ಗುತ್ತಲ:ಇಲ್ಲಿಗೆ ಸಮೀಪದ ನೆಗಳೂರ ಗ್ರಾಮದ ಕೃಷ್ಣರಡ್ಡಿ ಚಪ್ಪರದ ತನ್ನ 5 ಎಕರೆ ಪ್ರದೇಶದಲ್ಲಿ ಬೆಳೆದ ದಾಳಿಂಬೆ ಬೆಳೆಯು ವಿಪರೀತ ಮಳೆ ಸುರಿದ ಹಿನ್ನೆಲೆಯಲ್ಲಿ ರೋಗಕ್ಕೆ ತುತ್ತಾಗಿ ನಾಶವಾಯಿತು.ಹಲವು ಬಾರಿ ಔಷಧಿ ಸಿಂಪಡಿಸಿದರೂ ರೋಗ ಹತೋಟಿಗೆ ಬಾರದ ಕಾರಣ ಕೃಷ್ಣರಡ್ಡಿ ಬೆಳೆಯನ್ನು ಬುಧವಾರಜೆಸಿಬಿ ಮೂಲಕ ನಾಶಪಡಿಸಿದರು.