<figcaption>""</figcaption>.<p><strong>ಕಲಬುರ್ಗಿ: </strong>ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ಪ್ರಯಾಣಿಕರಿಲ್ಲದೇ ಬಸ್ಸುಗಳು ಗಂಟೆಗಟ್ಟಲೇ ಕಾದು ನಿಂತವು. ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸಲು ಜನ ಆಸಕ್ತಿ ತೋರದ ಕಾರಣ ನಿಲ್ದಾಣದಲ್ಲಿ ಜನರಿಗಿಂತ ಹೆಚ್ಚು ಸಿಬ್ಬಂದಿಯೇ ಕಂಡರು.</p>.<p>ವಿವಿಧೆಡೆ ಸಂಚರಿಸಲು 50 ಬಸ್ಗಳು ಸಿದ್ಧವಾಗಿ ನಿಂತಿದ್ದರೂ ಪ್ರಯಾಣಿಕರು ಬರಲಿಲ್ಲ. ಬೆಳಿಗ್ಗೆ 7ರಿಂದ 11ರವರೆಗೆ ಕೇವಲ 270 ಜನ ಮಾತ್ರ ನಿಲ್ದಾಣದೊಳಗೆ ಬಂದಿದ್ದಾರೆ.</p>.<p>ನೆರೆಯ ಜಿಲ್ಲಾ ಕೇಂದ್ರಗಳಾದ ಬೀದರ್, ವಿಜಯಪುರ, ಯಾದಗಿರಿಗೆ ಹಾಗೂ ತಾಲ್ಲೂಕು ಕೇಂದ್ರಗಳಾದ ಆಳಂದ, ಚಿತ್ತಾಪುರ, ಕಾಳಗಿ, ಸುರಪುರ, ಲಿಂಗಸೂರುಗಳಿಗೆ ತಲಾ ಒಂದು ಬಸ್ ಮಾತ್ರ ಸಂಚರಿಸಿದೆ.</p>.<p>ಕೋವಿಡ್-19 ಸೋಂಕಿತರು ಕಂಡುಬಂದ ಚಿಂಚೋಳಿ, ಕಮಲಾಪುರ, ಸೇಡಂ ತಾಲ್ಲೂಕುಗಳಿಗೆ ಹೋಗಲು ಸಿದ್ಧವಾದ ಬಸ್ಸುಗಳು ಒಬ್ಬರೂ ಪ್ರಯಾಣಿಕರಿಲ್ಲದೇ ಖಾಲಿಯೇ ನಿಂತವು.</p>.<p>ಒಂದು ಬಸ್ಸಿನಲ್ಲಿ ಕನಿಷ್ಠ 25ರಿಂದ 30 ಜನ ತುಂಬಿದರೆ ಮಾತ್ರ ಓಡಿಸುವಂತೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಹಾಗಾಗಿ, ಸುಮಾರು 50 ಬಸ್ಸುಗಳು ನಿಲ್ದಾಣದಲ್ಲೇ ಠಿಕಾಣಿ ಹೂಡಿದವು.</p>.<p>ಕಲಬುರ್ಗಿ ಬಸ್ ನಿಲ್ದಾಣದೊಳಗೆ ಬಂದ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ ಸಿಬ್ಬಂದಿ.</p>.<div style="text-align:center"><figcaption><em><strong>ಕಲಬುರ್ಗಿ ಬಸ್ ನಿಲ್ದಾಣದೊಳಗೆ ಬಂದ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ ಸಿಬ್ಬಂದಿ</strong></em></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಕಲಬುರ್ಗಿ: </strong>ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಮಂಗಳವಾರ ಪ್ರಯಾಣಿಕರಿಲ್ಲದೇ ಬಸ್ಸುಗಳು ಗಂಟೆಗಟ್ಟಲೇ ಕಾದು ನಿಂತವು. ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸಲು ಜನ ಆಸಕ್ತಿ ತೋರದ ಕಾರಣ ನಿಲ್ದಾಣದಲ್ಲಿ ಜನರಿಗಿಂತ ಹೆಚ್ಚು ಸಿಬ್ಬಂದಿಯೇ ಕಂಡರು.</p>.<p>ವಿವಿಧೆಡೆ ಸಂಚರಿಸಲು 50 ಬಸ್ಗಳು ಸಿದ್ಧವಾಗಿ ನಿಂತಿದ್ದರೂ ಪ್ರಯಾಣಿಕರು ಬರಲಿಲ್ಲ. ಬೆಳಿಗ್ಗೆ 7ರಿಂದ 11ರವರೆಗೆ ಕೇವಲ 270 ಜನ ಮಾತ್ರ ನಿಲ್ದಾಣದೊಳಗೆ ಬಂದಿದ್ದಾರೆ.</p>.<p>ನೆರೆಯ ಜಿಲ್ಲಾ ಕೇಂದ್ರಗಳಾದ ಬೀದರ್, ವಿಜಯಪುರ, ಯಾದಗಿರಿಗೆ ಹಾಗೂ ತಾಲ್ಲೂಕು ಕೇಂದ್ರಗಳಾದ ಆಳಂದ, ಚಿತ್ತಾಪುರ, ಕಾಳಗಿ, ಸುರಪುರ, ಲಿಂಗಸೂರುಗಳಿಗೆ ತಲಾ ಒಂದು ಬಸ್ ಮಾತ್ರ ಸಂಚರಿಸಿದೆ.</p>.<p>ಕೋವಿಡ್-19 ಸೋಂಕಿತರು ಕಂಡುಬಂದ ಚಿಂಚೋಳಿ, ಕಮಲಾಪುರ, ಸೇಡಂ ತಾಲ್ಲೂಕುಗಳಿಗೆ ಹೋಗಲು ಸಿದ್ಧವಾದ ಬಸ್ಸುಗಳು ಒಬ್ಬರೂ ಪ್ರಯಾಣಿಕರಿಲ್ಲದೇ ಖಾಲಿಯೇ ನಿಂತವು.</p>.<p>ಒಂದು ಬಸ್ಸಿನಲ್ಲಿ ಕನಿಷ್ಠ 25ರಿಂದ 30 ಜನ ತುಂಬಿದರೆ ಮಾತ್ರ ಓಡಿಸುವಂತೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಹಾಗಾಗಿ, ಸುಮಾರು 50 ಬಸ್ಸುಗಳು ನಿಲ್ದಾಣದಲ್ಲೇ ಠಿಕಾಣಿ ಹೂಡಿದವು.</p>.<p>ಕಲಬುರ್ಗಿ ಬಸ್ ನಿಲ್ದಾಣದೊಳಗೆ ಬಂದ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ ಸಿಬ್ಬಂದಿ.</p>.<div style="text-align:center"><figcaption><em><strong>ಕಲಬುರ್ಗಿ ಬಸ್ ನಿಲ್ದಾಣದೊಳಗೆ ಬಂದ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿದ ಸಿಬ್ಬಂದಿ</strong></em></figcaption></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>