<p><strong>ವಾಡಿ: ಚಿತ್ತಾಪುರ</strong> ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಹುದ್ದೆಗಳು ಕಳೆದ ಹಲವು ವರ್ಷಗಳಿಂದ ಖಾಲಿ ಬಿದ್ದಿದ್ದು ಶಿಕ್ಷಣ ಇಲಾಖೆ ಯೋಜನೆಗಳ ಅನುಷ್ಠಾನದಲ್ಲಿ ತೀವ್ರ ತೊಡಕು ಉಂಟಾಗುತ್ತಿದೆ.</p>.<p>ಶಿಕ್ಷಣ ಇಲಾಖೆ ಅಧಿಕಾರಿಗಳ ಕಚೇರಿ ಹಾಗೂ ಶಾಲೆಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುವ ಶಿಕ್ಷಣ ಸಂಯೋಜಕ ಹುದ್ದೆಗಳ ಪೂರ್ಣ ಪ್ರಮಾಣದಲ್ಲಿ ಭರ್ತಿ ಸಾಧ್ಯವಾಗಿಲ್ಲ.</p>.<p>ತಾಲ್ಲೂಕಿನಲ್ಲಿ 5 ವಲಯಗಳ ಪೈಕಿ 3 ವಲಯಗಳಲ್ಲಿ ಸಂಯೋಜಕ ಹುದ್ದೆಗೆ ಭರ್ತಿ ಭಾಗ್ಯ ಒದಗಿ ಬಂದಿಲ್ಲ. ಗುಂಡಗುರ್ತಿ, ಕಾಳಗಿ ವಲಯ ಬಿಟ್ಟರೆ ನಾಲವಾರ, ಚಿತ್ತಾಪುರ ಹಾಗೂ ಶಹಾಬಾದ ವಲಯದಲ್ಲಿ ಸಂಯೋಜಕ ಹುದ್ದೆ ಭರ್ತಿಯಾಗದೇ ಉಳಿದಿದ್ದು ಆಡಳಿತಾತ್ಮಕ ಸಮಸ್ಯೆ ಸೃಷ್ಟಿಗೆ ಕಾರಣವಾಗುತ್ತಿದೆ. ಪ್ರಾಥಮಿಕ ವಿಭಾಗದ 2 ಹುದ್ದೆಗಳ ಪೈಕಿ ಎರಡೂ ಹುದ್ದೆಗಳು ಕಳೆದ 4 ವರ್ಷಗಳಿಂದ ಖಾಲಿ ಉಳಿದಿದ್ದರೆ ಪ್ರೌಢವಿಭಾಗದ ಮೂರರ ಪೈಕಿ ಒಂದು ಹುದ್ದೆ ಖಾಲಿ ಉಳಿದಿದೆ.</p>.<p>ಶೈಕ್ಷಣಿಕ ಯೋಜನೆಗಳು ಕುಂಠಿತವಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಸಿಆರ್ಪಿ, ಬಿಆರ್ಪಿ ಮತ್ತು ಶಿಕ್ಷಣ ಸಂಯೋಜಕರ ಮೇಲೆ ಇರುತ್ತದೆ. ಸಿಆರ್ ಪಿಯ 26 ಹುದ್ದೆಗಳ ಪೈಕಿ 23 ಹುದ್ದೆಗಳು ಖಾಲಿ ಇವೆ. ಜುಲೈ ಅಂತ್ಯಕ್ಕೆ ಮತ್ತೆ 3 ಹುದ್ದೆಗಳು ಖಾಲಿಯಾಗಲಿವೆ. ಹುದ್ದೆಗಳು ಖಾಲಿ ಇರುವುದರಿಂದ ಇನ್ನುಳಿದವರು ಒತ್ತಡದ ನಡುವೆ ಕಾರ್ಯ ನಿರ್ವಹಿಸುವಂತಾಗಿದೆ.</p>.<p>ಪ್ರಮುಖ ಹುದ್ದೆಗಳು ಖಾಲಿ ಇವೆ. ಆದರೆ ಯಾರೂ ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಮಾತನಾ ಡಿದರೆ ಮೇಲಧಿಕಾರಿಗಳು, ಜನ ಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾ ಗುವ ಸಾಧ್ಯತೆಯಿದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ: ಚಿತ್ತಾಪುರ</strong> ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಹುದ್ದೆಗಳು ಕಳೆದ ಹಲವು ವರ್ಷಗಳಿಂದ ಖಾಲಿ ಬಿದ್ದಿದ್ದು ಶಿಕ್ಷಣ ಇಲಾಖೆ ಯೋಜನೆಗಳ ಅನುಷ್ಠಾನದಲ್ಲಿ ತೀವ್ರ ತೊಡಕು ಉಂಟಾಗುತ್ತಿದೆ.</p>.<p>ಶಿಕ್ಷಣ ಇಲಾಖೆ ಅಧಿಕಾರಿಗಳ ಕಚೇರಿ ಹಾಗೂ ಶಾಲೆಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುವ ಶಿಕ್ಷಣ ಸಂಯೋಜಕ ಹುದ್ದೆಗಳ ಪೂರ್ಣ ಪ್ರಮಾಣದಲ್ಲಿ ಭರ್ತಿ ಸಾಧ್ಯವಾಗಿಲ್ಲ.</p>.<p>ತಾಲ್ಲೂಕಿನಲ್ಲಿ 5 ವಲಯಗಳ ಪೈಕಿ 3 ವಲಯಗಳಲ್ಲಿ ಸಂಯೋಜಕ ಹುದ್ದೆಗೆ ಭರ್ತಿ ಭಾಗ್ಯ ಒದಗಿ ಬಂದಿಲ್ಲ. ಗುಂಡಗುರ್ತಿ, ಕಾಳಗಿ ವಲಯ ಬಿಟ್ಟರೆ ನಾಲವಾರ, ಚಿತ್ತಾಪುರ ಹಾಗೂ ಶಹಾಬಾದ ವಲಯದಲ್ಲಿ ಸಂಯೋಜಕ ಹುದ್ದೆ ಭರ್ತಿಯಾಗದೇ ಉಳಿದಿದ್ದು ಆಡಳಿತಾತ್ಮಕ ಸಮಸ್ಯೆ ಸೃಷ್ಟಿಗೆ ಕಾರಣವಾಗುತ್ತಿದೆ. ಪ್ರಾಥಮಿಕ ವಿಭಾಗದ 2 ಹುದ್ದೆಗಳ ಪೈಕಿ ಎರಡೂ ಹುದ್ದೆಗಳು ಕಳೆದ 4 ವರ್ಷಗಳಿಂದ ಖಾಲಿ ಉಳಿದಿದ್ದರೆ ಪ್ರೌಢವಿಭಾಗದ ಮೂರರ ಪೈಕಿ ಒಂದು ಹುದ್ದೆ ಖಾಲಿ ಉಳಿದಿದೆ.</p>.<p>ಶೈಕ್ಷಣಿಕ ಯೋಜನೆಗಳು ಕುಂಠಿತವಾಗದಂತೆ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಸಿಆರ್ಪಿ, ಬಿಆರ್ಪಿ ಮತ್ತು ಶಿಕ್ಷಣ ಸಂಯೋಜಕರ ಮೇಲೆ ಇರುತ್ತದೆ. ಸಿಆರ್ ಪಿಯ 26 ಹುದ್ದೆಗಳ ಪೈಕಿ 23 ಹುದ್ದೆಗಳು ಖಾಲಿ ಇವೆ. ಜುಲೈ ಅಂತ್ಯಕ್ಕೆ ಮತ್ತೆ 3 ಹುದ್ದೆಗಳು ಖಾಲಿಯಾಗಲಿವೆ. ಹುದ್ದೆಗಳು ಖಾಲಿ ಇರುವುದರಿಂದ ಇನ್ನುಳಿದವರು ಒತ್ತಡದ ನಡುವೆ ಕಾರ್ಯ ನಿರ್ವಹಿಸುವಂತಾಗಿದೆ.</p>.<p>ಪ್ರಮುಖ ಹುದ್ದೆಗಳು ಖಾಲಿ ಇವೆ. ಆದರೆ ಯಾರೂ ಈ ಬಗ್ಗೆ ಬಹಿರಂಗವಾಗಿ ಮಾತನಾಡುವುದಿಲ್ಲ. ಮಾತನಾ ಡಿದರೆ ಮೇಲಧಿಕಾರಿಗಳು, ಜನ ಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾ ಗುವ ಸಾಧ್ಯತೆಯಿದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>