<p><strong>ಕಲಬುರಗಿ:</strong> ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸೀನಾ ನದಿಯು ಮುಂಡೆವಾಡಿ– ಪಾಕಣಿ ನಡುವಣ ರೈಲ್ವೆ ಸೇತುವೆ ಬಳಿ ಅಪಾಯಕಾರಿ ಮಟ್ಟಮೀರಿ ಹರಿಯುತ್ತಿದ್ದು, ಕಲಬುರಗಿಯಿಂದ ಮುಂಬೈ, ದೆಹಲಿಯತ್ತ ತೆರಳಬೇಕಿದ್ದ ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ರೈಲ್ವೆ ಪ್ರಯಾಣಿಕರು ಪರದಾಡಿದರು.</p><p>ಬೆಂಗಳೂರಿನಿಂದ ಮುಂಬೈನತ್ತ ಹೊರಟಿದ್ದ ಉದ್ಯಾನ್ ಎಕ್ಸ್ಪ್ರೆಸ್ ರೈಲು, ಚೆನ್ನೈ–ಮುಂಬೈ ಎಕ್ಸ್ಪ್ರೆಸ್ಗಳು ಕಳೆದ 8–10 ಗಂಟೆಗಳಿಂದ ಕಲಬುರಗಿ ನಿಲ್ದಾಣದಲ್ಲದೇ ತಂಗಿವೆ.</p><p>ಬೆಂಗಳೂರಿನಿಂದ ದೆಹಲಿಗೆ ತೆರಬೇಕಿದ್ದ ಕಲ್ಯಾಣ ಕರ್ನಾಟಕ ಎಕ್ಸ್ಪ್ರೆಸ್ ರೈಲು ಕಲಬುರಗಿ ನಿಲ್ದಾಣಕ್ಕೆ ನಿಗದಿತ ಸಮಯಕ್ಕೆ ತಲುಪಿದರೂ, ಮುಂದಿನ ಮಾರ್ಗದ ಕ್ಲಿಯರೆನ್ಸ್ ಸಿಗದೇ ಅದು ಬೆಳಿಗ್ಗೆ 9 ಗಂಟೆ ತನಕ ಕಲಬುರಗಿಯಲ್ಲೇ ನಿಂತಿತ್ತು. ಬಳಿಕ ಅದು ಗಾಣಗಾಪುರ ನಿಲ್ದಾಣಕ್ಕೆ ತೆರಳಿ ನಿಂತಿದೆ.</p>.<p><strong>ಮಾರ್ಗ ಬದಲು:</strong></p><p>ಚೆನ್ನೈ–ಮುಂಬೈ ಎಕ್ಸ್ಪ್ರೆಸ್ ರೈಲನ್ನು ಬೀದರ್, ಲಾತೂರ್ ಮಾರ್ಗವಾಗಿ ಕುರ್ದುವಾಡಿ ಜಂಕ್ಷನ್ ತಲುಪಿ ಅಲ್ಲಿಂದ ಮುಂಬೈನತ್ತ ತೆರಳುವಂತೆ ಮಾರ್ಗ ಬದಲಾವಣೆ ಮಾಡಲಾಯಿತು. ಈ ರೈಲು 8 ತಾಸುಗಳ ವಿಳಂಬದ ಬಳಿಕ ಬೀದರ್ನತ್ತ ಹೊರಟಿತು.</p><p>ಉದ್ಯಾನ್ ಎಕ್ಸ್ಪ್ರೆಸ್ ಮಾರ್ಗವನ್ನು ಬದಲಿಸಿದ್ದರೂ, ಮಧ್ಯಾಹ್ನ 3 ಗಂಟೆ ತನಕ ಕಲಬುರಗಿಯಿಂದ ಹೊರಟಿಲ್ಲ.</p>.<p><strong>ಎರಡು ರೈಲು ರದ್ದು:</strong></p><p>ಕಲಬುರಗಿಯಿಂದ ಸೊಲ್ಲಾಪುರ ಮಾರ್ಗವಾಗಿ ಕೊಲ್ಹಾಪುರಕ್ಕೆ ಹೋಗಬೇಕಿದ್ದ ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರಿಗೆ ಟಿಕೆಟ್ ಹಣವನ್ನೂ ಮರಳಿಸಲಾಗಿದೆ. ಅದೇ ಮಾರ್ಗವಾಗಿ ಕೊಲ್ಹಾಪುರದಿಂದ ಕಲಬುರಗಿಗೆ ಬರಬೇಕಿದ್ದ ರೈಲಿನ ಸೇವೆಯನ್ನೂ ರದ್ದುಪಡಿಸಲಾಗಿದೆ.</p><p>ಕಲಬುರಗಿ–ದೌಂಡ ನಡುವೆ ಸಂಚರಿಸಬೇಕಿದ್ದ ವಿಶೇಷ ರೈಲಿನ ಸೇವೆಯನ್ನು ಎರಡೂ ಬದಿಯಿಂದ ರದ್ದುಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸೀನಾ ನದಿಯು ಮುಂಡೆವಾಡಿ– ಪಾಕಣಿ ನಡುವಣ ರೈಲ್ವೆ ಸೇತುವೆ ಬಳಿ ಅಪಾಯಕಾರಿ ಮಟ್ಟಮೀರಿ ಹರಿಯುತ್ತಿದ್ದು, ಕಲಬುರಗಿಯಿಂದ ಮುಂಬೈ, ದೆಹಲಿಯತ್ತ ತೆರಳಬೇಕಿದ್ದ ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ರೈಲ್ವೆ ಪ್ರಯಾಣಿಕರು ಪರದಾಡಿದರು.</p><p>ಬೆಂಗಳೂರಿನಿಂದ ಮುಂಬೈನತ್ತ ಹೊರಟಿದ್ದ ಉದ್ಯಾನ್ ಎಕ್ಸ್ಪ್ರೆಸ್ ರೈಲು, ಚೆನ್ನೈ–ಮುಂಬೈ ಎಕ್ಸ್ಪ್ರೆಸ್ಗಳು ಕಳೆದ 8–10 ಗಂಟೆಗಳಿಂದ ಕಲಬುರಗಿ ನಿಲ್ದಾಣದಲ್ಲದೇ ತಂಗಿವೆ.</p><p>ಬೆಂಗಳೂರಿನಿಂದ ದೆಹಲಿಗೆ ತೆರಬೇಕಿದ್ದ ಕಲ್ಯಾಣ ಕರ್ನಾಟಕ ಎಕ್ಸ್ಪ್ರೆಸ್ ರೈಲು ಕಲಬುರಗಿ ನಿಲ್ದಾಣಕ್ಕೆ ನಿಗದಿತ ಸಮಯಕ್ಕೆ ತಲುಪಿದರೂ, ಮುಂದಿನ ಮಾರ್ಗದ ಕ್ಲಿಯರೆನ್ಸ್ ಸಿಗದೇ ಅದು ಬೆಳಿಗ್ಗೆ 9 ಗಂಟೆ ತನಕ ಕಲಬುರಗಿಯಲ್ಲೇ ನಿಂತಿತ್ತು. ಬಳಿಕ ಅದು ಗಾಣಗಾಪುರ ನಿಲ್ದಾಣಕ್ಕೆ ತೆರಳಿ ನಿಂತಿದೆ.</p>.<p><strong>ಮಾರ್ಗ ಬದಲು:</strong></p><p>ಚೆನ್ನೈ–ಮುಂಬೈ ಎಕ್ಸ್ಪ್ರೆಸ್ ರೈಲನ್ನು ಬೀದರ್, ಲಾತೂರ್ ಮಾರ್ಗವಾಗಿ ಕುರ್ದುವಾಡಿ ಜಂಕ್ಷನ್ ತಲುಪಿ ಅಲ್ಲಿಂದ ಮುಂಬೈನತ್ತ ತೆರಳುವಂತೆ ಮಾರ್ಗ ಬದಲಾವಣೆ ಮಾಡಲಾಯಿತು. ಈ ರೈಲು 8 ತಾಸುಗಳ ವಿಳಂಬದ ಬಳಿಕ ಬೀದರ್ನತ್ತ ಹೊರಟಿತು.</p><p>ಉದ್ಯಾನ್ ಎಕ್ಸ್ಪ್ರೆಸ್ ಮಾರ್ಗವನ್ನು ಬದಲಿಸಿದ್ದರೂ, ಮಧ್ಯಾಹ್ನ 3 ಗಂಟೆ ತನಕ ಕಲಬುರಗಿಯಿಂದ ಹೊರಟಿಲ್ಲ.</p>.<p><strong>ಎರಡು ರೈಲು ರದ್ದು:</strong></p><p>ಕಲಬುರಗಿಯಿಂದ ಸೊಲ್ಲಾಪುರ ಮಾರ್ಗವಾಗಿ ಕೊಲ್ಹಾಪುರಕ್ಕೆ ಹೋಗಬೇಕಿದ್ದ ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರಿಗೆ ಟಿಕೆಟ್ ಹಣವನ್ನೂ ಮರಳಿಸಲಾಗಿದೆ. ಅದೇ ಮಾರ್ಗವಾಗಿ ಕೊಲ್ಹಾಪುರದಿಂದ ಕಲಬುರಗಿಗೆ ಬರಬೇಕಿದ್ದ ರೈಲಿನ ಸೇವೆಯನ್ನೂ ರದ್ದುಪಡಿಸಲಾಗಿದೆ.</p><p>ಕಲಬುರಗಿ–ದೌಂಡ ನಡುವೆ ಸಂಚರಿಸಬೇಕಿದ್ದ ವಿಶೇಷ ರೈಲಿನ ಸೇವೆಯನ್ನು ಎರಡೂ ಬದಿಯಿಂದ ರದ್ದುಗೊಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>