ವಿಶ್ವನಾಥ ಪಾಟೀಲ ಹೆಬ್ಬಾಳ ಅಧಿಕಾರಾವಧಿಯಲ್ಲಿ ಈ ರಸ್ತೆಯಾಗಿದೆ. ಆಮೇಲೆ ನಾಲ್ಕು ಜನ ಶಾಸಕರಾಗಿದ್ದಾರೆ. ಇವರು ಯಾರೂ ಒಂದು ಬುಟ್ಟಿ ಕಂಕರ್ ಡಾಂಬರ್ ಹಾಕಿಲ್ಲ. ಭಗವಂತ ಖೂಬಾ ಅಂತೂ ಈಕಡೆ ಹೊರಳಿ ನೋಡಿಲ್ಲ.
ಪ್ರಕಾಶ ಗಂಜಿ ಗ್ರಾ.ಪಂ ಅಧ್ಯಕ್ಷ ಚಿಂಚೋಳಿ (ಎಚ್)
ನಮ್ಮ ಊರಿನಿಂದ ದಿನಾಲು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಕಲಬುರಗಿಗೆ ಹೋಗಿಬರುತ್ತಾರೆ. ಈ ಹದಗೆಟ್ಟ ಹೆದ್ದಾರಿಯಿಂದ ಅವರು ನಲುಗಿ ಹೋಗುತ್ತಿದ್ದಾರೆ. ಕೂಡಲೇ ಈ ಕಾಮಗಾರಿ ಕೈಗೊಳ್ಳಬೇಕು.