ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಬಯಲಾಟ, ಸಣ್ಣಾಟಕ್ಕೆ ಹೊಸರೂಪ ಅಗತ್ಯ: ಅಪ್ಪಾರಾವ ಅಕ್ಕೋಣಿ

ಇಬ್ಬರು ಕಲಾವಿದರಿಗೆ ಎಸ್‌.ಬಿ.ಜಂಗಮಶೆಟ್ಟಿ, ಸುಭದ್ರಾದೇವಿ ಜಂಗಮಶೆಟ್ಟಿ ಪ್ರಶಸ್ತಿ ಪ್ರದಾನ
Published : 21 ಜುಲೈ 2025, 6:48 IST
Last Updated : 21 ಜುಲೈ 2025, 6:48 IST
ಫಾಲೋ ಮಾಡಿ
Comments
ಇದು ನನಗಿಂತಲೂ ಹೆಚ್ಚಾಗಿ ವೃತ್ತಿರಂಗಭೂಮಿಗೆ ಸಂದ ಪ್ರಶಸ್ತಿ. ಪ್ರಶಸ್ತಿ ಸ್ವೀಕರಿಸಿದ ಕೈಗಳು ನನ್ನದಾದರೂ ಇದರ ಹಿಂದೆ ಬಹಳ ಕೈಗಳ ಶ್ರಮವಿದೆ. ನನ್ನ ತಾಯಿ ಸೇರಿದಂತೆ ಆ ಎಲ್ಲರಿಗೂ ಈ ಪ್ರಶಸ್ತಿ ಅರ್ಪಣೆ
ದಯಾನಂದ ಬೀಳಗಿ ಎಸ್‌.ಬಿ.ಜಂಗಮಶೆಟ್ಟಿ ಪ್ರಶಸ್ತಿ ಪುರಸ್ಕೃತರು
ನನ್ನ ಮಿಮಿಕ್ರಿಗೆ ಪ್ರಕೃತಿಯೇ ಗುರು. ನಮ್ಮ ತಂದೆ–ತಾಯಿ ಕೊಟ್ಟ ಉತ್ತಮ ಸಂಸ್ಕಾರ ರಂಗಭೂಮಿ ನನ್ನ ಬದುಕನ್ನು ರೂಪಿಸಿವೆ. ಅದುವೇ ದಕ್ಷಿಣದ ನನ್ನನ್ನು ಪ್ರಶಸ್ತಿ ಸ್ವೀಕರಿಸಲು ಕಲಬುರಗಿಗೆ ಕರೆ ತಂದಿದೆ
ಗೀತಾ ಮೋಂಟಡ್ಕ ಸುಭದ್ರಾದೇವಿ ಜಂಗಮಶೆಟ್ಟಿ ಪ್ರಶಸ್ತಿ ಪುರಸ್ಕೃತರು
ರಂಜಿಸಿದ ಹಾಸ್ಯ ಮಿಮಿಕ್ರಿ...
ಕಲಾವಿದ ದಯಾನಂದ ಬೀಳಗಿ ಅವರು ‘ಕುಂಟ ಕೋಣ ಮೂಕ ಜಾಣ’ ನಾಟಕದ ಸನ್ನಿವೇಶವೊಂದನ್ನು ಪ್ರಸ್ತುತಪಡಿಸಿದರು. ಅವರ ಹಾಸ್ಯ ಸಂಭಾಷಣೆಗೆ ನೆರೆದಿದ್ದವರು ನಕ್ಕು ನಲಿದರು. ಕಲಾವಿದೆ ಗೀತಾ ಮೋಂಟಡ್ಕ ಪ್ರಕೃತಿಯಲ್ಲಿನ ‍ಪ್ರಾಣಿ–ಪಕ್ಷಿಗಳ ಕಲರವ ಯಾವುದೇ ಸಾಧನವಿಲ್ಲದೇ ನಾದವಾಗಿ ಹೊಮ್ಮಿಸಿ ಚಪ್ಪಾಳೆ ಗಿಟ್ಟಿಸಿದರು. ಗುಬ್ಬಚ್ಚಿ ಚಿಲಿಪಿಲಿ ಕಾಗೆ– ಹುಂಚದ ಕೂಗಾಟ ಕಂತ್ರಿ‌ನಾಯಿ‌ ಬೊಗಳುವಿಕೆ ಸಾಕಿದ ನಾಯಿಯ ಕುಂಯಿಗುಟ್ಟುವಿಕೆ ಬೆಕ್ಕು–ಮರಿ ಬೆಕ್ಕಿನ ‘ಮೀಯಾಂ’ ಸಂಭಾಷಣೆ ಮೇಕೆಯ ಕೂಗುವಿಕೆ ಪುಟಾಣಿ ಮಗುವಿನ ಅಳು ಪ್ರಯಾಣ ಆರಂಭಿಸಿದ ರೈಲಿನ ಸದ್ದು... ನೆರೆದಿದ್ದವರ ಮನಸೂರೆಗೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT