<p><strong>ತಿಳವಳ್ಳಿ</strong>:ಇಲ್ಲಿಗೆ ಸಮೀಪದ ಶೇಷಗಿರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಇದೀಗ ಖಾಸಗಿ ಶಾಲೆ ಮೀರಿಸುತ್ತಿದೆ. ಪರಿಸರದ ಮಡಿಲಲ್ಲಿರುವ ಶಾಲೆಗೆ ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ.</p>.<p>ಶಾಲೆ ಆವರಣಕ್ಕೆ 250 ಹೆಚ್ಚಿನ ತೇಗದ ಗಿಡಗಳನ್ನು ನೆಡಲಾಗಿದೆ. ನಿರಂತರ ನೀರಿನ ವ್ಯವಸ್ಥೆ, ಹಸಿರು ಹುಲ್ಲು, ಕೈತೋಟ, ಶಾಲೆ ಕಟ್ಟಡಕ್ಕೆ ಸುಣ್ಣ ಬಣ್ಣ, ಸುಸಜ್ಜಿತ ಊಟದ ಕೊಠಡಿಹೀಗೆ ಹಲವು ಬದಲಾವಣೆ ಶಾಲೆಯ ಅಂದವನ್ನು ಹೆಚ್ಚಿಸಿದೆ.</p>.<p>ದಿವಂಗತ ಜಿ.ಆರ್. ದೇಸಾಯಿ ಅವರ ಪ್ರಯತ್ನದ ಫಲವಾಗಿ 1984ರಲ್ಲಿ ಆರಂಭವಾದ ಪ್ರೌಢ ಶಾಲೆ ಇಂದಿಗೆ 36 ವರ್ಷಗಳನ್ನು ಪೂರೈಸಿದೆ. ಶಾಲೆಗೆ 5 ಎಕರೆ ಭೂಮಿಯನ್ನು ಜಿ.ಆರ್. ದೇಸಾಯಿಯವರೆ ದಾನವಾಗಿ ನೀಡಿದ್ದಾರೆ. ಇಲ್ಲಿ ಸುಮಾರು 146 ವಿದ್ಯಾರ್ಥಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.</p>.<p>ಸರ್ಕಾರದಿಂದ ಶಾಲೆಗೆ ಬರುವ ಅನುದಾನದಲ್ಲಿಮೂರು ತರಗತಿಗಳಿಗೆ ಸುಮಾರು ₹1.25 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ಕ್ಲಾಸ್ ಆರಂಭಿಸಲಾಗಿದೆ. ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುವ ಜತೆಗೆ ದಾಖಲಾತಿಯನ್ನು ಹೆಚ್ಚಿಸಿದೆ. ಮಕ್ಕಳ ಸುರಕ್ಷತಾ ದೃಷ್ಟಿಯಿಂದಪ್ರತಿ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಕ್ಕಳಿಗಾಗಿ ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾ ಮೈದಾನ ಹಾಗೂ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಶ್ರೀಪಾದ ಭಟ್ಟ.</p>.<p>2011-12 ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ ಮತ್ತು ಶಾಲಾ ವಿಶೇಷ ಅನುದಾನದಲ್ಲಿ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದೆ. ಶಾಲಾ ಗೋಡೆಗಳ ಮೇಲೆ ಸುಂದರವಾದ ಚಿತ್ರಗಳನ್ನು ಹಾಗೂ ನುಡಿ ಮುತ್ತುಗಳನ್ನು ಬರೆಯಲಾಗಿದೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎನ್ನುತ್ತಾರೆ ಶಿಕ್ಷಕ ಯು.ವಿ.ನಾಯಕ.</p>.<p>ಶಾಲೆಯಲ್ಲಿ ಪಠ್ಯೇತರಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದ್ದು, ಹಿಂದಿನ ವರ್ಷ ನಡೆದ ಕಲಿಕೋತ್ಸವದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ನಾಟಕ ಸ್ಪರ್ಧೆಯಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ್ದರು. ಈ ಬಾರಿ 2019-20ನೇ ಸಾಲಿನಕ್ರೀಡಾ ಕೂಟದಲ್ಲಿ ಉದ್ದ ಜಿಗಿತ ಸ್ಪರ್ಧೆಯಲ್ಲಿ ಶ್ವೇತಾ ಹಾವಣಗಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾಳೆ ಎಂದು ಹೆಮ್ಮೆಯಿಂದ ಶಿಕ್ಷಕರು ಹೇಳಿಕೊಳ್ಳುತ್ತಾರೆ.</p>.<p class="Subhead"><strong>ಶಾಲೆಯಲ್ಲೆ ಮಕ್ಕಳಿಗೆ ಅಭ್ಯಾಸ!:</strong>ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸದೆ ರಾತ್ರಿ ವೇಳೆ ಶಾಲೆಯಲ್ಲಿ ಇರಿಸಿಕೊಂಡು ಶಿಕ್ಷರು ಓದಿಸುತ್ತಾರೆ. ಇದರ ಫಲವಾಗಿ 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಸಿಂಧೂ ಹಾವೇರಿ 98.72% ಅಂಕ ಪಡೆದು ರಾಜ್ಯಕ್ಕೆ 9ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಳವಳ್ಳಿ</strong>:ಇಲ್ಲಿಗೆ ಸಮೀಪದ ಶೇಷಗಿರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಇದೀಗ ಖಾಸಗಿ ಶಾಲೆ ಮೀರಿಸುತ್ತಿದೆ. ಪರಿಸರದ ಮಡಿಲಲ್ಲಿರುವ ಶಾಲೆಗೆ ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ.</p>.<p>ಶಾಲೆ ಆವರಣಕ್ಕೆ 250 ಹೆಚ್ಚಿನ ತೇಗದ ಗಿಡಗಳನ್ನು ನೆಡಲಾಗಿದೆ. ನಿರಂತರ ನೀರಿನ ವ್ಯವಸ್ಥೆ, ಹಸಿರು ಹುಲ್ಲು, ಕೈತೋಟ, ಶಾಲೆ ಕಟ್ಟಡಕ್ಕೆ ಸುಣ್ಣ ಬಣ್ಣ, ಸುಸಜ್ಜಿತ ಊಟದ ಕೊಠಡಿಹೀಗೆ ಹಲವು ಬದಲಾವಣೆ ಶಾಲೆಯ ಅಂದವನ್ನು ಹೆಚ್ಚಿಸಿದೆ.</p>.<p>ದಿವಂಗತ ಜಿ.ಆರ್. ದೇಸಾಯಿ ಅವರ ಪ್ರಯತ್ನದ ಫಲವಾಗಿ 1984ರಲ್ಲಿ ಆರಂಭವಾದ ಪ್ರೌಢ ಶಾಲೆ ಇಂದಿಗೆ 36 ವರ್ಷಗಳನ್ನು ಪೂರೈಸಿದೆ. ಶಾಲೆಗೆ 5 ಎಕರೆ ಭೂಮಿಯನ್ನು ಜಿ.ಆರ್. ದೇಸಾಯಿಯವರೆ ದಾನವಾಗಿ ನೀಡಿದ್ದಾರೆ. ಇಲ್ಲಿ ಸುಮಾರು 146 ವಿದ್ಯಾರ್ಥಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.</p>.<p>ಸರ್ಕಾರದಿಂದ ಶಾಲೆಗೆ ಬರುವ ಅನುದಾನದಲ್ಲಿಮೂರು ತರಗತಿಗಳಿಗೆ ಸುಮಾರು ₹1.25 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ಕ್ಲಾಸ್ ಆರಂಭಿಸಲಾಗಿದೆ. ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸುವ ಜತೆಗೆ ದಾಖಲಾತಿಯನ್ನು ಹೆಚ್ಚಿಸಿದೆ. ಮಕ್ಕಳ ಸುರಕ್ಷತಾ ದೃಷ್ಟಿಯಿಂದಪ್ರತಿ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಕ್ಕಳಿಗಾಗಿ ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾ ಮೈದಾನ ಹಾಗೂ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಶ್ರೀಪಾದ ಭಟ್ಟ.</p>.<p>2011-12 ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ ಮತ್ತು ಶಾಲಾ ವಿಶೇಷ ಅನುದಾನದಲ್ಲಿ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದೆ. ಶಾಲಾ ಗೋಡೆಗಳ ಮೇಲೆ ಸುಂದರವಾದ ಚಿತ್ರಗಳನ್ನು ಹಾಗೂ ನುಡಿ ಮುತ್ತುಗಳನ್ನು ಬರೆಯಲಾಗಿದೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎನ್ನುತ್ತಾರೆ ಶಿಕ್ಷಕ ಯು.ವಿ.ನಾಯಕ.</p>.<p>ಶಾಲೆಯಲ್ಲಿ ಪಠ್ಯೇತರಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದ್ದು, ಹಿಂದಿನ ವರ್ಷ ನಡೆದ ಕಲಿಕೋತ್ಸವದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ನಾಟಕ ಸ್ಪರ್ಧೆಯಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ್ದರು. ಈ ಬಾರಿ 2019-20ನೇ ಸಾಲಿನಕ್ರೀಡಾ ಕೂಟದಲ್ಲಿ ಉದ್ದ ಜಿಗಿತ ಸ್ಪರ್ಧೆಯಲ್ಲಿ ಶ್ವೇತಾ ಹಾವಣಗಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾಳೆ ಎಂದು ಹೆಮ್ಮೆಯಿಂದ ಶಿಕ್ಷಕರು ಹೇಳಿಕೊಳ್ಳುತ್ತಾರೆ.</p>.<p class="Subhead"><strong>ಶಾಲೆಯಲ್ಲೆ ಮಕ್ಕಳಿಗೆ ಅಭ್ಯಾಸ!:</strong>ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸದೆ ರಾತ್ರಿ ವೇಳೆ ಶಾಲೆಯಲ್ಲಿ ಇರಿಸಿಕೊಂಡು ಶಿಕ್ಷರು ಓದಿಸುತ್ತಾರೆ. ಇದರ ಫಲವಾಗಿ 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಸಿಂಧೂ ಹಾವೇರಿ 98.72% ಅಂಕ ಪಡೆದು ರಾಜ್ಯಕ್ಕೆ 9ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>