20 ವರ್ಷಗಳಿಂದ ನಾಲಾ ದುರಸ್ತಿ ಮಾಡಿಲ್ಲ. ಜಮೀನುಗಳಿಗೆ ನೀರು ಹರಿಯದ ಕಾರಣ ಗದ್ದೆಗಳ ಮೂಲಕ ನೀರು ಹರಿಸಿಕೊಳ್ಳುತ್ತಿದ್ದೇವೆ. ಕೂಡಲೇ ನಾಲೆಗಳ ದುರಸ್ತಿ ಮಾಡಿ ನೀರು ಹರಿಸಬೇಕು.
–ತಾಯಪ್ಪ ವಡ್ನಳ್ಳಿ, ಕುಂಬಾರಹಳ್ಳಿ ರೈತ
ಕೆರೆ ನೀರು ವ್ಯರ್ಥವಾಗಿ ಹರಿದು ಸಂಪರ್ಕ ರಸ್ತೆ ಮೇಲೆ ಬರುತ್ತಿದೆ. ರಸ್ತೆ ತುಂಬಾ ಜಾಲಿಮರಗಳು ಬೆಳೆದಿದ್ದು ನಡೆದು ಹೋಗಲು ಭಯ ಅನ್ನಿಸುತ್ತಿದೆ.
–ಮಾರುತಿ ಲಿಂಗೇರಿ, ಕುಂಬಾರಹಳ್ಳಿ ರೈತ
40 ಎಕರೆಗಿಂತ ಹೆಚ್ಚಿನ ವ್ಯಾಪ್ತಿ ಪ್ರದೇಶದ ಕೆರೆಗಳು ನಮ್ಮ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಕುಂಬಾರ ಹಳ್ಳಿ ಕೆರೆ ನಮ್ಮ ವ್ಯಾಪ್ತಿಗೆ ಬರದಿದ್ದರೂ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು.
- ರಾಜಶೇಖರ ಸಜ್ಜನಶೆಟ್ಟಿ, ಎಇಇ, ಸಣ್ಣ ನೀರಾವರಿ ಇಲಾಖೆ ಚಿತ್ತಾಪುರ
ಕುಂಬಾರಹಳ್ಳಿ ಕೆರೆಯ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದು