‘ಸ್ವಯಂ ಗೌರವ ಇದ್ದವರು ಯಾರೂ ಬಿಜೆಪಿಗೆ ಹೋಗುವುದಿಲ್ಲ. ಅವರಲ್ಲಿ ಸಿದ್ಧಾಂತಗಳೇ ಇಲ್ಲ. ನಮ್ಮ ಜತೆ ಬನ್ನಿ, ಸಹಾಯ ಮಾಡುತ್ತೇವೆ. ಅವರು ಬರುತ್ತೇವೆ, ಇವರು ಬರುತ್ತೇವೆ ಎಂದು ಹೇಳಿದ್ದಾರೆ ಎಂದು ಎಲ್ಲರಿಗೂ ಹೇಳುತ್ತಿದ್ದಾರೆ. ಆದರೆ, ಬಿಜೆಪಿಗೆ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ. ಈ ಇಳಿ ವಯಸ್ಸಿನಲ್ಲಿ ಹೀಗೆ ಮಾಡಿದರೆ ಕ್ಷೇತ್ರದ ಜನತೆ ಕ್ಷಮಿಸುವುದಿಲ್ಲ. ಹೀಗಾಗಿ ಆ ಕಡೆಗೆ ಮುಖ ಕೂಡ ಮಾಡುವುದಿಲ್ಲ’ ಎಂದು ತಿಳಿಸಿದರು.