<p><strong>ಕಾಳಗಿ:</strong> ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು ರಾಜ್ಯ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಕೆಳದರ್ಜೆಗಿಳಿಸಿ ಆದೇಶಿಸಿದ ಕ್ರಮವನ್ನು ಖಂಡಿಸಿ ಗಡಿಕೇಶ್ವಾರ ಮತ್ತು ಸುತ್ತಲಿನ ಗ್ರಾಮಸ್ಥರು ಗುರುವಾರ ರಾಜ್ಯಹೆದ್ದಾರಿ-32 ತಡೆದು ಪ್ರತಿಭಟಿಸಿದರು.</p>.<p>ಬೆಳಿಗ್ಗೆ 11 ಗಂಟೆ ಸುಮಾರಿಗೆ ಚಿಂಚೋಳಿ-ಕಲಬುರಗಿ ಮುಖ್ಯರಸ್ತೆ ಮಾರ್ಗದ ಉಮ್ಮರ್ಗಾ-ಸುಲೇಪೇಟ ರಾಜ್ಯಹೆದ್ದಾರಿ-32ರ ಹೊಡೆಬೀರನಹಳ್ಳಿ ಕ್ರಾಸ್ ಬಳಿ ಆಗಮಿಸಿದ ಮಹಿಳೆಯರು ಸೇರಿದಂತೆ ನೂರಾರು ಜನರು ಹೆದ್ದಾರಿ ತಡೆದು ಸರ್ಕಾರದ ನಿರ್ಧಾರವನ್ನು ವಿರೋಧಿಸಿದರು.</p>.<p>‘ನಮಗೆ ಆರೋಗ್ಯ ಮತ್ತು ಜೀವ ಮುಖ್ಯ. ನಮ್ಮ ಸಿಎಚ್ಸಿಯನ್ನು ಯಾವುದೇ ಕಾರಣಕ್ಕೂ ಪಿಎಚ್ಸಿಯನ್ನಾಗಿ ಮಾಡಲು ಬಿಡುವುದಿಲ್ಲ’ ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಗುಡುಗಿದರು.</p>.<p>ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನವಿಪತ್ರ ತೆಗೆದುಕೊಳ್ಳಲು ಬಂದ ಚಿಂಚೋಳಿ ಟಿಎಚ್ಒ ಡಾ.ಮಹಮ್ಮದ ಗಫರ್, ಕೋಡ್ಲಿ ಉಪತಹಶೀಲ್ದಾರ್ ರವೀಂದ್ರ ಅವರಿಗೆ ಮನವಿಪತ್ರ ನೀಡದೆ, ನಿಮ್ಮ ಮೇಲಧಿಕಾರಿಗಳು ಬಂದರೆ ಮಾತ್ರ ಸಲ್ಲಿಸುವುದಾಗಿ ಪಟ್ಟು ಹಿಡಿದು ಕುಳಿತರು.</p>.<p>ಹೋರಾಟ ಮುಂದುವರೆದು ಬಿಸಿಲು, ಹಸಿವು ಹೆಚ್ಚಾದೊಡನೆ 1.15ರ ವೇಳೆಗೆ ಹೆದ್ದಾರಿಯಲ್ಲೇ ಊಟ ಮಾಡಿ ಪ್ರತಿಭಟನೆ ಚುರುಕುಗೊಳಿಸಿದರು. ಈ ವೇಳೆ ಬಂದ ಕಾಳಗಿ ಗ್ರೇಡ್-2 ತಹಶೀಲ್ದಾರ್ ರಾಜೇಶ್ವರಿ ಅವರಿಗೂ ಮನವಿಪತ್ರ ನೀಡದೆ ಆಕ್ರೋಶ ವ್ಯಕ್ತಪಡಿಸಿದರು.</p>.<p>3.30ರ ಸುಮಾರಿಗೆ ಆಗಮಿಸಿದ ಕಾಳಗಿ ತಹಶೀಲ್ದಾರ್ ಪೃಥ್ವಿರಾಜ ಪಾಟೀಲ ಅವರಿಗೆ ಮನವಿ ಸಲ್ಲಿಸಿ; ‘ನಮ್ಮೂರಲ್ಲಿ 30 ವರ್ಷಗಳಿಂದ ಸಿಎಚ್ಸಿ ಇದೆ. ಸುತ್ತಲಿನ ಜನತೆಗೂ ಉತ್ತಮ ಸೇವೆ ದೊರೆಯುತ್ತಿದೆ. ಇದನ್ನು ಹೊರತುಪಡಿಸಿದರೆ 25 ಕಿ.ಮೀ ವರೆಗೂ ಸಿಎಚ್ಸಿ ಲಭ್ಯವಿಲ್ಲ. ಸರ್ಕಾರ ಕೂಡಲೇ ಡಿ–ಗ್ರೇಡ್ ಆದೇಶ ಹಿಂಪಡೆದು ಸಿಎಚ್ಸಿ ಮುಂದುವರೆಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಇಳಿಯಲಾಗುವುದು. ಈ ಕುರಿತು ತಕ್ಷಣವೇ ಸರ್ಕಾರದ ಗಮನಕ್ಕೆ ತನ್ನಿರಿ’ ಎಂದು ಪ್ರತಿಭಟನಾಕಾರರು ಹೇಳಿದರು.</p>.<p>ಹೆದ್ದಾರಿ ತಡೆಯಿಂದಾಗಿ ಚಿಂಚೋಳಿ -ಕಲಬುರಗಿ ನಡುವಿನ ಬಸ್ ಸಂಚಾರ ಮಾರ್ಗ 5 ತಾಸು ಬದಲಾಗಿತ್ತು. ಕಬ್ಬಿನ ಲಾರಿಗಳು ಸೇರಿದಂತೆ ಖಾಸಗಿ ವಾಹನಗಳು ಎಲ್ಲೆಂದರಲ್ಲಿ ಸಾಲುಗಟ್ಟಿ ನಿಂತಿದವು. ಪ್ರಯಾಣಿಕರು ಪರದಾಡಿದರು. ಸುಲೇಪೇಟ ಪಿಎಸ್ಐ ಅಮರ್, ರಟಕಲ್ ಪಿಎಸ್ಐ ಶೀಲಾದೇವಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದರು.</p>.<p>ಪ್ರತಿಭಟನೆಯಲ್ಲಿ ಗಡಿಕೇಶ್ವಾರ, ರಾಯಕೋಡ, ಭೂತಪೂರ, ಚಿಂತಪಳ್ಳಿ, ರುದ್ನೂರ, ಚಿಂತಪಳ್ಳಿ ತಾಂಡಾ, ಬೆನಕನಳ್ಳಿ, ಭಂಟನಳ್ಳಿ, ತೇಗಲತಿಪ್ಪಿ, ಹಲಚೇರಾ, ಕೆರಳ್ಳಿ ಗ್ರಾಮಸ್ಥರು ಸೇರಿ ಮತ್ತಿತರರು <br>ಭಾಗವಹಿಸಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು ರಾಜ್ಯ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿ ಕೆಳದರ್ಜೆಗಿಳಿಸಿ ಆದೇಶಿಸಿದ ಕ್ರಮವನ್ನು ಖಂಡಿಸಿ ಗಡಿಕೇಶ್ವಾರ ಮತ್ತು ಸುತ್ತಲಿನ ಗ್ರಾಮಸ್ಥರು ಗುರುವಾರ ರಾಜ್ಯಹೆದ್ದಾರಿ-32 ತಡೆದು ಪ್ರತಿಭಟಿಸಿದರು.</p>.<p>ಬೆಳಿಗ್ಗೆ 11 ಗಂಟೆ ಸುಮಾರಿಗೆ ಚಿಂಚೋಳಿ-ಕಲಬುರಗಿ ಮುಖ್ಯರಸ್ತೆ ಮಾರ್ಗದ ಉಮ್ಮರ್ಗಾ-ಸುಲೇಪೇಟ ರಾಜ್ಯಹೆದ್ದಾರಿ-32ರ ಹೊಡೆಬೀರನಹಳ್ಳಿ ಕ್ರಾಸ್ ಬಳಿ ಆಗಮಿಸಿದ ಮಹಿಳೆಯರು ಸೇರಿದಂತೆ ನೂರಾರು ಜನರು ಹೆದ್ದಾರಿ ತಡೆದು ಸರ್ಕಾರದ ನಿರ್ಧಾರವನ್ನು ವಿರೋಧಿಸಿದರು.</p>.<p>‘ನಮಗೆ ಆರೋಗ್ಯ ಮತ್ತು ಜೀವ ಮುಖ್ಯ. ನಮ್ಮ ಸಿಎಚ್ಸಿಯನ್ನು ಯಾವುದೇ ಕಾರಣಕ್ಕೂ ಪಿಎಚ್ಸಿಯನ್ನಾಗಿ ಮಾಡಲು ಬಿಡುವುದಿಲ್ಲ’ ಎಂದು ಗ್ರಾಮಸ್ಥರು ಸರ್ಕಾರದ ವಿರುದ್ಧ ಗುಡುಗಿದರು.</p>.<p>ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನವಿಪತ್ರ ತೆಗೆದುಕೊಳ್ಳಲು ಬಂದ ಚಿಂಚೋಳಿ ಟಿಎಚ್ಒ ಡಾ.ಮಹಮ್ಮದ ಗಫರ್, ಕೋಡ್ಲಿ ಉಪತಹಶೀಲ್ದಾರ್ ರವೀಂದ್ರ ಅವರಿಗೆ ಮನವಿಪತ್ರ ನೀಡದೆ, ನಿಮ್ಮ ಮೇಲಧಿಕಾರಿಗಳು ಬಂದರೆ ಮಾತ್ರ ಸಲ್ಲಿಸುವುದಾಗಿ ಪಟ್ಟು ಹಿಡಿದು ಕುಳಿತರು.</p>.<p>ಹೋರಾಟ ಮುಂದುವರೆದು ಬಿಸಿಲು, ಹಸಿವು ಹೆಚ್ಚಾದೊಡನೆ 1.15ರ ವೇಳೆಗೆ ಹೆದ್ದಾರಿಯಲ್ಲೇ ಊಟ ಮಾಡಿ ಪ್ರತಿಭಟನೆ ಚುರುಕುಗೊಳಿಸಿದರು. ಈ ವೇಳೆ ಬಂದ ಕಾಳಗಿ ಗ್ರೇಡ್-2 ತಹಶೀಲ್ದಾರ್ ರಾಜೇಶ್ವರಿ ಅವರಿಗೂ ಮನವಿಪತ್ರ ನೀಡದೆ ಆಕ್ರೋಶ ವ್ಯಕ್ತಪಡಿಸಿದರು.</p>.<p>3.30ರ ಸುಮಾರಿಗೆ ಆಗಮಿಸಿದ ಕಾಳಗಿ ತಹಶೀಲ್ದಾರ್ ಪೃಥ್ವಿರಾಜ ಪಾಟೀಲ ಅವರಿಗೆ ಮನವಿ ಸಲ್ಲಿಸಿ; ‘ನಮ್ಮೂರಲ್ಲಿ 30 ವರ್ಷಗಳಿಂದ ಸಿಎಚ್ಸಿ ಇದೆ. ಸುತ್ತಲಿನ ಜನತೆಗೂ ಉತ್ತಮ ಸೇವೆ ದೊರೆಯುತ್ತಿದೆ. ಇದನ್ನು ಹೊರತುಪಡಿಸಿದರೆ 25 ಕಿ.ಮೀ ವರೆಗೂ ಸಿಎಚ್ಸಿ ಲಭ್ಯವಿಲ್ಲ. ಸರ್ಕಾರ ಕೂಡಲೇ ಡಿ–ಗ್ರೇಡ್ ಆದೇಶ ಹಿಂಪಡೆದು ಸಿಎಚ್ಸಿ ಮುಂದುವರೆಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಇಳಿಯಲಾಗುವುದು. ಈ ಕುರಿತು ತಕ್ಷಣವೇ ಸರ್ಕಾರದ ಗಮನಕ್ಕೆ ತನ್ನಿರಿ’ ಎಂದು ಪ್ರತಿಭಟನಾಕಾರರು ಹೇಳಿದರು.</p>.<p>ಹೆದ್ದಾರಿ ತಡೆಯಿಂದಾಗಿ ಚಿಂಚೋಳಿ -ಕಲಬುರಗಿ ನಡುವಿನ ಬಸ್ ಸಂಚಾರ ಮಾರ್ಗ 5 ತಾಸು ಬದಲಾಗಿತ್ತು. ಕಬ್ಬಿನ ಲಾರಿಗಳು ಸೇರಿದಂತೆ ಖಾಸಗಿ ವಾಹನಗಳು ಎಲ್ಲೆಂದರಲ್ಲಿ ಸಾಲುಗಟ್ಟಿ ನಿಂತಿದವು. ಪ್ರಯಾಣಿಕರು ಪರದಾಡಿದರು. ಸುಲೇಪೇಟ ಪಿಎಸ್ಐ ಅಮರ್, ರಟಕಲ್ ಪಿಎಸ್ಐ ಶೀಲಾದೇವಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದರು.</p>.<p>ಪ್ರತಿಭಟನೆಯಲ್ಲಿ ಗಡಿಕೇಶ್ವಾರ, ರಾಯಕೋಡ, ಭೂತಪೂರ, ಚಿಂತಪಳ್ಳಿ, ರುದ್ನೂರ, ಚಿಂತಪಳ್ಳಿ ತಾಂಡಾ, ಬೆನಕನಳ್ಳಿ, ಭಂಟನಳ್ಳಿ, ತೇಗಲತಿಪ್ಪಿ, ಹಲಚೇರಾ, ಕೆರಳ್ಳಿ ಗ್ರಾಮಸ್ಥರು ಸೇರಿ ಮತ್ತಿತರರು <br>ಭಾಗವಹಿಸಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>