ಕಲ್ಯಾಣ ಕರ್ನಾಟಕ ರೈತರು ಕೃಷಿಯೇ ತಮ್ಮ ಬದುಕಿನ ಜೀವಾಳವನ್ನಾಗಿಸಿಕೊಂಡವರು. ವರ್ಷವಿಡಿ ದುಡಿದು ಬೆಳೆದ ಬೆಳೆಯನ್ನು ರಾಶಿಮಾಡಿ ವರ್ಷಪೂರ್ತಿ ಬಳಸುವುದು ಇಲ್ಲಿನ ಕೃಷಿಕರ ಪರಿವಿಡಿ. ಅದರಲ್ಲಿಯೂ, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸೂಗೂರು ಗ್ರಾಮಸ್ಥರು ಸುಗ್ಗಿಯ ಸಂದರ್ಭದಲ್ಲಿ, ಹಳೆಯ ಹಂತಿ ಪದ್ಧತಿಯ ಮೂಲಕ ಜೋಳದ ರಾಶಿ ನಡೆಸೋದು ವಿಶೇಷ.