ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT
ADVERTISEMENT

ಹುಕ್ಕೇರಿಮಠ | ಸದಾಶಿವ ಸ್ವಾಮೀಜಿ ತುಲಾಭಾರ: 80 ಕೆ.ಜಿ. ಬೆಳ್ಳಿ ಸಂಗ್ರಹ

ಹುಕ್ಕೇರಿಮಠ ಜಾತ್ರಾ ಮಹೋತ್ಸವ | ಡಿ. 9ರಿಂದ 30ರ ವರೆಗೆ ಕಾರ್ಯಕ್ರಮ | 51 ಸಾವಿರ ಜನರಿಂದ ‘ವಚನ ವಂದನೆ’
Published : 12 ಡಿಸೆಂಬರ್ 2025, 4:56 IST
Last Updated : 12 ಡಿಸೆಂಬರ್ 2025, 4:56 IST
ಫಾಲೋ ಮಾಡಿ
Comments
‘ಕಿರಾಣಿ ಅಂಗಡಿಯಲ್ಲೂ ಮದ್ಯ’
‘ಜನರನ್ನು ದುಶ್ಚಟ ಮುಕ್ತಗೊಳಿಸಲು ಜಿಲ್ಲೆಯ 75 ಹಳ್ಳಿಗಳಲ್ಲಿ ಜನಜಾಗೃತಿ ಪಾದಯಾತ್ರೆ ಮಾಡಿದೆವು. ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿರುವ ಬಗ್ಗೆ ಮಹಿಳೆಯರು ಅಳಲು ತೋಡಿಕೊಂಡರು. ಕಿರಾಣಿ ಅಂಗಡಿಯವರಿಗೆ ಹಾಗೂ ಅಲ್ಲಿಗೆ ಹೋಗಿ ಮದ್ಯ ಕುಡಿಯುವವರಿಗೆ ತಿಳಿವಳಿಕೆ ಹೇಳಲಾಗಿದೆ. ಕುಡಿಯದಂತೆ ಪ್ರಮಾಣ ಸಹ ಮಾಡಿಸಲಾಗಿದೆ’ ಎಂದು ಸದಾಶಿವ ಸ್ವಾಮೀಜಿ ಹೇಳಿದರು.
‘37 ಕೆ.ಜಿ. ಚಿನ್ನದಲ್ಲಿ ಜಮೀನು ಖರೀದಿ’
‘2007ರಲ್ಲಿ ಶಿವಲಿಂಗ ಸ್ವಾಮೀಜಿಯವರಿಗೆ ಚಿನ್ನದ (ಸುವರ್ಣ) ತುಲಾಭಾರ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸಂಗ್ರಹವಾಗಿದ್ದ 37 ಕೆ.ಜಿ. ಚಿನ್ನದಲ್ಲಿ 49 ಎಕರೆ ಜಮೀನು ಖರೀದಿಸಲಾಗಿದೆ’ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ತಿಳಿಸಿದರು. ‘ಜಾತ್ರಾ ಕಮಿಟಿ ಗೌರವಾಧ್ಯಕ್ಷನಾಗಿದ್ದ ನಾನು ಅಂದು ಶಾಸಕನೂ ಆಗಿದ್ದೆ. ಭಕ್ತರೆಲ್ಲರೂ ಸೇರಿಕೊಂಡು ಚಿನ್ನದ ತುಲಾಭಾರ ಮಾಡಿದೆವು. ಈಗಿನ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್‌) ಬಳಿ 49 ಎಕರೆ ಜಮೀನು ಖರೀದಿಸಿದ್ದೆವು. ಜಮೀನು ವಿಚಾರವಾಗಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದರು. ಈಗ 25 ಎಕರೆಯ ವ್ಯಾಜ್ಯ ಮುಗಿದಿದೆ. ಉಳಿದ 24 ಎಕರೆ ಜಮೀನಿನ ವ್ಯಾಜ್ಯ ಬಾಕಿಯಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT