ಜುಲೈನಿಂದ ಅಕ್ಟೋಬರ್ ವರೆಗೆ ತಾಲ್ಲೂಕಿನಲ್ಲಿ ಮಳೆ ಹಾಗೂ ಭೀಮಾ ಪ್ರವಾಹದಿಂದ 22,925 ಹೆಕ್ಟೇರ್ ತೊಗರಿ,13,220 ಹೆಕ್ಟೇರ್ ಹತ್ತಿ, 8,040 ಹೆಕ್ಟೇರ್ ಕಬ್ಬು ಮತ್ತು 44,269 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶವಾಗಿದೆ. ರೈತರು ಬೆಳೆ ಪರಿಹಾರಕ್ಕಾಗಿ ಕಾದು ಬೇಸತ್ತು ಕೊನೆಗೆ ಸಾಲ ಮಾಡಿ ಹಿಂಗಾರು ಬೆಳೆ ಬಿತ್ತನೆ ಮಾಡಿದ್ದಾರೆ.