<p><strong>ವಾಡಿ:</strong> ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು ಗ್ರಾಮಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. </p><p>ಗ್ರಾಮ ಪಂಚಾಯಿತಿ ಕಚೇರಿಗೆ ಮಳೆ ನೀರು ನುಗ್ಗಿದ್ದರಿಂದ ಯಂತ್ರೋಪಕರಣ, ಕಂಪ್ಯೂಟರ್, ಜೆರಾಕ್ಸ್ ಯಂತ್ರ, ವಿದ್ಯುತ್ ಬಲ್ಬಗಳು, ದಾಖಲೆ ಪತ್ರಗಳು ಹಾಳಾಗಿವೆ. ಸಭಾಂಗಣ, ಕಂಪ್ಯೂಟರ್ ಕೋಣೆ, ಸ್ಟೋರ್ ರೂಮ್ಗೆ ಅಪಾರ ಪ್ರಮಾಣದ ನೀರು ಹೊಕ್ಕಿದೆ. ಅಂಗಳದಲ್ಲಿ ನಾಲ್ಕು ಅಡಿಗೂ ಅಧಿಕ ನೀರು ನಿಂತಿದ್ದು ಸಾರ್ವಜನಿಕರು ಕುಳಿತುಕೊಳ್ಳುವ ಆಸನಗಳು ಮುಳುಗಿದ್ದವು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. </p><p><strong>4 ಲಕ್ಷದ ವಿದ್ಯುತ್ ಬಲ್ಬ್ಗಳಿಗೆ ಹಾನಿ</strong></p><p>ಗ್ರಾಮದ ಕಂಬಗಳಿಗೆ ಹಾಕುವ ಉದ್ದೇಶದಿಂದ ಸೋಮವಾರ ಖರೀದಿಸಿ ಸ್ಟೋರ್ ರೂಮ್ನಲ್ಲಿ ಇಟ್ಟಿದ್ದ ಅಂದಾಜು ₹4 ಲಕ್ಷ ಮೌಲ್ಯದ ವಿದ್ಯುತ್ ಬಲ್ಬ್ಗಳು ಮಳೆ ನೀರಿಗೆ ಸಿಕ್ಕು ಹಾಳಾಗಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಈರಣ್ಣ ಭಜಂತ್ರಿ, ಶ್ರೀನಾಥ ಬೋಯರ್, ಭೀಮಾಶಂಕರ ತೆಲಕರ್ ತಿಳಿಸಿದ್ದಾರೆ.</p><p><strong>ದೇವಸ್ಥಾನ ಜಲಾವೃತ</strong></p><p>ವಾಡಿ ಸಮೀಪದ ಬಳವಡಗಿ ಗ್ರಾಮದ ಎಲಾಂಬಿಕಾ ದೇವಸ್ಥಾನಕ್ಕೆ ವ್ಯಾಪಕ ಮಳೆಯಿಂದಾಗಿ ಜಲಾವೃತಗೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಡಿ:</strong> ಚಿತ್ತಾಪುರ ತಾಲ್ಲೂಕಿನ ಕೊಲ್ಲೂರು ಗ್ರಾಮಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. </p><p>ಗ್ರಾಮ ಪಂಚಾಯಿತಿ ಕಚೇರಿಗೆ ಮಳೆ ನೀರು ನುಗ್ಗಿದ್ದರಿಂದ ಯಂತ್ರೋಪಕರಣ, ಕಂಪ್ಯೂಟರ್, ಜೆರಾಕ್ಸ್ ಯಂತ್ರ, ವಿದ್ಯುತ್ ಬಲ್ಬಗಳು, ದಾಖಲೆ ಪತ್ರಗಳು ಹಾಳಾಗಿವೆ. ಸಭಾಂಗಣ, ಕಂಪ್ಯೂಟರ್ ಕೋಣೆ, ಸ್ಟೋರ್ ರೂಮ್ಗೆ ಅಪಾರ ಪ್ರಮಾಣದ ನೀರು ಹೊಕ್ಕಿದೆ. ಅಂಗಳದಲ್ಲಿ ನಾಲ್ಕು ಅಡಿಗೂ ಅಧಿಕ ನೀರು ನಿಂತಿದ್ದು ಸಾರ್ವಜನಿಕರು ಕುಳಿತುಕೊಳ್ಳುವ ಆಸನಗಳು ಮುಳುಗಿದ್ದವು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. </p><p><strong>4 ಲಕ್ಷದ ವಿದ್ಯುತ್ ಬಲ್ಬ್ಗಳಿಗೆ ಹಾನಿ</strong></p><p>ಗ್ರಾಮದ ಕಂಬಗಳಿಗೆ ಹಾಕುವ ಉದ್ದೇಶದಿಂದ ಸೋಮವಾರ ಖರೀದಿಸಿ ಸ್ಟೋರ್ ರೂಮ್ನಲ್ಲಿ ಇಟ್ಟಿದ್ದ ಅಂದಾಜು ₹4 ಲಕ್ಷ ಮೌಲ್ಯದ ವಿದ್ಯುತ್ ಬಲ್ಬ್ಗಳು ಮಳೆ ನೀರಿಗೆ ಸಿಕ್ಕು ಹಾಳಾಗಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಈರಣ್ಣ ಭಜಂತ್ರಿ, ಶ್ರೀನಾಥ ಬೋಯರ್, ಭೀಮಾಶಂಕರ ತೆಲಕರ್ ತಿಳಿಸಿದ್ದಾರೆ.</p><p><strong>ದೇವಸ್ಥಾನ ಜಲಾವೃತ</strong></p><p>ವಾಡಿ ಸಮೀಪದ ಬಳವಡಗಿ ಗ್ರಾಮದ ಎಲಾಂಬಿಕಾ ದೇವಸ್ಥಾನಕ್ಕೆ ವ್ಯಾಪಕ ಮಳೆಯಿಂದಾಗಿ ಜಲಾವೃತಗೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>