<p><strong>ಅಫಜಲಪುರ</strong>: ತಾಲ್ಲೂಕಿನ ಚೌಡಾಪುರ್ ಗ್ರಾಮದ ಹತ್ತಿರದ ಚಿಣಮಗೇರಿ ಕೆಪಿಆರ್ ಸಕ್ಕರೆ ಕಾರ್ಖಾನೆಯ ಚಿಮುಣಿಯಿಂದ ಹೊರಬರುತ್ತಿರುವ ವಿಷಪೂರಿತ ಕಪ್ಪು-ಬಿಳುಪು ತುಣುಕುಗಳಿಂದ ಆಗುತ್ತಿರುವ ಸಮಸ್ಯೆ ಕುರಿತು ಚೌಡಾಪೂರ, ಚಿಣಮಗೇರಿ, ದೇವಲಗಾಣಗಾಪುರ, ತಾಂಡಾದ ಸಾರ್ವಜನಿಕರು ಹಾಗೂ ರೈತರು ಚೌಡಾಪುರ್ ವೃತ್ತದಲ್ಲಿ ಶುಕ್ರವಾರ 2 ಗಂಟೆಗಳ ಕಾಲ ರಸ್ತೆ ತಡೆದು ಟೈರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಮುಖಂಡ ಅವ್ವಣ್ಣಗೌಡ ಪಾಟೀಲ್ ಮಾತನಾಡಿ, ಕೆಪಿಆರ್ ಸಕ್ಕರೆ ಕಾರ್ಖಾನೆಯಿಂದ ಸುಮಾರು 10-15 ಗ್ರಾಮಗಳಿಗೆ ತೊಂದರೆಯಾಗುತ್ತಿದೆ. ಕಾರ್ಖಾನೆ ಹೊರಬಿಡುವ ಬೂದಿ ಹಾಗೂ ಹೊಗೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತು ಅನೇಕ ಬಾರಿ ತಹಶೀಲ್ದಾರ್ರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಶೀಘ್ರ ಕೆಪಿಆರ್ ಸಕ್ಕರೆ ಕಾರ್ಖಾನೆ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.</p>.<p>ರಮೇಶ್ ಜಮಾದಾರ, ಕಾಡಸಿದ್ದ, ಅವ್ವಣ್ಣಗೌಡ ಪಾಟೀಲ್, ಮಾಳಪ್ಪ ಪೂಜಾರಿ, ಮಲ್ಲಪ್ಪ ಮಾದರ್, ದೇವಿಂದ್ರ ಜಮಾದಾರ, ಕಲ್ಯಾಣಿ ಗಂಡೋಳಿ, ರಾಜು ಜಮಾದಾರ, ಆರ್.ಡಿ. ಪೂಜಾರಿ, ನಾಗರಾಜ ಚೋರಮೂಲೆ, ಶಿವಯೋಗಪ್ಪ ಬಿರಾದಾರ್, ಸುಭಾಸಚಂದ್ರ ದುಖಾಂದರ್, ಮಂಜು ಚಕ್ರ, ನಾಗಪ್ಪ ಕಂಬಾರ ಸೇರಿದಂತೆ ಅನೇಕರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಫಜಲಪುರ</strong>: ತಾಲ್ಲೂಕಿನ ಚೌಡಾಪುರ್ ಗ್ರಾಮದ ಹತ್ತಿರದ ಚಿಣಮಗೇರಿ ಕೆಪಿಆರ್ ಸಕ್ಕರೆ ಕಾರ್ಖಾನೆಯ ಚಿಮುಣಿಯಿಂದ ಹೊರಬರುತ್ತಿರುವ ವಿಷಪೂರಿತ ಕಪ್ಪು-ಬಿಳುಪು ತುಣುಕುಗಳಿಂದ ಆಗುತ್ತಿರುವ ಸಮಸ್ಯೆ ಕುರಿತು ಚೌಡಾಪೂರ, ಚಿಣಮಗೇರಿ, ದೇವಲಗಾಣಗಾಪುರ, ತಾಂಡಾದ ಸಾರ್ವಜನಿಕರು ಹಾಗೂ ರೈತರು ಚೌಡಾಪುರ್ ವೃತ್ತದಲ್ಲಿ ಶುಕ್ರವಾರ 2 ಗಂಟೆಗಳ ಕಾಲ ರಸ್ತೆ ತಡೆದು ಟೈರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಮುಖಂಡ ಅವ್ವಣ್ಣಗೌಡ ಪಾಟೀಲ್ ಮಾತನಾಡಿ, ಕೆಪಿಆರ್ ಸಕ್ಕರೆ ಕಾರ್ಖಾನೆಯಿಂದ ಸುಮಾರು 10-15 ಗ್ರಾಮಗಳಿಗೆ ತೊಂದರೆಯಾಗುತ್ತಿದೆ. ಕಾರ್ಖಾನೆ ಹೊರಬಿಡುವ ಬೂದಿ ಹಾಗೂ ಹೊಗೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಕುರಿತು ಅನೇಕ ಬಾರಿ ತಹಶೀಲ್ದಾರ್ರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಶೀಘ್ರ ಕೆಪಿಆರ್ ಸಕ್ಕರೆ ಕಾರ್ಖಾನೆ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.</p>.<p>ರಮೇಶ್ ಜಮಾದಾರ, ಕಾಡಸಿದ್ದ, ಅವ್ವಣ್ಣಗೌಡ ಪಾಟೀಲ್, ಮಾಳಪ್ಪ ಪೂಜಾರಿ, ಮಲ್ಲಪ್ಪ ಮಾದರ್, ದೇವಿಂದ್ರ ಜಮಾದಾರ, ಕಲ್ಯಾಣಿ ಗಂಡೋಳಿ, ರಾಜು ಜಮಾದಾರ, ಆರ್.ಡಿ. ಪೂಜಾರಿ, ನಾಗರಾಜ ಚೋರಮೂಲೆ, ಶಿವಯೋಗಪ್ಪ ಬಿರಾದಾರ್, ಸುಭಾಸಚಂದ್ರ ದುಖಾಂದರ್, ಮಂಜು ಚಕ್ರ, ನಾಗಪ್ಪ ಕಂಬಾರ ಸೇರಿದಂತೆ ಅನೇಕರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>