<p><strong>ಕಲಬುರ್ಗಿ: </strong>ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣದ ಅಂಗವಾಗಿ ಡಿ 5ರಂದು ಮಧ್ಯ ರೈಲ್ವೆಯು ಕಲಬುರ್ಗಿಯಿಂದ ಮುಂಬೈಗೆ ವಿಶೇಷ ರೈಲನ್ನು (01319–01320) ಓಡಿಸಲಿದೆ.</p>.<p>ಡಿ 5ರಂದು ರಾತ್ರಿ 8.40ಕ್ಕೆ ನಗರದಿಂದ ಹೊರಡುವ ರೈಲು ಸೊಲ್ಲಾಪುರ, ಕುರ್ದವಾಡಿ, ದೌಂಡ್, ಪುಣೆ, ಲೋನಾವಳಾ, ಕರ್ಜತ್, ಕಲ್ಯಾಣ್, ದಾದರ್ ಮೂಲಕ ಡಿ 6ರಂದು ಬೆಳಿಗ್ಗೆ 8.20ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ತಲುಪಲಿದೆ.</p>.<p>ಡಿಸೆಂಬರ್ 7ರಂದು ರಾತ್ರಿ 12.25ಕ್ಕೆ ಮುಂಬೈನಿಂದ ಹೊರಡುವ ರೈಲು ಅದೇ ದಿನ ಮಧ್ಯಾಹ್ನ 1.40ಕ್ಕೆ ಕಲಬುರ್ಗಿ ತಲುಪಲಿದೆ.</p>.<p>ಸೊಲ್ಲಾಪುರದಿಂದ ಡಿ 5ರಂದು ರಾತ್ರಿ 9.30ಕ್ಕೆ ಹೊರಡುವ ವಿಶೇಷ ರೈಲು (01315–01316) ಡಿ 6ರಂದು ಬೆಳಿಗ್ಗೆ 8.20ಕ್ಕೆ ಮುಂಬೈ ತಲುಪಲಿದೆ. ಡಿಸೆಂಬರ್ 7ರ ರಾತ್ರಿ 12.25ಕ್ಕೆ ಮುಂಬೈನಿಂದ ಹೊರಟು ಬೆಳಿಗ್ಗೆ 10.10ಕ್ಕೆ ಸೊಲ್ಲಾಪುರ ತಲುಪಲಿದೆ.</p>.<p><strong>ಹೈದರಾಬಾದ್ನಿಂದ ಮುಂಬೈಗೆ:</strong> ಸಂಸದ ಡಾ.ಉಮೇಶ ಜಾಧವ್ ಅವರ ಕೋರಿಕೆ ಮೇರೆಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೈದರಾಬಾದ್ನಿಂದ ಮುಂಬೈಗೆ ಡಿ 3ರಿಂದ 8ರವರೆಗೆ ಹುಸೇನ್ಸಾಗರ್ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಓಡಿಸಲಾಗುತ್ತಿದೆ. ತಾತ್ಕಾಲಿಕವಾಗಿ ಈ ರೈಲನ್ನು ಸ್ಥಗಿತಗೊಳಿಸಲಾಗಿತ್ತು.</p>.<p>ಮಹಾಪರಿನಿರ್ವಾಣದಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಜಾಧವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣದ ಅಂಗವಾಗಿ ಡಿ 5ರಂದು ಮಧ್ಯ ರೈಲ್ವೆಯು ಕಲಬುರ್ಗಿಯಿಂದ ಮುಂಬೈಗೆ ವಿಶೇಷ ರೈಲನ್ನು (01319–01320) ಓಡಿಸಲಿದೆ.</p>.<p>ಡಿ 5ರಂದು ರಾತ್ರಿ 8.40ಕ್ಕೆ ನಗರದಿಂದ ಹೊರಡುವ ರೈಲು ಸೊಲ್ಲಾಪುರ, ಕುರ್ದವಾಡಿ, ದೌಂಡ್, ಪುಣೆ, ಲೋನಾವಳಾ, ಕರ್ಜತ್, ಕಲ್ಯಾಣ್, ದಾದರ್ ಮೂಲಕ ಡಿ 6ರಂದು ಬೆಳಿಗ್ಗೆ 8.20ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ತಲುಪಲಿದೆ.</p>.<p>ಡಿಸೆಂಬರ್ 7ರಂದು ರಾತ್ರಿ 12.25ಕ್ಕೆ ಮುಂಬೈನಿಂದ ಹೊರಡುವ ರೈಲು ಅದೇ ದಿನ ಮಧ್ಯಾಹ್ನ 1.40ಕ್ಕೆ ಕಲಬುರ್ಗಿ ತಲುಪಲಿದೆ.</p>.<p>ಸೊಲ್ಲಾಪುರದಿಂದ ಡಿ 5ರಂದು ರಾತ್ರಿ 9.30ಕ್ಕೆ ಹೊರಡುವ ವಿಶೇಷ ರೈಲು (01315–01316) ಡಿ 6ರಂದು ಬೆಳಿಗ್ಗೆ 8.20ಕ್ಕೆ ಮುಂಬೈ ತಲುಪಲಿದೆ. ಡಿಸೆಂಬರ್ 7ರ ರಾತ್ರಿ 12.25ಕ್ಕೆ ಮುಂಬೈನಿಂದ ಹೊರಟು ಬೆಳಿಗ್ಗೆ 10.10ಕ್ಕೆ ಸೊಲ್ಲಾಪುರ ತಲುಪಲಿದೆ.</p>.<p><strong>ಹೈದರಾಬಾದ್ನಿಂದ ಮುಂಬೈಗೆ:</strong> ಸಂಸದ ಡಾ.ಉಮೇಶ ಜಾಧವ್ ಅವರ ಕೋರಿಕೆ ಮೇರೆಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಹೈದರಾಬಾದ್ನಿಂದ ಮುಂಬೈಗೆ ಡಿ 3ರಿಂದ 8ರವರೆಗೆ ಹುಸೇನ್ಸಾಗರ್ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಓಡಿಸಲಾಗುತ್ತಿದೆ. ತಾತ್ಕಾಲಿಕವಾಗಿ ಈ ರೈಲನ್ನು ಸ್ಥಗಿತಗೊಳಿಸಲಾಗಿತ್ತು.</p>.<p>ಮಹಾಪರಿನಿರ್ವಾಣದಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ಜಾಧವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>