ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಪಿಯು ಫಲಿತಾಂಶ: ಕಲಬುರಗಿಗೆ 28ನೇ ಸ್ಥಾನ, ಶೇ 6.11ರಷ್ಟು ಫಲಿತಾಂಶ ಹೆಚ್ಚಳ

Published : 11 ಏಪ್ರಿಲ್ 2024, 6:37 IST
Last Updated : 11 ಏಪ್ರಿಲ್ 2024, 6:37 IST
ಫಾಲೋ ಮಾಡಿ
Comments
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಓದಿಗೆ ಪೂರಕವಾದ ಕಲಿಕಾ ವಾತಾವರಣವನ್ನು ಕಾಲೇಜಿನಲ್ಲಿ ಒದಗಿಸಲಾಗಿತ್ತು. ಜತೆಗೆ ಅಧ್ಯಯನ ಸಾಮಗ್ರಿಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ನೀಡಿದ್ದೆವು
ಪ್ರೊ.ಚನ್ನಾರೆಡ್ಡಿ ಪಾಟೀಲ ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ
ವಿಜ್ಞಾನ ವಿಭಾಗ: ಇಬ್ಬರಿಗೆ 4ನೇ ಸ್ಥಾನ
ವಿಜ್ಞಾನ ವಿಭಾಗದಲ್ಲಿ ನಗರದ ಶರಣಬಸವೇಶ್ವರ ವಸತಿ ಪಿಯು ಕಾಲೇಜು (ಎಸ್‌ಬಿಆರ್) ವಿದ್ಯಾರ್ಥಿ ಸಮರ್ಥ್ ಎಸ್‌.ಬಿ. ಹಾಗೂ ಸರ್ವಜ್ಞ ಪಿಯು ಕಾಲೇಜಿನ ಪ್ರವೀಣ್ ಸಿದ್ದಪ್ಪ ತಲಾ 595 ಅಂಕ ಪಡೆದು ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಅಫಜಲಪುರದ ನಿಸರ್ಗ ಪಿಯು ಕಾಲೇಜಿನ ಮಲ್ಲಪ್ಪ ಭೀಮರಾಯ 592 ಅಂಕಗಳೊಂದಿಗೆ ರಾಜ್ಯದಲ್ಲಿ 5ನೇ ಸ್ಥಾನ ಗಳಿಸಿದ್ದಾರೆ.
ರೈತನ ಮಗ ಟಾಪರ್: ಓದಿನ ಟಿಪ್ಸ್...
ವಿಜ್ಞಾನದಲ್ಲಿ 595 ಅಂಕ ಗಳಿಸಿದ ಸರ್ವಜ್ಞ ಪಿಯು ಕಾಲೇಜಿನ ಪ್ರವೀಣ್ ಕುಂಸಿವಾಡಿಯ ರೈತ ಸಿದ್ದಪ್ಪ ಅವರ ಮಗ. ಸಿದ್ದಪ್ಪ ಅವರು ಕೃಷಿಕರಾಗಿದ್ದು ಎಸ್ಸೆಸ್ಸೆಲ್ಸಿವರೆಗೆ ಮಹಾರಾಷ್ಟ್ರದ ಪುಣೆಯಲ್ಲಿ ಅಳಿಯನ ಮನೆಯಲ್ಲಿ ಇರಿಸಿ ಓದಿಸಿದ್ದರು. ಆ ಬಳಿಕ ಸರ್ವಜ್ಞ ಕಾಲೇಜಿಗೆ ಸೇರಿಸಿದರು. ಟಾಪರ್‌ ಪಡೆದ ಬಗ್ಗೆ ‘ಪ್ರಜಾವಾಣಿ’ ಜತೆಗೆ ಮಾತಾಡಿದ ಪ್ರವೀಣ್ ‘ಅಂದಿನ ಪಾಠಗಳನ್ನು ಅಂದೇ ಓದುತ್ತಿದ್ದೆ. ಓದಿಗೆ ಅಡ್ಡಿಯಾಗಬಾರದೆಂದು ಒಂದು ದಿನವೂ ಮೊಬೈಲ್ ಮುಟ್ಟಲಿಲ್ಲ. ಪುಸ್ತಕಗಳೇ ಸ್ನೇಹಿತರಾಗಿದ್ದವು. ಕಾಲೇಜು ತರಗತಿ ಬಳಿಕ 10 ತಾಸು ಓದುತ್ತಿದ್ದೆ. ಪ್ರತಿ ವಾರ ನಡೆಸುತ್ತಿದ್ದ ಕಿರು ಪರೀಕ್ಷೆಯಲ್ಲಿ ಅಗ್ರ ಸ್ಥಾನ ಪಡೆದು ಕ್ಯಾಶ್ ಪ್ರೈಜ್ ಗೆಲ್ಲುತ್ತಿದ್ದೆ. ಅದೇ ಇವತ್ತು ರ್‍ಯಾಂಕ್ ತಂದುಕೊಟ್ಟಿದೆ. ಸಂಜೆ ಕಾಲೇಜಿಗೆ ಬಂದು ‘ಅಧ್ಯಯನ ಅವಧಿ (ಸ್ಟಡಿ ಅವರ್‌)’ ಸದ್ಬಳಕೆಯೂ ಮಾಡಿಕೊಂಡೆ’ ಎಂದು ಸಂತಸ ವ್ಯಕ್ತಪಡಿಸಿದರು. ಮೊಬೈಲ್‌ ಗೀಳಿಲ್ಲ: ‘ತರಗತಿಯ ಪಾಠಗಳು ಅಧ್ಯಾಪಕರ ಮಾರ್ಗದರ್ಶನ ಬಹಳಷ್ಟು ನೆರವಾಗಿದೆ. ಮೊಬೈಲ್‌ನಿಂದ ಅಂತರ ಕಾಯ್ದುಕೊಂಡು ಓದುತ್ತಿದ್ದೆ. ಕಾಲೇಜಿನ ಅಧ್ಯಯನ ಅವಧಿಯ ಜತೆಗೆ ನಿರಂತರ ಓದಿಗೂ ಉಪನ್ಯಾಸಕರಾದ ತಾಯಿ–ತಂದೆಯ ಬೆಂಬಲವೂ ಇತ್ತು’ ಎನ್ನುತ್ತಾರೆ ಎಸ್‌ಬಿಆರ್ ಕಾಲೇಜಿನ ಸಮರ್ಥ್ ಎಸ್‌.ಬಿ.
ಫಲ ನೀಡಿದ ಮ್ಯಾರಥಾನ್ ಕ್ಲಾಸ್: ಡಿಡಿಪಿಯು
‘ಈ ಬಾರಿ 25ನೇ ಸ್ಥಾನ ಪಡೆಯುವ ಗುರಿಯೊಂದಿಗೆ ಉಪನ್ಯಾಸಕರ ಅನುಸಂಧಾನ ಮತ್ತು ಮ್ಯಾರಥಾನ್ ಕ್ಲಾಸ್‌ ನಡೆಸಿದ್ದರಿಂದ ಶೇ 6.11ರಷ್ಟು ಫಲಿತಾಂಶ ಹೆಚ್ಚಳವಾಗಿದೆ’ ಎಂದು ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ‘ಪ್ರಜಾವಣಿ’ಗೆ ತಿಳಿಸಿದರು. ‘ಶೇ 80ರಷ್ಟು ಫಲಿತಾಂಶ ಪಡೆಯಬೇಕು ಎಂದು ಸಾಕಷ್ಟು ತಯಾರಿ ಮಾಡಿಕೊಂಡು ಜಾರಿಗೆಯೂ ತಂದಿದ್ದೆವು. ಆದರೆ ಶೇ 75.48ರಷ್ಟು ಬಂತು. ಈ ವರ್ಷ ಆರಂಭದಿಂದಲೇ ಮ್ಯಾರಥಾನ್‌ ಕ್ಲಾಸ್ ಹಾಗೂ ಉಪನ್ಯಾಸಕರ ಅನುಸಂಧಾನ ಜಾರಿಗೆ ತಂದು ಫಲಿತಾಂಶವನ್ನು ಇನ್ನಷ್ಟು ಉತ್ತಮ ಪಡಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT