‘ಪೋಷಕರಿಗೂ ಹಣದ ಆಮಿಷ; ಆರೋಪ’
ಬಾಲಕಿ ವಂದನಾ ಅವರ ಪೋಷಕರನ್ನು ಸಂಪರ್ಕಿಸಿದ್ದ ಕೆಲವರು ಅವರಿಗೂ ಹಣದ ಆಮಿಷವೊಡ್ಡಿದ್ದರೆಂಬ ಆರೋಪವಿದೆ. ಆದರೆ ಪೋಷಕರು ಹಣ ಪಡೆಯಲು ನಿರಾಕರಿಸಿದ್ದಾರೆ. ತಮ್ಮ ಮಗಳ ಸಾವಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ‘ಆಸ್ಪತ್ರೆ ವಿರುದ್ಧ ನೀಡಿರುವ ದೂರು ಹಿಂಪಡೆಯಲು ಕೆಲವರು ಒತ್ತಡ ಹಾಕುತ್ತಿದ್ದಾರೆ. ನಾವು ಅದಕ್ಕೆ ಒಪ್ಪುವುದಿಲ್ಲ. ಮಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಪೋಷಕರ ಸಂಬಂಧಿಕರೊಬ್ಬರು ತಿಳಿಸಿದರು.