<p>ಕಲಬುರಗಿ: ‘ಇಪಿಎಫ್ ವ್ಯಾಪ್ತಿಯಿಂದ ಹೊರಗುಳಿದ ಉದ್ಯೋಗಿಗಳನ್ನು ಸ್ವಯಂಪ್ರೇರಣೆಯಿಂದ ದಾಖಲು ಮಾಡುವಂತೆ ಉತ್ತೇಜಿಸಲು ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ನವೆಂಬರ್ 1ರಿಂದ ನೋಂದಣಿ ಆರಂಭಿಸಲಾಗಿದ್ದು, 6 ತಿಂಗಳ ಕಾಲ ನೋಂದಣಿಗೆ ಅವಕಾಶ ಕಲ್ಪಿಸಿದೆ’ ಎಂದು ಭವಿಷ್ಯ ನಿಧಿ ಕಚೇರಿಯ ಕಲಬುರಗಿ ಪ್ರಾಂತೀಯ ಆಯುಕ್ತ ಎಂ.ಸುಬ್ರಮಣ್ಯಂ ಹೇಳಿದರು.</p>.<p>ನಗರದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವಲಯ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘2017ರ ಜುಲೈ 1 ರಿಂದ 2025ರ ಅಕ್ಟೋಬರ್ 31ರ ವರೆಗೆ ಕೆಲಸಕ್ಕೆ ಸೇರಿದ ಕಾರ್ಮಿಕರನ್ನು ಪಿ.ಎಫ್. ವ್ಯಾಪ್ತಿಗೆ ಸೇರಿಸದ ಪ್ರಕರಣಗಳಲ್ಲಿ (ನೌಕರರ ವಂತಿಗೆ ಪಡೆಯದ) ಅಂತಹ ನೌಕರರನ್ನು ಇ.ಪಿ.ಎಫ್.ಒ ಕಚೇರಿಯಲ್ಲಿ ನೋಂದಾಯಿತ ಉದ್ಯೋಗದಾತರು, 6 ತಿಂಗಳ ಕಾಲದ ವಿಶೇಷ ದಾಖಲಾತಿ ಅಭಿಯಾನದಲ್ಲಿ ಕೇವಲ ₹100 ದಂಡ ಪಾವತಿ ಮತ್ತು ಸಂಸ್ಥೆ ಪಾಲಿನ ಹಣ ಭರಿಸಿ ನೋಂದಾಯಿಸಬಹುದಾಗಿದೆ’ ಎಂದರು.</p>.<p>‘ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಬಹುತೇಕ ಕಂಪನಿಗಳು ನೌಕರರನ್ನು ಪಿ.ಎಫ್. ವ್ಯಾಪ್ತಿಗೆ ಒಳಪಡಿಸಿರುವುದಿಲ್ಲ. ಇದರಿಂದ ನೌಕರರು ಸರ್ಕಾರದಿಂದ ಸಿಗಬಹುದಾದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅರ್ಹರಿಗೆ ಕಾರ್ಮಿಕ ಸೌಲಭ್ಯ ದೊರಕಿಸಲು ಉದ್ಯೋಗದಾತರು ಹೆಚ್ಚು ಮತುವರ್ಜಿ ವಹಿಸಿ ನೋಂದಣಿ ಅಭಿಯಾನ ಯಶಸ್ವಿಗೊಳಿಸಬೇಕು. ಇ.ಪಿ.ಎಫ್.ಒ ಕಚೇರಿಯಲ್ಲಿ ನೋಂದಾಯಿತ ಸಂಸ್ಥೆ ತಮ್ಮ ಕಂಪನಿ ವಿವರಗಳನ್ನು ನಮೂನೆ-5ರಲ್ಲಿ ಅಪಡೇಟ್ ಮಾಡಬೇಕು’ ಎಂದರು.</p>.<p>‘ವಿಕಸಿತ್ ಭಾರತ ರೋಜಗಾರ ಯೋಜನೆ ಆಗಸ್ಟ್ 1ರಿಂದ ಜಾರಿಗೊಳಿಸಲಾಗಿದ್ದು, ಇಪಿಎಫ್ನಲ್ಲಿ ಹೊಸದಾಗಿ ನೋಂದಣಿ ಮಾಡಿಕೊಂಡ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ಧನ ಜಾರಿ ಮಾಡಿದೆ. ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ)ಯಲ್ಲಿ ನೋಂದಾಯಿತ ಉದ್ಯೋಗಿಗೆ ಗರಿಷ್ಠ ₹15 ಸಾವಿರವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ₹1 ಲಕ್ಷದವರೆಗೆ ವೇತನವಿರುವ ಉದ್ಯೋಗಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಮೊದಲ ಕಂತನ್ನು 6 ತಿಂಗಳ ಸೇವೆಯ ನಂತರ ಮತ್ತು 2ನೇ ಕಂತನ್ನು ಒಂದು ವರ್ಷದ ಸೇವೆಯ ನಂತರ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.</p>.<p>‘10 ಸಾವಿರದವರೆಗೆ ಸಂಬಳವಿರುವ ಉದ್ಯೋಗಿಗೆ ಪ್ರತಿ ತಿಂಗಳು ₹1 ಸಾವಿರ, ₹10 ಸಾವಿರದಿಂದ ₹20 ಸಾವಿರ ಸಂಬಳವಿರುವವರಿಗೆ ತಿಂಗಳಿಗೆ ₹2 ಸಾವಿರ, ₹ 20 ಸಾವಿರಕ್ಕಿಂತ ಹೆಚ್ಚು ಸಂಬಳ ಇರುವ ನೌಕರರಿಗೆ ತಿಂಗಳಿಗೆ ₹3 ಸಾವಿರದಂತೆ ನೀಡಲಾಗುವುದು. ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಉದ್ಯೋಗದಾತರಿಗೆ ಎರಡು ವರ್ಷದ ತನಕ ತಿಂಗಳಿಗೆ ₹3 ಸಾವಿರ ತನಕ ಪ್ರೋತ್ಸಾಹಧನ ನೀಡಲಾಗುವುದು. ಉತ್ಪಾದನಾ ವಲಯಕ್ಕೆ ಈ ಪ್ರೋತ್ಸಾಹಧನ 4 ವರ್ಷಗಳ ತನಕ ವಿಸ್ತರಣೆಯಾಗಲಿದೆ’ ಎಂದು ಅವರು ಹೇಳಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಲೆಕ್ಕಾಧಿಕಾರಿಗಳಾದ ಅರ್ಸಲಾಂ ಎಂ. ಕಿತ್ತೂರು ಮತ್ತು ಮದನ ಕುಲಕರ್ಣಿ ಹಾಜರಿದ್ದರು.</p>.<p><strong>‘ಬ್ಯಾಂಕ್ ಕಚೇರಿಗೆ ಅಲೆದಾಡಬೇಕಿಲ್ಲ’</strong></p><p> ‘ಇನ್ನು ಪಿಂಚಣಿ ಪಡೆಯುವ ನೌಕರರು ವಾರ್ಷಿಕ ಜೀವಿತಾವಧಿಯ ಜೀವನ ಪ್ರಮಾಣ ಪತ್ರ ಸಲ್ಲಿಸಲು ಇನ್ಮುಂದೆ ಬ್ಯಾಂಕ್ ಪಿ.ಎಫ್. ಸೇರಿದಂತೆ ಯಾವುದೇ ಕಚೇರಿಗೆ ಅಲೆದಾಡಬೇಕಿಲ್ಲ’ ಎಂದು ಎಂ.ಸುಬ್ರಮಣ್ಯಂ ಹೇಳಿದರು. ‘ನಿಮ್ಮ ಮೊಬೈಲ್ ಫೋನ್ಗಳಲ್ಲಿ ‘AadharFaceRd’ & Jeevan Pramaan Face App’ ತಂತ್ರಾಂಶ ಡೌನ್ಲೋಡ್ ಮಾಡಿಕೊಂಡು ಪ್ರತಿ ವರ್ಷಕ್ಕೊಮ್ಮೆ ಮೊಬೈಲ್ ಕ್ಯಾಮೆರಾ ಸಹಾಯದಿಂದ ಮುಖ ದೃಢೀಕರಣ ನೀಡದಿಲ್ಲಿ ಆನ್ಲೈನ್ ಮೂಲಕವೇ ಜೀವನ ಪ್ರಮಾಣ ಪತ್ರ ಸಲ್ಲಿಸಬಹುದಾಗಿದೆ. ಪಿಂಚಣಿದಾರರು ಇದಕ್ಕಾಗಿ ತಮ್ಮ ಕುಟುಂಬಸ್ಥರ ಸಹಾಯ ಪಡೆಯಬಹುದಾಗಿದೆ’ ಎಂದು ಅವರು ಮಾಹಿತಿ ನೀಡಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರಗಿ: ‘ಇಪಿಎಫ್ ವ್ಯಾಪ್ತಿಯಿಂದ ಹೊರಗುಳಿದ ಉದ್ಯೋಗಿಗಳನ್ನು ಸ್ವಯಂಪ್ರೇರಣೆಯಿಂದ ದಾಖಲು ಮಾಡುವಂತೆ ಉತ್ತೇಜಿಸಲು ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ನವೆಂಬರ್ 1ರಿಂದ ನೋಂದಣಿ ಆರಂಭಿಸಲಾಗಿದ್ದು, 6 ತಿಂಗಳ ಕಾಲ ನೋಂದಣಿಗೆ ಅವಕಾಶ ಕಲ್ಪಿಸಿದೆ’ ಎಂದು ಭವಿಷ್ಯ ನಿಧಿ ಕಚೇರಿಯ ಕಲಬುರಗಿ ಪ್ರಾಂತೀಯ ಆಯುಕ್ತ ಎಂ.ಸುಬ್ರಮಣ್ಯಂ ಹೇಳಿದರು.</p>.<p>ನಗರದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ವಲಯ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘2017ರ ಜುಲೈ 1 ರಿಂದ 2025ರ ಅಕ್ಟೋಬರ್ 31ರ ವರೆಗೆ ಕೆಲಸಕ್ಕೆ ಸೇರಿದ ಕಾರ್ಮಿಕರನ್ನು ಪಿ.ಎಫ್. ವ್ಯಾಪ್ತಿಗೆ ಸೇರಿಸದ ಪ್ರಕರಣಗಳಲ್ಲಿ (ನೌಕರರ ವಂತಿಗೆ ಪಡೆಯದ) ಅಂತಹ ನೌಕರರನ್ನು ಇ.ಪಿ.ಎಫ್.ಒ ಕಚೇರಿಯಲ್ಲಿ ನೋಂದಾಯಿತ ಉದ್ಯೋಗದಾತರು, 6 ತಿಂಗಳ ಕಾಲದ ವಿಶೇಷ ದಾಖಲಾತಿ ಅಭಿಯಾನದಲ್ಲಿ ಕೇವಲ ₹100 ದಂಡ ಪಾವತಿ ಮತ್ತು ಸಂಸ್ಥೆ ಪಾಲಿನ ಹಣ ಭರಿಸಿ ನೋಂದಾಯಿಸಬಹುದಾಗಿದೆ’ ಎಂದರು.</p>.<p>‘ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಬಹುತೇಕ ಕಂಪನಿಗಳು ನೌಕರರನ್ನು ಪಿ.ಎಫ್. ವ್ಯಾಪ್ತಿಗೆ ಒಳಪಡಿಸಿರುವುದಿಲ್ಲ. ಇದರಿಂದ ನೌಕರರು ಸರ್ಕಾರದಿಂದ ಸಿಗಬಹುದಾದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅರ್ಹರಿಗೆ ಕಾರ್ಮಿಕ ಸೌಲಭ್ಯ ದೊರಕಿಸಲು ಉದ್ಯೋಗದಾತರು ಹೆಚ್ಚು ಮತುವರ್ಜಿ ವಹಿಸಿ ನೋಂದಣಿ ಅಭಿಯಾನ ಯಶಸ್ವಿಗೊಳಿಸಬೇಕು. ಇ.ಪಿ.ಎಫ್.ಒ ಕಚೇರಿಯಲ್ಲಿ ನೋಂದಾಯಿತ ಸಂಸ್ಥೆ ತಮ್ಮ ಕಂಪನಿ ವಿವರಗಳನ್ನು ನಮೂನೆ-5ರಲ್ಲಿ ಅಪಡೇಟ್ ಮಾಡಬೇಕು’ ಎಂದರು.</p>.<p>‘ವಿಕಸಿತ್ ಭಾರತ ರೋಜಗಾರ ಯೋಜನೆ ಆಗಸ್ಟ್ 1ರಿಂದ ಜಾರಿಗೊಳಿಸಲಾಗಿದ್ದು, ಇಪಿಎಫ್ನಲ್ಲಿ ಹೊಸದಾಗಿ ನೋಂದಣಿ ಮಾಡಿಕೊಂಡ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ ಧನ ಜಾರಿ ಮಾಡಿದೆ. ನೌಕರರ ಭವಿಷ್ಯ ನಿಧಿ ಸಂಘಟನೆ(ಇಪಿಎಫ್ಒ)ಯಲ್ಲಿ ನೋಂದಾಯಿತ ಉದ್ಯೋಗಿಗೆ ಗರಿಷ್ಠ ₹15 ಸಾವಿರವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ₹1 ಲಕ್ಷದವರೆಗೆ ವೇತನವಿರುವ ಉದ್ಯೋಗಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಮೊದಲ ಕಂತನ್ನು 6 ತಿಂಗಳ ಸೇವೆಯ ನಂತರ ಮತ್ತು 2ನೇ ಕಂತನ್ನು ಒಂದು ವರ್ಷದ ಸೇವೆಯ ನಂತರ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.</p>.<p>‘10 ಸಾವಿರದವರೆಗೆ ಸಂಬಳವಿರುವ ಉದ್ಯೋಗಿಗೆ ಪ್ರತಿ ತಿಂಗಳು ₹1 ಸಾವಿರ, ₹10 ಸಾವಿರದಿಂದ ₹20 ಸಾವಿರ ಸಂಬಳವಿರುವವರಿಗೆ ತಿಂಗಳಿಗೆ ₹2 ಸಾವಿರ, ₹ 20 ಸಾವಿರಕ್ಕಿಂತ ಹೆಚ್ಚು ಸಂಬಳ ಇರುವ ನೌಕರರಿಗೆ ತಿಂಗಳಿಗೆ ₹3 ಸಾವಿರದಂತೆ ನೀಡಲಾಗುವುದು. ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಉದ್ಯೋಗದಾತರಿಗೆ ಎರಡು ವರ್ಷದ ತನಕ ತಿಂಗಳಿಗೆ ₹3 ಸಾವಿರ ತನಕ ಪ್ರೋತ್ಸಾಹಧನ ನೀಡಲಾಗುವುದು. ಉತ್ಪಾದನಾ ವಲಯಕ್ಕೆ ಈ ಪ್ರೋತ್ಸಾಹಧನ 4 ವರ್ಷಗಳ ತನಕ ವಿಸ್ತರಣೆಯಾಗಲಿದೆ’ ಎಂದು ಅವರು ಹೇಳಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಲೆಕ್ಕಾಧಿಕಾರಿಗಳಾದ ಅರ್ಸಲಾಂ ಎಂ. ಕಿತ್ತೂರು ಮತ್ತು ಮದನ ಕುಲಕರ್ಣಿ ಹಾಜರಿದ್ದರು.</p>.<p><strong>‘ಬ್ಯಾಂಕ್ ಕಚೇರಿಗೆ ಅಲೆದಾಡಬೇಕಿಲ್ಲ’</strong></p><p> ‘ಇನ್ನು ಪಿಂಚಣಿ ಪಡೆಯುವ ನೌಕರರು ವಾರ್ಷಿಕ ಜೀವಿತಾವಧಿಯ ಜೀವನ ಪ್ರಮಾಣ ಪತ್ರ ಸಲ್ಲಿಸಲು ಇನ್ಮುಂದೆ ಬ್ಯಾಂಕ್ ಪಿ.ಎಫ್. ಸೇರಿದಂತೆ ಯಾವುದೇ ಕಚೇರಿಗೆ ಅಲೆದಾಡಬೇಕಿಲ್ಲ’ ಎಂದು ಎಂ.ಸುಬ್ರಮಣ್ಯಂ ಹೇಳಿದರು. ‘ನಿಮ್ಮ ಮೊಬೈಲ್ ಫೋನ್ಗಳಲ್ಲಿ ‘AadharFaceRd’ & Jeevan Pramaan Face App’ ತಂತ್ರಾಂಶ ಡೌನ್ಲೋಡ್ ಮಾಡಿಕೊಂಡು ಪ್ರತಿ ವರ್ಷಕ್ಕೊಮ್ಮೆ ಮೊಬೈಲ್ ಕ್ಯಾಮೆರಾ ಸಹಾಯದಿಂದ ಮುಖ ದೃಢೀಕರಣ ನೀಡದಿಲ್ಲಿ ಆನ್ಲೈನ್ ಮೂಲಕವೇ ಜೀವನ ಪ್ರಮಾಣ ಪತ್ರ ಸಲ್ಲಿಸಬಹುದಾಗಿದೆ. ಪಿಂಚಣಿದಾರರು ಇದಕ್ಕಾಗಿ ತಮ್ಮ ಕುಟುಂಬಸ್ಥರ ಸಹಾಯ ಪಡೆಯಬಹುದಾಗಿದೆ’ ಎಂದು ಅವರು ಮಾಹಿತಿ ನೀಡಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>