ತಮ್ಮ ಮೇಲೆ ವೈಯಕ್ತಿಕ ನಿಂದನೆ ಮಾಡಿರುವ ಬಿಜೆಪಿ ಸಂಸದ ಪ್ರತಾಪ ಸಿಂಹ ಸೇರಿದಂತೆ ಬಿಜೆಪಿ ಮುಖಂಡರ ಹೇಳಿಕೆ ಕುರಿತು ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸತ್ಯದ ವಿಚಾರ ಮಾತನಾಡುವಾಗ ಅನೇಕ ಅಡೆ-ತಡೆಗಳು ಬರುತ್ತವೆ. ಆದರೆ, ಅದಕ್ಕೆಲ್ಲಾ ಎದೆಗುಂದದೆ ಮುನ್ನುಗ್ಗಲು ಕಲಿತಿದ್ದು ಬುದ್ಧ-ಬಸವ-ಅಂಬೇಡ್ಕರ್ ಅವರ ಜೀವನ ಮತ್ತು ವಿಚಾರಧಾರೆಗಳಿಂದ. ಅವರು ಹಾಕಿಕೊಟ್ಟ ಸತ್ಯ, ಹೋರಾಟದ ಮಾರ್ಗದಲ್ಲಿ ಸಾಗುತ್ತೇನೆ ಮತ್ತು ಇದರಲ್ಲಿ ಗೆಲುವು ಕಾಣುತ್ತೇನೆ ಎಂಬ ಭರವಸೆ ಇದೆ' ಎಂದಿದ್ದಾರೆ.