಚಳಕ್ಕಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ’ ಎಂದು ಮೀನುಗಾರಿಕೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಹೇಳಿದರು.</p><p>‘ಹಾವೇರಿಯ ಹೆಗ್ಗೇರಿ ಕೆರೆಯಲ್ಲಿ ಮೀನುಗಾರಿಕೆ ಮಾಡಲು ಕೆರಿಮತ್ತಿಹಳ್ಳಿಯಲ್ಲಿರುವ ಸಂಘಕ್ಕೆ ವಾರ್ಷಿಕ ₹ 18 ಸಾವಿರಕ್ಕೆ ಗುತ್ತಿಗೆ ನೀಡಲಾಗಿತ್ತು. ಕಡಿಮೆ ಮೊತ್ತದ ಗುತ್ತಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸಹ ಆಶ್ಚರ್ಯ ವ್ಯಕ್ತಪಡಿಸಿದ್ದರು. ಜೊತೆಗೆ ದೊಡ್ಡ ಕೆರೆಯ ದರವನ್ನು ಹೆಚ್ಚಿಸಿ ಇಲಾಖೆಗೆ ಆದಾಯ ತರುವಂತೆಯೂ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು’ ಎಂದರು.</p><p>‘ದೊಡ್ಡ ಕೆರೆಯಲ್ಲಿ ಮೀನು ಕೃಷಿ ಮಾಡುವುದರಿಂದ ಲಾಭವಿದೆ. ಹಳೇ ದರದಲ್ಲಿ ಗುತ್ತಿಗೆ ನೀಡುವುದರಿಂದ ನಷ್ಟವೆಂಬುದು ಪರಿಶೀಲನೆಯಿಂದ ಗೊತ್ತಾಗಿದೆ. ಇದೇ ಕಾರಣಕ್ಕೆ ಇ–ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್</strong>: ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡುವ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ರಾಜ್ಯ ಸರ್ಕಾರ ಆನ್ಲೈನ್ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಇದಕ್ಕೆ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.</p>.<p>ದೊಡ್ಡ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಇಲಾಖೆಯಿಂದಲೇ ಸಹಕಾರಿ ಸಂಘಗಳಿಗೆ ಗುತ್ತಿಗೆ ಮೂಲಕ ಅವಕಾಶ ನೀಡಲಾಗುತ್ತಿತ್ತು. ಈಗ, ಇ–ಟೆಂಡರ್ ಮೂಲಕ ಕೆರೆಗಳನ್ನು ಐದು ವರ್ಷದ ಅವಧಿಗೆ ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭಗೊಳ್ಳಲಿದೆ.</p>.<p>ಹಾನಗಲ್ ತಾಲ್ಲೂಕಿನಲ್ಲಿ 9 ಮೀನುಗಾರಿಕೆ ಸಹಕಾರಿ ಸಂಘಗಳಿದ್ದು, ಸರ್ಕಾರದ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದಾರೆ.</p>.<p>ತಾಲ್ಲೂಕಿನಲ್ಲಿ ಸುಮಾರು 700 ಕೆರೆಗಳಿವೆ. ಸಣ್ಣ ಪ್ರಮಾಣದ ಕೆರೆಗಳಲ್ಲಿ ಮೀನುಗಾರಿಕೆ ನಡೆಸಲು ಸಂಬಂಧಿತ ಗ್ರಾಮ ಪಂಚಾಯಿತಿ ಆಡಳಿತ ಅನುಮತಿ ನೀಡುತ್ತದೆ. ದೊಡ್ಡ ಕೆರೆಗಳ ಮೀನು ಕೃಷಿಯ ಚಟುವಟಿಕೆಗಳನ್ನು ಮೀನುಗಾರಿಕೆ ಇಲಾಖೆ ನಿರ್ವಹಣೆ ಮಾಡುತ್ತದೆ.</p>.<p>ಮೀನುಗಾರಿಕೆ ಮಹಾ ಮಂಡಳದ ಮಾಜಿ ನಿರ್ದೇಶಕರಾದ ಅಕ್ಕಿಆಲೂರಿನ ಸತ್ತಾರ್ಸಾಬ್ ಅರಳೇಶ್ವರ, ‘ದೊಡ್ಡ ಕೆರೆಗಳು, ಹಣವಂತರ ಹಿಡಿತಕ್ಕೆ ಸಿಗಲಿವೆ. ಇದರಿಂದ ಬಡ ಮೀನುಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸಂಘಗಳಿಗೆ ಮೀಸಲಾದ ಕೆರೆಗಳನ್ನು ಹೊರತುಪಡಿಸಿ ಬೇರೆ ಕೆರೆಗಳನ್ನು ಇ–ಟೆಂಡರ್ ವ್ಯಾಪ್ತಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.</p>.<p>ಹಾನಗಲ್ನ ವಿಶಾಲ ಕರ್ನಾಟಕ ಮೀನುಗಾರಿಕೆ ಸಹಕಾರಿ ಸಂಘದ ಅಧ್ಯಕ್ಷ ಮುನೀರ್ಅಹ್ಮದ್ ಪಾಳಾ, ‘ಸರ್ಕಾರದ ಹೊಸ ಆದೇಶ, ಸಹಕಾರಿ ಸಂಘಗಳಿಗೆ ಮಾರಕವಾಗಿದೆ. ಗುತ್ತಿಗೆ ಮೊತ್ತವನ್ನು ಹೆಚ್ಚಿಸಿದರೆ ನಾವು ಒಪುತ್ತೇವೆ. ಆದರೆ, ಇ–ಟೆಂಡರ್ ಬೇಡ’ ಎಂದು ಆಗ್ರಹಿಸಿದರು. </p>.<div><blockquote>ಈಗ ಎರಡು ವರ್ಷದಿಂದ ಬಾಳಂಬೀಡ ಮತ್ತು ಹಿರೇಕಾಂಶಿ ಏತ ನೀರಾವರಿ ಯೋಜನೆಗಳು ಚಾಲನೆಗೊಂಡಿವೆ. ಹೀಗಾಗಿ ಬಹುತೇಕ ಕೆರೆಗಳು ಏತ ನೀರಾವರಿ ವ್ಯಾಪ್ತಿಗೆ ಬರುತ್ತಿವೆ.</blockquote><span class="attribution">– ಎಸ್.ಪಿ.ದಂದೂರ, ಸಹಾಯಕ ನಿರ್ದೇಶಕ ಮೀನುಗಾರಿಕೆ ಇಲಾಖೆ</span></div>.<p><strong>‘ಇಲಾಖೆ ವ್ಯಾಪ್ತಿಯಲ್ಲಿ 81 ಕೆರೆಗಳು’</strong></p><p>‘ಹಾನಗಲ್ ತಾಲ್ಲೂಕಿನಲ್ಲಿ ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ 81 ಕೆರೆಗಳಿವೆ. 9 ಮೀನುಗಾರಿಕೆ ಸಹಕಾರಿ ಸಂಘಗಳಿವೆ. ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಪಿ.ದಂದೂರ ತಿಳಿಸಿದ್ದಾರೆ.</p><p>‘ಸರ್ಕಾರದ ಆದೇಶದ ಪ್ರಕಾರ ಸಂಘಗಳು ಕೂಡ ಏತ ನೀರಾವರಿ ವ್ಯಾಪ್ತಿಯ ಕೆರೆಗಳ ಗುತ್ತಿಗೆ ಪಡೆಯಲು ಇ–ಟೆಂಡರ್ನಲ್ಲಿ ಪೈಪೋಟಿ ನಡೆಸಬೇಕು. ಇ–ಟೆಂಡರ್ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ’ ಎಂದರು. ‘ಪ್ರತಿ ಸಹಕಾರಿ ಸಂಘಕ್ಕೆ ಆ ಭಾಗದ 3 ದೊಡ್ಡ ಕೆರೆಗಳನ್ನು 5 ವರ್ಷದ ಅವಧಿಗೆ ಗುತ್ತಿಗೆ ನೀಡುವ ವ್ಯವಸ್ಥೆಯಿತ್ತು. ಒಂದು ಹೆಕ್ಟೇರ್ ನೀರು ನಿಲ್ಲುವ ಜಲ ವಿಸ್ತೀರ್ಣಕ್ಕೆ ₹ 300 ದರ ನಿಗದಿಯಾಗಿತ್ತು. ಪ್ರತಿ ವರ್ಷ ಮೀನುಗಾರಿಕೆ ಇಲಾಖೆಯಲ್ಲಿ ಶೇ 5ರಷ್ಟು ದರ ಹೆಚ್ಚಿಸಿ ಗುತ್ತಿಗೆಯ ನವೀಕರಣ ಮಾಡಲಾಗುತ್ತಿತ್ತು. ಈಗ ಸರ್ಕಾರದ ಆದೇಶದಂತೆ ಆನ್ಲೈನ್ ಟೆಂಡರ್ನಲ್ಲಿ ಯಾರಾದರೂ ಭಾಗವಹಿಸಿ ಕೆರೆ ಗುತ್ತಿಗೆ ಪಡೆಯಬಹುದು. ಸರ್ಕಾರದ ಕನಿಷ್ಟ ದರ ಪ್ರತಿ ಹೆಕ್ಟೇರ್ಗೆ ₹1500 ನಿಗದಿ ಮಾಡಲಾಗಿದೆ’ ಎಂದು ತಾಲ್ಲೂಕಿನ ಬೊಮ್ಮನಹಳ್ಳಿಯ ಭವಾನಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸುಭಾಸ ರಜಪೂತ ಹೇಳಿದರು.</p>.<p><strong>‘ಆದಾಯ ಹೆಚ್ಚಳಕ್ಕೆ ಆದೇಶ‘</strong></p><p>‘ಕೆರೆಗಳ ಮೂಲಕ ನಡೆಯುವ ಮೀನುಗಾರಿಕೆಯಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದೆ. ಆದರೆ ಸರ್ಕಾರಕ್ಕೆ ಬರುವ ಆದಾಯ ಮಾತ್ರ ಕಡಿಮೆಯಿದೆ. ಆದಾಯ ಹೆಚ್ಚಳಕ್ಕಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ’ ಎಂದು ಮೀನುಗಾರಿಕೆ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಹೇಳಿದರು.</p><p>‘ಹಾವೇರಿಯ ಹೆಗ್ಗೇರಿ ಕೆರೆಯಲ್ಲಿ ಮೀನುಗಾರಿಕೆ ಮಾಡಲು ಕೆರಿಮತ್ತಿಹಳ್ಳಿಯಲ್ಲಿರುವ ಸಂಘಕ್ಕೆ ವಾರ್ಷಿಕ ₹ 18 ಸಾವಿರಕ್ಕೆ ಗುತ್ತಿಗೆ ನೀಡಲಾಗಿತ್ತು. ಕಡಿಮೆ ಮೊತ್ತದ ಗುತ್ತಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸಹ ಆಶ್ಚರ್ಯ ವ್ಯಕ್ತಪಡಿಸಿದ್ದರು. ಜೊತೆಗೆ ದೊಡ್ಡ ಕೆರೆಯ ದರವನ್ನು ಹೆಚ್ಚಿಸಿ ಇಲಾಖೆಗೆ ಆದಾಯ ತರುವಂತೆಯೂ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದರು’ ಎಂದರು.</p><p>‘ದೊಡ್ಡ ಕೆರೆಯಲ್ಲಿ ಮೀನು ಕೃಷಿ ಮಾಡುವುದರಿಂದ ಲಾಭವಿದೆ. ಹಳೇ ದರದಲ್ಲಿ ಗುತ್ತಿಗೆ ನೀಡುವುದರಿಂದ ನಷ್ಟವೆಂಬುದು ಪರಿಶೀಲನೆಯಿಂದ ಗೊತ್ತಾಗಿದೆ. ಇದೇ ಕಾರಣಕ್ಕೆ ಇ–ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>