ಸೋಮವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಲಬುರ್ಗಿ ವಿಭಾಗದ ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪೂರ, ಉಪನಿರ್ದೇಶಕ ಎಚ್.ಎಸ್. ಪ್ರಭುರಾಜ್, ಗುರುಶಾಂತ ಪಾಟೀಲ, ಕಲಬುರ್ಗಿ ಮತ್ತು ಯಾದಗಿರಿ ಕೆ.ಎಚ್.ಎಫ್ ಜಿಲ್ಲಾ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ, ಜಿಲ್ಲಾ ಹಾಪ್ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಪರಮೇಶ್ವರ ಶಿಖರೆ, ಸಂಘದ ನಿರ್ದೇಶಕ ಸುಭಾಷ ಭುವಿ, ಬಸವರಾಜ ಐ.ಕೆ, ಬಾಬುರಾವ ಗೊಬ್ಬೂರ ಹಾಗೂ ಇತರ ನಿರ್ದೇಶಕರು ಇದ್ದರು. ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಸಹ ಸಂಚಾರಿ ವಾಹನಗಳ ಮೂಲಕ ವಿವಿಧೆಡೆ ತೆರಳಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲಾಗಿತ್ತು.