<p><strong>ರಾಣೆಬೆನ್ನೂರು</strong>: ಜಿಲ್ಲೆಯಲ್ಲಿ ಮುಳ್ಳುಸಜ್ಜೆ ಕಳೆಯ ಕಾಟ ವಿಪರೀತವಾಗಿದ್ದು, ಗೋವಿನಜೋಳ (ಮೆಕ್ಕೆಜೋಳ) ಬೆಳೆಗೆ ದೊಡ್ಡ ಹೊಡೆತ ನೀಡಿದೆ. ಮುಳ್ಳುಸಜ್ಜೆ ಕಳೆ ಹೆಚ್ಚಾಗಿದ್ದರಿಂದ ಬೇಸತ್ತ ರೈತರಿಬ್ಬರು, ತಮ್ಮ 9 ಎಕರೆ ಜಮೀನಿನಲ್ಲಿದ್ದ ಗೋವಿನ ಜೋಳವನ್ನು ಸಂಪೂರ್ಣ ನಾಶಪಡಿಸಿದ್ದಾರೆ.</p>.<p>ತಾಲ್ಲೂಕಿನ ಕೂಲಿ ಗ್ರಾಮದ ರೈತ ಕರಬಸಪ್ಪ ಅಗಸೀಬಾಗಿಲ ಅವರು ತಮ್ಮ 4 ಎಕೆರೆ ಹಾಗೂ ಗಿರಿಯಪ್ಪ ಮಲ್ಲಪ್ಪ ಸಣ್ಣಗೂಳಪ್ಪನವರ ಅವರು 5 ಎಕರೆಯಲ್ಲಿ ಬೆಳೆದಿದ್ದ ಗೋವಿನಜೋಳವನ್ನು ಟ್ರ್ಯಾಕ್ಟರ್ ರೋಟಾವೇಟರ್ ಮೂಲಕ ಸಂಪೂರ್ಣವಾಗಿ ಕಿತ್ತು ಹಾಕಿದ್ದಾರೆ.</p>.<p>ಜಿಲ್ಲೆಯಲ್ಲಿ ಬೆಳೆಗಳ ಪರಿವರ್ತನೆ ಮಾಡದಿರುವುದು, ವಿಪರೀತ ಕಳೆನಾಶಕ ಬಳಕೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಹಲವು ಜಮೀನುಗಳಲ್ಲಿ ಮುಳ್ಳುಸಜ್ಜೆ ಕಳೆ ಬೆಳೆಯುತ್ತಿದೆ. ಇದರ ನಿಯಂತ್ರಣಕ್ಕೆ ನಿರ್ದಿಷ್ಟ ಔಷಧಿ ಇಲ್ಲದಿರುವುದರಿಂದ, ರೈತರು ಕಂಗಾಲಾಗಿದ್ದಾರೆ.</p>.<p>‘ಮುಂಗಾರಿನಲ್ಲಿ ಭೂಮಿ ಹದಗೊಳಿಸಿ ಸುಮಾರು ₹ 70 ಸಾವಿರ ಖರ್ಚು ಮಾಡಿ 4 ಎಕರೆ ಜಮೀನಿನಲ್ಲಿ ಗೋವಿನಜೋಳ ಬಿತ್ತಿದ್ದೇನೆ. ಉತ್ತಮ ಬೆಳೆ ಬರುವ ನೀರಿಕ್ಷೆಯಲ್ಲಿದ್ದೆ. ಆದರೆ, ಈಗ ಗೋವಿನ ಜೋಳದ ಜೊತೆಯಲ್ಲಿಯೇ ಮುಳ್ಳುಸಜ್ಜೆ ಕಳೆಯೂ ಹೆಚ್ಚು ಬೆಳೆಯುತ್ತಿದೆ’ ಎಂದು ರೈತ ಕರಬಸಪ್ಪ ಅಗಸೀಬಾಗಿಲ ತಿಳಿಸಿದರು.</p>.<div><blockquote>ಮುಳ್ಳುಸಜ್ಜೆ ಕಳೆಗೆ ಔಷಧಿ ಇಲ್ಲವೆಂದು ಹೇಳುತ್ತಿದ್ದಾರೆ. ₹ 70 ಸಾವಿರ ನಷ್ಟ ಮಾಡಿಕೊಂಡು ಸಂಪೂರ್ಣ ಬೆಳೆ ನಾಶಪಡಿಸಿದ್ದೇನೆ.</blockquote><span class="attribution">ಕರಬಸಪ್ಪ ಅಗಸೀಬಾಗಿಲ, ರಾಣೆಬೆನ್ನೂರಿನ ಕೂಲಿ ಗ್ರಾಮದ ರೈತ</span></div>.<p>‘ಇತ್ತೀಚೆಗೆ ₹ 10 ಸಾವಿರ ಖರ್ಚು ಮಾಡಿ ಕಳೆನಾಶಕ ಸಿಂಪಡಿಸಿದ್ದೆ. ಅಷ್ಟಾದರೂ ಮುಳ್ಳುಸಜ್ಜೆ ನಿಯಂತ್ರಣಕ್ಕೆ ಬಂದಿಲ್ಲ. ಮುಳ್ಳುಸಜ್ಜೆ ಕಳೆಯನ್ನು ಬೇರಿನ ಸಮೇತ ಕೀಳಲು ಕೃಷಿ ಕಾರ್ಮಿಕರು, ಎಕರೆಗೆ ₹ 20 ಸಾವಿರ ಕೇಳುತ್ತಿದ್ದಾರೆ. ಅಷ್ಟು ಹಣ ಕೊಟ್ಟು ಕಳೆ ಕೀಳಿಸಿದರೂ ಇಳುವರಿ ಬರುವುದು ಕಡಿಮೆ. ಹೀಗಾಗಿ, ಬೆಳೆಯನ್ನೇ ನಾಶಪಡಿಸಿದ್ದೇನೆ’ ಎಂದು ಹೇಳಿದರು.</p>.<p>‘ಈ ಮೊದಲು ನಮ್ಮ ಜಮೀನಿನಲ್ಲಿ ರಾಗಿ, ಹತ್ತಿ, ಈರುಳ್ಳಿ ಬೆಳೆಯುತ್ತಿದ್ದೆ. ಆಗ ಮುಳ್ಳುಸಜ್ಜೆ ಕಳೆ ಇರಲಿಲ್ಲ. ಈ ವರ್ಷ ಮುಳ್ಳುಸಜ್ಜೆ ಕಳೆ ಹೆಚ್ಚಾಗಿತ್ತು’ ಎಂದರು.</p>.<p>ಇನ್ನೊಬ್ಬ ರೈತ ಗಿರಿಯಪ್ಪ, ‘ಮುಳ್ಳುಸಜ್ಜೆ ವಿಪರೀತವಾಗಿದೆ. ಹೀಗಾಗಿ, 5 ಎಕರೆ ಜಮೀನಿನಲ್ಲಿದ್ದ ಮೆಕ್ಕೆಜೋಳ ನಾಶಪಡಿಸಿದ್ದೇನೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು</strong>: ಜಿಲ್ಲೆಯಲ್ಲಿ ಮುಳ್ಳುಸಜ್ಜೆ ಕಳೆಯ ಕಾಟ ವಿಪರೀತವಾಗಿದ್ದು, ಗೋವಿನಜೋಳ (ಮೆಕ್ಕೆಜೋಳ) ಬೆಳೆಗೆ ದೊಡ್ಡ ಹೊಡೆತ ನೀಡಿದೆ. ಮುಳ್ಳುಸಜ್ಜೆ ಕಳೆ ಹೆಚ್ಚಾಗಿದ್ದರಿಂದ ಬೇಸತ್ತ ರೈತರಿಬ್ಬರು, ತಮ್ಮ 9 ಎಕರೆ ಜಮೀನಿನಲ್ಲಿದ್ದ ಗೋವಿನ ಜೋಳವನ್ನು ಸಂಪೂರ್ಣ ನಾಶಪಡಿಸಿದ್ದಾರೆ.</p>.<p>ತಾಲ್ಲೂಕಿನ ಕೂಲಿ ಗ್ರಾಮದ ರೈತ ಕರಬಸಪ್ಪ ಅಗಸೀಬಾಗಿಲ ಅವರು ತಮ್ಮ 4 ಎಕೆರೆ ಹಾಗೂ ಗಿರಿಯಪ್ಪ ಮಲ್ಲಪ್ಪ ಸಣ್ಣಗೂಳಪ್ಪನವರ ಅವರು 5 ಎಕರೆಯಲ್ಲಿ ಬೆಳೆದಿದ್ದ ಗೋವಿನಜೋಳವನ್ನು ಟ್ರ್ಯಾಕ್ಟರ್ ರೋಟಾವೇಟರ್ ಮೂಲಕ ಸಂಪೂರ್ಣವಾಗಿ ಕಿತ್ತು ಹಾಕಿದ್ದಾರೆ.</p>.<p>ಜಿಲ್ಲೆಯಲ್ಲಿ ಬೆಳೆಗಳ ಪರಿವರ್ತನೆ ಮಾಡದಿರುವುದು, ವಿಪರೀತ ಕಳೆನಾಶಕ ಬಳಕೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಹಲವು ಜಮೀನುಗಳಲ್ಲಿ ಮುಳ್ಳುಸಜ್ಜೆ ಕಳೆ ಬೆಳೆಯುತ್ತಿದೆ. ಇದರ ನಿಯಂತ್ರಣಕ್ಕೆ ನಿರ್ದಿಷ್ಟ ಔಷಧಿ ಇಲ್ಲದಿರುವುದರಿಂದ, ರೈತರು ಕಂಗಾಲಾಗಿದ್ದಾರೆ.</p>.<p>‘ಮುಂಗಾರಿನಲ್ಲಿ ಭೂಮಿ ಹದಗೊಳಿಸಿ ಸುಮಾರು ₹ 70 ಸಾವಿರ ಖರ್ಚು ಮಾಡಿ 4 ಎಕರೆ ಜಮೀನಿನಲ್ಲಿ ಗೋವಿನಜೋಳ ಬಿತ್ತಿದ್ದೇನೆ. ಉತ್ತಮ ಬೆಳೆ ಬರುವ ನೀರಿಕ್ಷೆಯಲ್ಲಿದ್ದೆ. ಆದರೆ, ಈಗ ಗೋವಿನ ಜೋಳದ ಜೊತೆಯಲ್ಲಿಯೇ ಮುಳ್ಳುಸಜ್ಜೆ ಕಳೆಯೂ ಹೆಚ್ಚು ಬೆಳೆಯುತ್ತಿದೆ’ ಎಂದು ರೈತ ಕರಬಸಪ್ಪ ಅಗಸೀಬಾಗಿಲ ತಿಳಿಸಿದರು.</p>.<div><blockquote>ಮುಳ್ಳುಸಜ್ಜೆ ಕಳೆಗೆ ಔಷಧಿ ಇಲ್ಲವೆಂದು ಹೇಳುತ್ತಿದ್ದಾರೆ. ₹ 70 ಸಾವಿರ ನಷ್ಟ ಮಾಡಿಕೊಂಡು ಸಂಪೂರ್ಣ ಬೆಳೆ ನಾಶಪಡಿಸಿದ್ದೇನೆ.</blockquote><span class="attribution">ಕರಬಸಪ್ಪ ಅಗಸೀಬಾಗಿಲ, ರಾಣೆಬೆನ್ನೂರಿನ ಕೂಲಿ ಗ್ರಾಮದ ರೈತ</span></div>.<p>‘ಇತ್ತೀಚೆಗೆ ₹ 10 ಸಾವಿರ ಖರ್ಚು ಮಾಡಿ ಕಳೆನಾಶಕ ಸಿಂಪಡಿಸಿದ್ದೆ. ಅಷ್ಟಾದರೂ ಮುಳ್ಳುಸಜ್ಜೆ ನಿಯಂತ್ರಣಕ್ಕೆ ಬಂದಿಲ್ಲ. ಮುಳ್ಳುಸಜ್ಜೆ ಕಳೆಯನ್ನು ಬೇರಿನ ಸಮೇತ ಕೀಳಲು ಕೃಷಿ ಕಾರ್ಮಿಕರು, ಎಕರೆಗೆ ₹ 20 ಸಾವಿರ ಕೇಳುತ್ತಿದ್ದಾರೆ. ಅಷ್ಟು ಹಣ ಕೊಟ್ಟು ಕಳೆ ಕೀಳಿಸಿದರೂ ಇಳುವರಿ ಬರುವುದು ಕಡಿಮೆ. ಹೀಗಾಗಿ, ಬೆಳೆಯನ್ನೇ ನಾಶಪಡಿಸಿದ್ದೇನೆ’ ಎಂದು ಹೇಳಿದರು.</p>.<p>‘ಈ ಮೊದಲು ನಮ್ಮ ಜಮೀನಿನಲ್ಲಿ ರಾಗಿ, ಹತ್ತಿ, ಈರುಳ್ಳಿ ಬೆಳೆಯುತ್ತಿದ್ದೆ. ಆಗ ಮುಳ್ಳುಸಜ್ಜೆ ಕಳೆ ಇರಲಿಲ್ಲ. ಈ ವರ್ಷ ಮುಳ್ಳುಸಜ್ಜೆ ಕಳೆ ಹೆಚ್ಚಾಗಿತ್ತು’ ಎಂದರು.</p>.<p>ಇನ್ನೊಬ್ಬ ರೈತ ಗಿರಿಯಪ್ಪ, ‘ಮುಳ್ಳುಸಜ್ಜೆ ವಿಪರೀತವಾಗಿದೆ. ಹೀಗಾಗಿ, 5 ಎಕರೆ ಜಮೀನಿನಲ್ಲಿದ್ದ ಮೆಕ್ಕೆಜೋಳ ನಾಶಪಡಿಸಿದ್ದೇನೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>