ತಾಲ್ಲೂಕಿನ ಮಳಖೇಡ, ಕೋಡ್ಲಾ, ಹಂದರಕಿ, ಮುಧೋಳ, ಆಡಕಿ, ಕುರಕುಂಟಾ, ಇಟಕಾಲ್, ರಿಬ್ಬನಪಲ್ಲಿ, ಹೈಯ್ಯಾಳ, ತೆಲ್ಕೂರ, ಮೀನಹಾಬಾಳ, ಕುಕ್ಕುಂದಾ, ಯಡಗಾ, ಬಿಜನಳ್ಳಿ, ನೀಲಹಳ್ಳಿ, ಅಳ್ಳೊಳ್ಳಿ, ರಂಜೋಳ, ಕಾನಗಡ್ಡಾ, ಮದಕಲ್, ಲಿಂಗಂಪಲ್ಲಿ, ಕೋಲ್ಕುಂದಾ, ದುಗನೂರ, ಮೈಲ್ವಾರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಮುಂಗಾರು ಬಿತ್ತನೆ ಅರ್ಧದಷ್ಟು ಮುಗಿದಿದೆ. ಭರದಿಂದ ಸಾಗಿದ ಬಿತ್ತನೆ ಕಾರ್ಯಕ್ಕೆ ಕೊಂಚ ತಡೆಯೊಡ್ಡಿದಂತಾಗಿದೆ. ಈಗಾಗಲೇ ಬಿತ್ತನೆಯ ಕಾರ್ಯವೂ ಪೂರ್ಣಗೊಂಡಿದೆ. ಕೆಲವು ಗ್ರಾಮಗಳಲ್ಲಿ ಬಿತ್ತಿದ ಬೀಜವು ಮೊಳಕೆಯೊಡೆದು, ಎರಡು ಎಲೆ ಚಿಗುರಿದೆ. ಕೆಲವು ಕಡೆಗಳಲ್ಲಿ ಬಿತ್ತಿ ಅನೇಕ ದಿನಗಳಾದರೂ ಸಹ ಬೀಜವು ಭೂಮಿಯಲ್ಲಿಯೇ ಇದ್ದು, ಮೊಳಕೆಯುತ್ತಿಲ್ಲ’ ಎನ್ನುತ್ತಾರೆ ಕುಕ್ಕುಂದಾದ ರೈತ ವೀರಭದ್ರಪ್ಪ.