ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಗುರುವಾರ ಸಂಭ್ರಮ ಮನೆ ಮಾಡಿತ್ತು. ಭಾವೈಕ್ಯದ ಪ್ರತೀಕ, ತತ್ವಪದ ಸಾಹಿತ್ಯದ ಅಗ್ರಪಂಕ್ತಿಯ ಗುರುವಾದ ಕಡಕೋಳ ಮಡಿವಾಳಪ್ಪನವರ ಜಾತ್ರೆಯ ವೈಭವವನ್ನು ಕಣ್ತುಂಬಿಕೊಳ್ಳಲು ಭಕ್ತ ಗಣವೇ ಕಡಕೋಳದತ್ತ ಹೆಜ್ಜೆ ಹಾಕಿತು. ರಥೋತ್ಸವವೂ ಸಂಭ್ರಮವನ್ನು ದುಪ್ಪಟ್ಟುಗೊಳಿಸಿತು.