ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಚನ ಸಾಹಿತ್ಯ, ದಾಸ ಸಾಹಿತ್ಯ, ನಾಟಕ ಸಾಹಿತ್ಯ, ದಲಿತ ಸಾಹಿತ್ಯ, ಮಕ್ಕಳ ಸಾಹಿತ್ಯ ಹಾಗೂ ಕನ್ನಡ ಪರಂಪರೆಯ ಚಿಂತನೆಗಳ ಸಮಾವೇಶ ಆಯೋಜನೆ ಮಾಡುವ ಕನಸಿದೆ. ಸಾಹಿತ್ಯ ಪರಿಷತ್ತಿನ ಹಿಂದಿನ ಅಧ್ಯಕ್ಷರ ವಿಶಿಷ್ಟ ಯೋಜನೆಗಳಾದ ಪುಸ್ತಕ ಸಂತೆ, ಗ್ರಾಮಸಿರಿ, ಮನೆ–ಮನೆಗೆ ಪುಸ್ತಕ (ಪುಸ್ತಕ ಭಾಗ್ಯ) ಯೋಜನೆ ಜಾರಿಗೊಳಿಸುವ ಯೋಜನೆ ಹಾಕಿಕೊಂಡಿದ್ದೇನೆ ಎಂದು ತಿಳಿಸಿದರು.