<p><strong>ಕಲಬುರ್ಗಿ: </strong>ಇಲ್ಲಿನ ಉತ್ತರ ಮತಕ್ಷೇತ್ರದ 29ನೇ ವಾರ್ಡಿನಲ್ಲಿ ದರ್ಶನಾಪುರ ಜಿಡಿಎ ಬಡಾವಣೆಯಲ್ಲಿ₹ 23 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಖನೀಜ್ ಫಾತಿಮಾ ಅವರು ಗುರುವಾರ ಚಾಲನೆ ನೀಡಿದರು.</p>.<p>ಮಹಾನಗರ ಪಾಲಿಕೆ ಅನುದಾನದಲ್ಲಿ ಈ ಕಾಮಗಾರಿಗಳು ಮಂಜೂರಾಗಿವೆ. ಬಸವೇಶ್ವರ ಶಾಲೆಯ ಎದುರಿನ ರಸ್ತೆ ದುರಸ್ತಿಗೆ ₹ 10 ಲಕ್ಷ, ಉದ್ಯಾನ ಅಭಿವೃದ್ಧಿಗೆ ₹ 7 ಲಕ್ಷ ಮತ್ತು ಕೊಳವೆಬಾವಿ, ಬಸವೇಶ್ವರ ಕಾಲೊನಿಯಿಂದ ಸಂತ್ರಸವಾಡಿ ವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ₹ 5 ಲಕ್ಷ ಅನುದಾನ ನಿಗದಿ ಮಾಡಲಾಗಿದೆ.</p>.<p>‘ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಹಂತ, ಹಂತವಾಗಿ ಈಡೇರಿಸುತ್ತಿದ್ದೇನೆ. ನಗರ ಪ್ರದೇಶಗಳಲ್ಲಿ ಜನರ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಗುಣಮಟ್ಟದ ಕಾಮಗಾರಿ ಮಾಡಿ, ಜನರ ವಿಶ್ವಾಸ ಉಳಿಸಿಕೊಳ್ಳಬೇಕು’ ಎಂದು ಶಾಸಕಿ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಕಾಂಗ್ರೆಸ್ ಯುವ ಮುಖಂಡ ಫರಾಜ್ ಉಲ್ ಇಸ್ಲಾಂ, ಪಾಲಿಕೆ ಮಾಜಿ ಸದಸ್ಯ ಮಲಿಕಾರ್ಜುನ ಎಸ್.ಟೆಂಗಳಿ, ಆದಿಲ್ ಸುಲೇಮಾನ ಸೇಠ್, ಮಜರ ಆಲ್ಂ ಖಾನ್, ತುಕಾರಾಮ ಕೊಳ್ಳೂರ, ಗುತ್ತೇದಾರರಾದ ದೇವರಾಜ ಪೂಜಾರಿ, ಮುನಾವರ್ ಪಟೇಲ್, ಶೋಯಬ್ ಖಾನ್ ಹಾಗೂ ಬಡಾವಣೆಯ ಹಿರಿಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಇಲ್ಲಿನ ಉತ್ತರ ಮತಕ್ಷೇತ್ರದ 29ನೇ ವಾರ್ಡಿನಲ್ಲಿ ದರ್ಶನಾಪುರ ಜಿಡಿಎ ಬಡಾವಣೆಯಲ್ಲಿ₹ 23 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಖನೀಜ್ ಫಾತಿಮಾ ಅವರು ಗುರುವಾರ ಚಾಲನೆ ನೀಡಿದರು.</p>.<p>ಮಹಾನಗರ ಪಾಲಿಕೆ ಅನುದಾನದಲ್ಲಿ ಈ ಕಾಮಗಾರಿಗಳು ಮಂಜೂರಾಗಿವೆ. ಬಸವೇಶ್ವರ ಶಾಲೆಯ ಎದುರಿನ ರಸ್ತೆ ದುರಸ್ತಿಗೆ ₹ 10 ಲಕ್ಷ, ಉದ್ಯಾನ ಅಭಿವೃದ್ಧಿಗೆ ₹ 7 ಲಕ್ಷ ಮತ್ತು ಕೊಳವೆಬಾವಿ, ಬಸವೇಶ್ವರ ಕಾಲೊನಿಯಿಂದ ಸಂತ್ರಸವಾಡಿ ವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ₹ 5 ಲಕ್ಷ ಅನುದಾನ ನಿಗದಿ ಮಾಡಲಾಗಿದೆ.</p>.<p>‘ಚುನಾವಣೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಹಂತ, ಹಂತವಾಗಿ ಈಡೇರಿಸುತ್ತಿದ್ದೇನೆ. ನಗರ ಪ್ರದೇಶಗಳಲ್ಲಿ ಜನರ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಗುಣಮಟ್ಟದ ಕಾಮಗಾರಿ ಮಾಡಿ, ಜನರ ವಿಶ್ವಾಸ ಉಳಿಸಿಕೊಳ್ಳಬೇಕು’ ಎಂದು ಶಾಸಕಿ ಅಧಿಕಾರಿಗಳಿಗೆ ಸೂಚಿಸಿದರು.</p>.<p>ಕಾಂಗ್ರೆಸ್ ಯುವ ಮುಖಂಡ ಫರಾಜ್ ಉಲ್ ಇಸ್ಲಾಂ, ಪಾಲಿಕೆ ಮಾಜಿ ಸದಸ್ಯ ಮಲಿಕಾರ್ಜುನ ಎಸ್.ಟೆಂಗಳಿ, ಆದಿಲ್ ಸುಲೇಮಾನ ಸೇಠ್, ಮಜರ ಆಲ್ಂ ಖಾನ್, ತುಕಾರಾಮ ಕೊಳ್ಳೂರ, ಗುತ್ತೇದಾರರಾದ ದೇವರಾಜ ಪೂಜಾರಿ, ಮುನಾವರ್ ಪಟೇಲ್, ಶೋಯಬ್ ಖಾನ್ ಹಾಗೂ ಬಡಾವಣೆಯ ಹಿರಿಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>