<p><strong>ಯಡ್ರಾಮಿ (ಕಲಬುರಗಿ ಜಿಲ್ಲೆ):</strong> ಈ ಭಾಗದಲ್ಲಿ ಹೆಸರುವಾಸಿಯಾಗಿರುವ ತಾಲ್ಲೂಕಿನ ಕಡಕೋಳ ಗ್ರಾಮದ ಮಡಿವಾಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಮಹಾರಥೋತ್ಸವದ ವೇಳೆ ತೇರಿನ ಆ್ಯಕ್ಸೆಲ್ ಮುರಿದಿದ್ದು, ವಾರ್ಷಿಕ ರಥೋತ್ಸವ ಅರ್ಧಕ್ಕೆ ಮೊಟಕುಗೊಂಡಿದೆ.</p><p>ನಿಗದಿಯಂತೆ ಸೂರ್ಯಾಸ್ತದ ಹೊತ್ತಿಗೆ ಮಠದ ಪೀಠಾಧಿಪತಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದ್ದರು. ಬಳಿಕ ಭಕ್ತರು ಭಕ್ತಿಭಾವದಿಂದ ಮಡಿವಾಳೇಶ್ವರ ಪರ ಘೋಷಣೆ ಮೊಳಗಿಸುತ್ತ ತೇರು ಎಳೆಯುತ್ತಿದ್ದರು. </p><p>ಮಠದ ಎದುರಿನಿಂದ ತೇರು 20 ಮೀಟರ್ ಸಾಗುವಷ್ಟರಲ್ಲಿ ರಥದ ಆ್ಯಕ್ಸೆಲ್ ಮುರಿಯಿತು. ಇದರಿಂದ ರಥೋತ್ಸವ ಅರ್ಧದಲ್ಲೇ ನಿಂತಿದೆ.</p><p>ಅವಘಡದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಸುತ್ತಲಿನ ಭಕ್ತರನ್ನು ಚದುರಿಸಿದರು. ದೇವಸ್ಥಾನ ಸಮಿತಿಯವರು ರಥದ ಬುಡಕ್ಕೆ ಸದ್ಯ ಕಲ್ಲು ಹಾಗೂ ಮರದ ತುಂಡು ಜೋಡಿಸಿಟ್ಟು ಅದು ಬೀಳದಂತೆ ಕ್ರಮಹಿಸಿದ್ದಾರೆ.</p><p>ಪ್ರತಿ ವರ್ಷ ಜಾತ್ರೆಯ ಅಂಗವಾಗಿ ರಥವನ್ನು ಮಠದ ಮುಂಭಾಗದಿಂದ ಕಡಕೋಳ ಗ್ರಾಮ ಪಂಚಾಯಿತಿ ತನಕ ಎಳೆದು ಮರಳಿ ಮಠದ ಎದುರು ತಂದು ನಿಲ್ಲಿಸಲಾಗುತ್ತಿತ್ತು. ಆದರೆ, ಈ ಸಲ ಅರ್ಧದಲ್ಲೆ ರಥ ನಿಂತಿದ್ದು, ಸಂಭ್ರಮದಿಂದ ತೇರು ಎಳೆಯಲು, ರಥೋತ್ಸವ ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರು ನಿರಾಸೆ ಅನುಭವಿಸಿದರು.</p>.ಕಡಕೋಳ ಮಡಿವಾಳಪ್ಪ ಜಾತ್ರೆ:ಸಜ್ಜೆ ರೊಟ್ಟಿ ಜೊತೆಗೆ ತರಹೇವಾರಿ ಪಲ್ಯಗಳ ಸುಗ್ಗಿ .ಕಲಬುರಗಿ: ಕಡಕೋಳ ಮಡಿವಾಳೇಶ್ವರ ಪುರಾಣ ನಾಳೆಯಿಂದ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಡ್ರಾಮಿ (ಕಲಬುರಗಿ ಜಿಲ್ಲೆ):</strong> ಈ ಭಾಗದಲ್ಲಿ ಹೆಸರುವಾಸಿಯಾಗಿರುವ ತಾಲ್ಲೂಕಿನ ಕಡಕೋಳ ಗ್ರಾಮದ ಮಡಿವಾಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಮಹಾರಥೋತ್ಸವದ ವೇಳೆ ತೇರಿನ ಆ್ಯಕ್ಸೆಲ್ ಮುರಿದಿದ್ದು, ವಾರ್ಷಿಕ ರಥೋತ್ಸವ ಅರ್ಧಕ್ಕೆ ಮೊಟಕುಗೊಂಡಿದೆ.</p><p>ನಿಗದಿಯಂತೆ ಸೂರ್ಯಾಸ್ತದ ಹೊತ್ತಿಗೆ ಮಠದ ಪೀಠಾಧಿಪತಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದ್ದರು. ಬಳಿಕ ಭಕ್ತರು ಭಕ್ತಿಭಾವದಿಂದ ಮಡಿವಾಳೇಶ್ವರ ಪರ ಘೋಷಣೆ ಮೊಳಗಿಸುತ್ತ ತೇರು ಎಳೆಯುತ್ತಿದ್ದರು. </p><p>ಮಠದ ಎದುರಿನಿಂದ ತೇರು 20 ಮೀಟರ್ ಸಾಗುವಷ್ಟರಲ್ಲಿ ರಥದ ಆ್ಯಕ್ಸೆಲ್ ಮುರಿಯಿತು. ಇದರಿಂದ ರಥೋತ್ಸವ ಅರ್ಧದಲ್ಲೇ ನಿಂತಿದೆ.</p><p>ಅವಘಡದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಸುತ್ತಲಿನ ಭಕ್ತರನ್ನು ಚದುರಿಸಿದರು. ದೇವಸ್ಥಾನ ಸಮಿತಿಯವರು ರಥದ ಬುಡಕ್ಕೆ ಸದ್ಯ ಕಲ್ಲು ಹಾಗೂ ಮರದ ತುಂಡು ಜೋಡಿಸಿಟ್ಟು ಅದು ಬೀಳದಂತೆ ಕ್ರಮಹಿಸಿದ್ದಾರೆ.</p><p>ಪ್ರತಿ ವರ್ಷ ಜಾತ್ರೆಯ ಅಂಗವಾಗಿ ರಥವನ್ನು ಮಠದ ಮುಂಭಾಗದಿಂದ ಕಡಕೋಳ ಗ್ರಾಮ ಪಂಚಾಯಿತಿ ತನಕ ಎಳೆದು ಮರಳಿ ಮಠದ ಎದುರು ತಂದು ನಿಲ್ಲಿಸಲಾಗುತ್ತಿತ್ತು. ಆದರೆ, ಈ ಸಲ ಅರ್ಧದಲ್ಲೆ ರಥ ನಿಂತಿದ್ದು, ಸಂಭ್ರಮದಿಂದ ತೇರು ಎಳೆಯಲು, ರಥೋತ್ಸವ ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರು ನಿರಾಸೆ ಅನುಭವಿಸಿದರು.</p>.ಕಡಕೋಳ ಮಡಿವಾಳಪ್ಪ ಜಾತ್ರೆ:ಸಜ್ಜೆ ರೊಟ್ಟಿ ಜೊತೆಗೆ ತರಹೇವಾರಿ ಪಲ್ಯಗಳ ಸುಗ್ಗಿ .ಕಲಬುರಗಿ: ಕಡಕೋಳ ಮಡಿವಾಳೇಶ್ವರ ಪುರಾಣ ನಾಳೆಯಿಂದ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>