<p><strong>ಹಾವೇರಿ</strong>: ಜಿಲ್ಲೆಯ ಸುಕ್ಷೇತ್ರ ದೇವರಗುಡ್ಡದಲ್ಲಿರುವ ಮಾಲತೇಶ ದೇವರ ದೇವಸ್ಥಾನಕ್ಕೆ ಸಂಜೆಯವರೆಗೂ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದಿರುವ ಭಕ್ತರು ದೇವರ ದರ್ಶನಕ್ಕಾಗಿ ಕಾದು ಕುಳಿತಿದ್ದಾರೆ.</p><p>ದೇವಸ್ಥಾನ ಬಳಿಯ ದ್ವಾರಬಾಗಿಲು ಸೇರಿರುವ ಭಕ್ತರು, 'ನಮ್ಮನ್ನು ದೇವಸ್ಥಾನದ ಒಳಗೆ ಬಿಡಿ. ಮಾಲತೇಶ ದೇವರ ದರ್ಶನ ಪಡೆಯುತ್ತೇವೆ. ನಂತರ, ಮೈಲಾರಕ್ಕೆ ಹೋಗಬೇಕು' ಎಂದು ಕೋರುತ್ತಿದ್ದಾರೆ.</p><p>'ಒಳಗೆ ಬಿಡಲು ಆಗುವುದಿಲ್ಲ' ಎನ್ನುತ್ತಿರುವ ಪೊಲೀಸರು, 'ಸಿದ್ದರಾಮಯ್ಯ ಅವರು ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಬರುತ್ತಿದ್ದಾರೆ. ಅವರು ಬಂದು ಹೋಗುವವರೆಗೂ ಯಾರನ್ನೂ ಬಿಡುವುದಿಲ್ಲ' ಎಂದರು.</p><p>ಇದರಿಂದ ಸಿಟ್ಟಾದ ಭಕ್ತರು, 'ನಮ್ಮಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರು ಬರುವುದು ಇನ್ನು ತಡವಾಗಲಿದೆ. ಅವರು ಬರುವುದಕ್ಕೂ 5 ನಿಮಿಷ ಮುನ್ನ ಬೇಕಾದರೆ ದೇವಸ್ಥಾನ ಬಂದ್ ಮಾಡಿ. ಈಗ ಒಳಗೆ ಬಿಡಿ' ಎಂದು ಪುನಃ ಕೋರಿದರು.</p><p>ಇದೇ ಸಂದರ್ಭದಲ್ಲಿ ಭಕ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.</p><p>'ಭಕ್ತರನ್ನು ಅಕ್ರಮವಾಗಿ ತಡೆಗಟ್ಟಿರುವ ಪೊಲೀಸರು, ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಭಕ್ತರು ಹೇಳಿದರು.</p><p><strong>ನೈವೇದ್ಯ ಮಾಡಲು ಆಹಾರ ತಯಾರಿಕೆ:</strong> ದೇವರಗುಡ್ಡಕ್ಕೆ ಬಂದಿರುವ ಭಕ್ತರು, ದೇವರಿಗೆ ನೈವೈದ್ಯ ಮಾಡಲು ಆಹಾರ ಸಿದ್ದಪಡಿಸಿ, ದೇವರಿಗೆ ಅರ್ಪಿಸಲು ಕಾಯುತ್ತಿದ್ದಾರೆ. ಆದರೆ, ಪೊಲೀಸರು ಅವರನ್ನು ಒಳಗೆ ಬಿಡುತ್ತಿಲ್ಲ. </p><p>'ಮುಖ್ಯಮಂತ್ರಿ ಬರುವುದಕ್ಕೂ ಮುನ್ನ 5 ನಿಮಿಷ ಮಾತ್ರ ದೇವಸ್ಥಾನ ಬಂದ್ ಮಾಡಿ. ಈಗ ದೇವಸ್ಥಾನಕ್ಕೆ ಹೋಗಲು ಅವಕಾಶ ನೀಡಿ. ನೈವೇದ್ಯ ಮಾಡುತ್ತೇವೆ' ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ಜಿಲ್ಲೆಯ ಸುಕ್ಷೇತ್ರ ದೇವರಗುಡ್ಡದಲ್ಲಿರುವ ಮಾಲತೇಶ ದೇವರ ದೇವಸ್ಥಾನಕ್ಕೆ ಸಂಜೆಯವರೆಗೂ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದಿರುವ ಭಕ್ತರು ದೇವರ ದರ್ಶನಕ್ಕಾಗಿ ಕಾದು ಕುಳಿತಿದ್ದಾರೆ.</p><p>ದೇವಸ್ಥಾನ ಬಳಿಯ ದ್ವಾರಬಾಗಿಲು ಸೇರಿರುವ ಭಕ್ತರು, 'ನಮ್ಮನ್ನು ದೇವಸ್ಥಾನದ ಒಳಗೆ ಬಿಡಿ. ಮಾಲತೇಶ ದೇವರ ದರ್ಶನ ಪಡೆಯುತ್ತೇವೆ. ನಂತರ, ಮೈಲಾರಕ್ಕೆ ಹೋಗಬೇಕು' ಎಂದು ಕೋರುತ್ತಿದ್ದಾರೆ.</p><p>'ಒಳಗೆ ಬಿಡಲು ಆಗುವುದಿಲ್ಲ' ಎನ್ನುತ್ತಿರುವ ಪೊಲೀಸರು, 'ಸಿದ್ದರಾಮಯ್ಯ ಅವರು ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಬರುತ್ತಿದ್ದಾರೆ. ಅವರು ಬಂದು ಹೋಗುವವರೆಗೂ ಯಾರನ್ನೂ ಬಿಡುವುದಿಲ್ಲ' ಎಂದರು.</p><p>ಇದರಿಂದ ಸಿಟ್ಟಾದ ಭಕ್ತರು, 'ನಮ್ಮಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರು ಬರುವುದು ಇನ್ನು ತಡವಾಗಲಿದೆ. ಅವರು ಬರುವುದಕ್ಕೂ 5 ನಿಮಿಷ ಮುನ್ನ ಬೇಕಾದರೆ ದೇವಸ್ಥಾನ ಬಂದ್ ಮಾಡಿ. ಈಗ ಒಳಗೆ ಬಿಡಿ' ಎಂದು ಪುನಃ ಕೋರಿದರು.</p><p>ಇದೇ ಸಂದರ್ಭದಲ್ಲಿ ಭಕ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು.</p><p>'ಭಕ್ತರನ್ನು ಅಕ್ರಮವಾಗಿ ತಡೆಗಟ್ಟಿರುವ ಪೊಲೀಸರು, ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಭಕ್ತರು ಹೇಳಿದರು.</p><p><strong>ನೈವೇದ್ಯ ಮಾಡಲು ಆಹಾರ ತಯಾರಿಕೆ:</strong> ದೇವರಗುಡ್ಡಕ್ಕೆ ಬಂದಿರುವ ಭಕ್ತರು, ದೇವರಿಗೆ ನೈವೈದ್ಯ ಮಾಡಲು ಆಹಾರ ಸಿದ್ದಪಡಿಸಿ, ದೇವರಿಗೆ ಅರ್ಪಿಸಲು ಕಾಯುತ್ತಿದ್ದಾರೆ. ಆದರೆ, ಪೊಲೀಸರು ಅವರನ್ನು ಒಳಗೆ ಬಿಡುತ್ತಿಲ್ಲ. </p><p>'ಮುಖ್ಯಮಂತ್ರಿ ಬರುವುದಕ್ಕೂ ಮುನ್ನ 5 ನಿಮಿಷ ಮಾತ್ರ ದೇವಸ್ಥಾನ ಬಂದ್ ಮಾಡಿ. ಈಗ ದೇವಸ್ಥಾನಕ್ಕೆ ಹೋಗಲು ಅವಕಾಶ ನೀಡಿ. ನೈವೇದ್ಯ ಮಾಡುತ್ತೇವೆ' ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>