<p><strong>ಕಮಲಾಪುರ</strong>: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಕ್ರಮವಾಗಿ ತೇಗದ ಗಿಡ ಕಟಾವು ಮಾಡಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ ಅಡಚಣೆಯಾದ 21 ನೀಲಗಿರಿ ಗಿಡಗಳ ಕಟಾವಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿತ್ತು. ಈ 21 ಗಿಡಗಳನ್ನು ಎರಡು ತಿಂಗಳ ಮುಂಚೆಯೇ ಕಟಾವು ಮಾಡಿಕೊಂಡು ತೆರಳಿದ್ದರು. ಕಟ್ಟಡಕ್ಕೆ ಅಡಚಣೆಯಾಗದ ಒಂದು ಸಾಗುವಾನಿ ಮರ, ಒಂದು ಹುಣಸೆ ಮರ ಬಾಕಿ ಉಳಿದಿದ್ದವು. ಇವುಗಳನ್ನು ಕಟಾವು ಮಾಡದಂತೆ ಆರೋಗ್ಯ ಇಲಾಖೆ ಸಹಾಯಕ ಎಂಜಿನಿಯರ್ ವಿಠಲ ಜಾಧವ್ ಅವರಿಗೆ ಅರಣ್ಯ ಇಲಾಖೆಯವರು ತಿಳಿಸಿದ್ದರು.</p>.<p>ಇಷ್ಟಾದರೂ ಕಳೆದ ನ.4ರಂದು ಸುಮಾರು ಒಂದುವರೆ ಮೀಟರ ಸುತ್ತಳತೆಯ ದಪ್ಪ, ಸುಮಾರು 25 ಅಡಿ ಎತ್ತರದ ಸಾಗುವಾನಿ(ತೇಗ) ಮರ ಹಾಗೂ ಒಂದು ಹುಣಸೆ ಮರ ಕಟಾವು ಮಾಡಿ ಕೊಂಡ್ಯೊಯ್ದಿದ್ದಾರೆ. ಸುಮಾರು ₹ 50 ಸಾವಿರ ಬೆಲೆ ಬಾಳು ಈ ಮರ ಅಕ್ರಮವಾಗಿ ಕೊಂಡ್ಯೊಯ್ದಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶರಣಗೌಡ ತಿಳಿಸಿದ್ದಾರೆ.</p>.<p>ನಾವು ಕಟಾವು ಮಾಡದಂತೆ ತಿಳಿಸಿದರು ಕಟಾವು ಮಾಡಲಾಗಿದೆ. ಈ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಆರ್ಎಫ್ಓ ಗುರುರಾಜ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲಾಪುರ</strong>: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಕ್ರಮವಾಗಿ ತೇಗದ ಗಿಡ ಕಟಾವು ಮಾಡಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ ಅಡಚಣೆಯಾದ 21 ನೀಲಗಿರಿ ಗಿಡಗಳ ಕಟಾವಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿತ್ತು. ಈ 21 ಗಿಡಗಳನ್ನು ಎರಡು ತಿಂಗಳ ಮುಂಚೆಯೇ ಕಟಾವು ಮಾಡಿಕೊಂಡು ತೆರಳಿದ್ದರು. ಕಟ್ಟಡಕ್ಕೆ ಅಡಚಣೆಯಾಗದ ಒಂದು ಸಾಗುವಾನಿ ಮರ, ಒಂದು ಹುಣಸೆ ಮರ ಬಾಕಿ ಉಳಿದಿದ್ದವು. ಇವುಗಳನ್ನು ಕಟಾವು ಮಾಡದಂತೆ ಆರೋಗ್ಯ ಇಲಾಖೆ ಸಹಾಯಕ ಎಂಜಿನಿಯರ್ ವಿಠಲ ಜಾಧವ್ ಅವರಿಗೆ ಅರಣ್ಯ ಇಲಾಖೆಯವರು ತಿಳಿಸಿದ್ದರು.</p>.<p>ಇಷ್ಟಾದರೂ ಕಳೆದ ನ.4ರಂದು ಸುಮಾರು ಒಂದುವರೆ ಮೀಟರ ಸುತ್ತಳತೆಯ ದಪ್ಪ, ಸುಮಾರು 25 ಅಡಿ ಎತ್ತರದ ಸಾಗುವಾನಿ(ತೇಗ) ಮರ ಹಾಗೂ ಒಂದು ಹುಣಸೆ ಮರ ಕಟಾವು ಮಾಡಿ ಕೊಂಡ್ಯೊಯ್ದಿದ್ದಾರೆ. ಸುಮಾರು ₹ 50 ಸಾವಿರ ಬೆಲೆ ಬಾಳು ಈ ಮರ ಅಕ್ರಮವಾಗಿ ಕೊಂಡ್ಯೊಯ್ದಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶರಣಗೌಡ ತಿಳಿಸಿದ್ದಾರೆ.</p>.<p>ನಾವು ಕಟಾವು ಮಾಡದಂತೆ ತಿಳಿಸಿದರು ಕಟಾವು ಮಾಡಲಾಗಿದೆ. ಈ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಆರ್ಎಫ್ಓ ಗುರುರಾಜ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>