<p><strong>ರಾಣೆಬೆನ್ನೂರು:</strong> 12ನೇ ಶತಮಾನದಲ್ಲಿ ಸಮಾಜ ಸುಧಾರಣೆಗಾಗಿ ಬಸವಾದಿ ಶರಣರು ರೂಪಿಸಿದ್ದ ಅನುಭವ ಮಂಟಪ, ಇಂದಿಗೂ ಪ್ರಸ್ತುತ. ಇಂಥ ಅನುಭವ ಮಂಟಪವನ್ನು ಮರುಸೃಷ್ಟಿ ಮಾಡಿರುವ ರಾಣೆಬೆನ್ನೂರಿನ ರಾಜರಾಜೇಶ್ವರಿ ಯುವಕ ಮಂಡಳಿ ಪದಾಧಿಕಾರಿಗಳು, ಅದೇ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.</p>.<p>ಜಗತ್ತಿನ ಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪದ ದರುಶನ ಮತ್ತು ಬಸವಣ್ಣನವರು ವಿರಾಜಮಾನವಾಗಿ ಶೋಭಿಸುತ್ತಿರುವ ಬೃಹತ್ ಗಣೇಶನ ಮೂರ್ತಿ ಇಲ್ಲಿದೆ.</p>.<p>ಕಣ್ಮನ ಸೆಳೆಯುವ ವೇದಿಕೆಯಲ್ಲಿ ಜಾತ್ಯತೀತ ಸಮ ಸಮಾಜದ ಅನಾವರಣ ಮಾಡಲಾಗಿದೆ. ಬಸವಣ್ಣನವರ ಆರಂಭಿಕ ಜೀವನ, ಅನುಭವ ಮಂಟಪ, ಕಾಯಕವೇ ಕೈಲಾಸ, ತತ್ವಶಾಸ್ತ್ರ, ಪರಂಪರೆ ಮತ್ತು ಪ್ರಭಾವ, ಸಾಮಾಜಿಕ ಸುಧಾರಣೆ ಬಗ್ಗೆ ದೃಶ್ಯಗಳನ್ನು ತೆರೆದಿಡಲಾಗಿದೆ.</p>.<p>ಅನುಭವ ಮಂಟಪ ವೀಕ್ಷಣೆಗೆ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ವಿಶ್ವಮಾನವ ಸಂದೇಶ ಸಾರಿದ, ಎಲ್ಲ ವರ್ಗದ ಜನ ಸಮುದಾಯವನ್ನು ಪರಿಗಣಿಸಿ ಲಿಂಗ-ವರ್ಗ-ವರ್ಣ ಬೇಧವಿಲ್ಲದ ಮನುಷ್ಯ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಶರಣರ ಚಿಂತನೆಗಳು ಇಲ್ಲಿ ಕಾಣಸಿಗುತ್ತಿವೆ.</p>.<p>ಜಗಜ್ಯೋತಿ ಬಸವಣ್ಣನವರು, ವಿಶ್ವಕ್ಕೆ ಮಾದರಿ. ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದವರು. ಅವರ ಅನುಭವ ಮಂಟಪದ ಕಾರ್ಯವೈಖರಿಗಳನ್ನು ಇಲ್ಲಿ ಕಾಣಬಹುದು. ಅನುಭವ ಮಂಟಪದ ಪ್ರತಿಯೊಂದು ಇತಿಹಾಸವೂ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿದೆ. </p>.<p>ವಿಶ್ವಗುರು ಬಸವಣ್ಣ, ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಅಕ್ಕಮಹಾದೇವಿ, ಮಾದಾರ ಚನ್ನಯ್ಯ, ನೂಲಿ ಚಂದಯ್ಯ, ಆಯ್ದಕ್ಕಿ ಲಕ್ಕಮ್ಮ, ಬೇಡರ ದಾಸಿಮಯ್ಯ ಸೇರಿದಂತೆ ಎಲ್ಲ ಶರಣರ ಪ್ರತಿಕೃತಿಗಳು ಈ ಅನುಭವ ಮಂಟಪದಲ್ಲಿ ರಾರಾಜಿಸುತ್ತಿವೆ.</p>.<p><strong>19ರ ವರೆಗೆ ಪ್ರದರ್ಶನ:</strong></p><p> ‘ಸೆ. 1ರಿಂದ ಪ್ರದರ್ಶನ ಆರಂಭವಾಗಿದ್ದು 19ರ ವರೆಗೂ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಗಣೇಶ ಪ್ರತಿಷ್ಠಾಪನೆಯ ಪ್ರದರ್ಶನ ಇರುತ್ತದೆ. ಕುಪ್ಪೇಲೂರಿನ ಕಲಾವಿದರು 20 ದಿನಗಳ ಕಾಲ ಮಣ್ಣಿನ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಮೂರ್ತಿಗಳಿಗೆ ತಕ್ಕಂತೆ ವೇದಿಕೆ ಅಲಂಕಾರ ಮಾಡಲಾಗಿದೆ’ ಎಂದು ಸಮಿತಿ ಅಧ್ಯಕ್ಷ ಸಂತೋಷ ತೆವರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು:</strong> 12ನೇ ಶತಮಾನದಲ್ಲಿ ಸಮಾಜ ಸುಧಾರಣೆಗಾಗಿ ಬಸವಾದಿ ಶರಣರು ರೂಪಿಸಿದ್ದ ಅನುಭವ ಮಂಟಪ, ಇಂದಿಗೂ ಪ್ರಸ್ತುತ. ಇಂಥ ಅನುಭವ ಮಂಟಪವನ್ನು ಮರುಸೃಷ್ಟಿ ಮಾಡಿರುವ ರಾಣೆಬೆನ್ನೂರಿನ ರಾಜರಾಜೇಶ್ವರಿ ಯುವಕ ಮಂಡಳಿ ಪದಾಧಿಕಾರಿಗಳು, ಅದೇ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ.</p>.<p>ಜಗತ್ತಿನ ಮೊದಲ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪದ ದರುಶನ ಮತ್ತು ಬಸವಣ್ಣನವರು ವಿರಾಜಮಾನವಾಗಿ ಶೋಭಿಸುತ್ತಿರುವ ಬೃಹತ್ ಗಣೇಶನ ಮೂರ್ತಿ ಇಲ್ಲಿದೆ.</p>.<p>ಕಣ್ಮನ ಸೆಳೆಯುವ ವೇದಿಕೆಯಲ್ಲಿ ಜಾತ್ಯತೀತ ಸಮ ಸಮಾಜದ ಅನಾವರಣ ಮಾಡಲಾಗಿದೆ. ಬಸವಣ್ಣನವರ ಆರಂಭಿಕ ಜೀವನ, ಅನುಭವ ಮಂಟಪ, ಕಾಯಕವೇ ಕೈಲಾಸ, ತತ್ವಶಾಸ್ತ್ರ, ಪರಂಪರೆ ಮತ್ತು ಪ್ರಭಾವ, ಸಾಮಾಜಿಕ ಸುಧಾರಣೆ ಬಗ್ಗೆ ದೃಶ್ಯಗಳನ್ನು ತೆರೆದಿಡಲಾಗಿದೆ.</p>.<p>ಅನುಭವ ಮಂಟಪ ವೀಕ್ಷಣೆಗೆ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ವಿಶ್ವಮಾನವ ಸಂದೇಶ ಸಾರಿದ, ಎಲ್ಲ ವರ್ಗದ ಜನ ಸಮುದಾಯವನ್ನು ಪರಿಗಣಿಸಿ ಲಿಂಗ-ವರ್ಗ-ವರ್ಣ ಬೇಧವಿಲ್ಲದ ಮನುಷ್ಯ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಶರಣರ ಚಿಂತನೆಗಳು ಇಲ್ಲಿ ಕಾಣಸಿಗುತ್ತಿವೆ.</p>.<p>ಜಗಜ್ಯೋತಿ ಬಸವಣ್ಣನವರು, ವಿಶ್ವಕ್ಕೆ ಮಾದರಿ. ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿದವರು. ಅವರ ಅನುಭವ ಮಂಟಪದ ಕಾರ್ಯವೈಖರಿಗಳನ್ನು ಇಲ್ಲಿ ಕಾಣಬಹುದು. ಅನುಭವ ಮಂಟಪದ ಪ್ರತಿಯೊಂದು ಇತಿಹಾಸವೂ ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿದೆ. </p>.<p>ವಿಶ್ವಗುರು ಬಸವಣ್ಣ, ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಅಕ್ಕಮಹಾದೇವಿ, ಮಾದಾರ ಚನ್ನಯ್ಯ, ನೂಲಿ ಚಂದಯ್ಯ, ಆಯ್ದಕ್ಕಿ ಲಕ್ಕಮ್ಮ, ಬೇಡರ ದಾಸಿಮಯ್ಯ ಸೇರಿದಂತೆ ಎಲ್ಲ ಶರಣರ ಪ್ರತಿಕೃತಿಗಳು ಈ ಅನುಭವ ಮಂಟಪದಲ್ಲಿ ರಾರಾಜಿಸುತ್ತಿವೆ.</p>.<p><strong>19ರ ವರೆಗೆ ಪ್ರದರ್ಶನ:</strong></p><p> ‘ಸೆ. 1ರಿಂದ ಪ್ರದರ್ಶನ ಆರಂಭವಾಗಿದ್ದು 19ರ ವರೆಗೂ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಗಣೇಶ ಪ್ರತಿಷ್ಠಾಪನೆಯ ಪ್ರದರ್ಶನ ಇರುತ್ತದೆ. ಕುಪ್ಪೇಲೂರಿನ ಕಲಾವಿದರು 20 ದಿನಗಳ ಕಾಲ ಮಣ್ಣಿನ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಮೂರ್ತಿಗಳಿಗೆ ತಕ್ಕಂತೆ ವೇದಿಕೆ ಅಲಂಕಾರ ಮಾಡಲಾಗಿದೆ’ ಎಂದು ಸಮಿತಿ ಅಧ್ಯಕ್ಷ ಸಂತೋಷ ತೆವರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>