<p><strong>ಶಹಾಬಾದ್:</strong> ‘ಸಂತ ಜೇಮಸಿಂಗ ಮಹಾರಾಜರು ಬಂಜಾರಾ ಸಮಾಜಕ್ಕೆ ಧಾರ್ಮಿಕ ಸಂಸ್ಕಾರ, ಶಿಕ್ಷಣದ ಅವಶ್ಯಕತೆ ಕುರಿತು ತಿಳಿವಳಿಕೆ ನೀಡುತ್ತಿದ್ದಾರೆ’ ಎಂದು ಚಿತ್ತಾಪುರ ಕಂಬಳೇಶ್ವರ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ಸೋಮವಾರ ಹೇಳಿದರು.</p>.<p>ಅವರು ನಗರದ ಸಮೀಪದ ಮುಗುಳನಾಗಾವಿಯ ಯಲ್ಲಾಲಿಂಗ ಪುಣ್ಯಾಶ್ರಮದಲ್ಲಿ 29ನೇ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ಜಿ.ಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮಾತನಾಡಿ, ‘ಕಾಯಕದ ಮೇಲೆ ವಿಶ್ವಾಸವಿಟ್ಟ ಬಂಜಾರಾ ಸಮಾಜಕ್ಕೆ ಒಳ್ಳೆಯ ನಾಯಕರು, ಒಳ್ಳೆಯ ಮಠಾಧೀಶರು ಸಿಗುತ್ತಿದ್ದಾರೆ’ ಎಂದರು.</p>.<p>ಒಂದು ತಿಂಗಳ ಮೌನಾನುಷ್ಠಾನದ ನಂತರ ಮೌನ ಮುರಿದು ಆಶೀರ್ವಚನ ನೀಡಿದ ಜೇಮಸಿಂಗ ಮಹಾರಾಜರು, ‘ಶ್ರೀ ಗುರುವಿನ ಕೃಪೆಯಿಂದ ಪ್ರಸಕ್ತ ಸಾಲಿನಲ್ಲಿ ಒಳ್ಳೆ ಬೆಳೆ ಬಂದು ರೈತರಿಗೆ ಅನುಕೂಲ ಆಗಲಿದೆ’ ಎಂದರು.</p>.<p>ಬಳಿರಾಮ ಮಹಾರಾಜ ಮಾತನಾಡಿದರು. ವೇದಿಕೆಯಲ್ಲಿ ಗಣಪತಿ ಮಹಾರಾಜ, ಲಚ್ಚು ಮಹಾರಾಜ, ಕಳಾವತಿ ದೇವಿ, ಸೈಯದ್ ಇಕ್ಬಾಲ್ ಅಲಿಸಾಹೇಬ್ ಉಪಸ್ಥಿತರಿದ್ದರು.</p>.<p>ಮಾಜಿ ಸಚಿವ ರೇವುನಾಯಕ ಬೆಳಮಗಿ, ಮುಖಂಡರಾದ ರಾಮಚಂದ್ರ ಜಾಧವ, ವಿಠಲ ಜಾಧವ, ಸುಭಾಷ ರಾಠೋಡ, ಶಂಕರ ಚವ್ಹಾಣ, ಜ್ಯೋತಿ ಬೆಂಗಳೂರ ಮಾತನಾಡಿದರು.</p>.<p>ನಾಮದೇವ ರಾಠೋಡ ಸ್ವಾಗತಿಸಿದರು. ಪುರಾಣಿಕರಾದ ಶಿವುಶಂಕರ ಬಿರಾದಾರ ಸಂಗೀತ ಸೇವೆ ಸಲ್ಲಿಸಿದರು. ಬಸವರಾಜ ಟೆಂಗಳಿ ಚಂದ್ರಕಾಂತ ನಿರಗುಡಿ ತಬಲಾ ಸಾಥ್ ನೀಡಿದರು. ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ ನಿರೂಪಿಸಿದರು.</p>.<p>ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನಡೆಯಿತು ಬೆಳಿಗ್ಗೆ ಜೇಮಸಿಂಗ ಮಹಾರಾಜರು ಅಗ್ನಿ ತುಳಿದು, ಧರ್ಮಸಭೆಯಲ್ಲಿ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಬಾದ್:</strong> ‘ಸಂತ ಜೇಮಸಿಂಗ ಮಹಾರಾಜರು ಬಂಜಾರಾ ಸಮಾಜಕ್ಕೆ ಧಾರ್ಮಿಕ ಸಂಸ್ಕಾರ, ಶಿಕ್ಷಣದ ಅವಶ್ಯಕತೆ ಕುರಿತು ತಿಳಿವಳಿಕೆ ನೀಡುತ್ತಿದ್ದಾರೆ’ ಎಂದು ಚಿತ್ತಾಪುರ ಕಂಬಳೇಶ್ವರ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರು ಸೋಮವಾರ ಹೇಳಿದರು.</p>.<p>ಅವರು ನಗರದ ಸಮೀಪದ ಮುಗುಳನಾಗಾವಿಯ ಯಲ್ಲಾಲಿಂಗ ಪುಣ್ಯಾಶ್ರಮದಲ್ಲಿ 29ನೇ ಜಾತ್ರಾ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ಜಿ.ಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮಾತನಾಡಿ, ‘ಕಾಯಕದ ಮೇಲೆ ವಿಶ್ವಾಸವಿಟ್ಟ ಬಂಜಾರಾ ಸಮಾಜಕ್ಕೆ ಒಳ್ಳೆಯ ನಾಯಕರು, ಒಳ್ಳೆಯ ಮಠಾಧೀಶರು ಸಿಗುತ್ತಿದ್ದಾರೆ’ ಎಂದರು.</p>.<p>ಒಂದು ತಿಂಗಳ ಮೌನಾನುಷ್ಠಾನದ ನಂತರ ಮೌನ ಮುರಿದು ಆಶೀರ್ವಚನ ನೀಡಿದ ಜೇಮಸಿಂಗ ಮಹಾರಾಜರು, ‘ಶ್ರೀ ಗುರುವಿನ ಕೃಪೆಯಿಂದ ಪ್ರಸಕ್ತ ಸಾಲಿನಲ್ಲಿ ಒಳ್ಳೆ ಬೆಳೆ ಬಂದು ರೈತರಿಗೆ ಅನುಕೂಲ ಆಗಲಿದೆ’ ಎಂದರು.</p>.<p>ಬಳಿರಾಮ ಮಹಾರಾಜ ಮಾತನಾಡಿದರು. ವೇದಿಕೆಯಲ್ಲಿ ಗಣಪತಿ ಮಹಾರಾಜ, ಲಚ್ಚು ಮಹಾರಾಜ, ಕಳಾವತಿ ದೇವಿ, ಸೈಯದ್ ಇಕ್ಬಾಲ್ ಅಲಿಸಾಹೇಬ್ ಉಪಸ್ಥಿತರಿದ್ದರು.</p>.<p>ಮಾಜಿ ಸಚಿವ ರೇವುನಾಯಕ ಬೆಳಮಗಿ, ಮುಖಂಡರಾದ ರಾಮಚಂದ್ರ ಜಾಧವ, ವಿಠಲ ಜಾಧವ, ಸುಭಾಷ ರಾಠೋಡ, ಶಂಕರ ಚವ್ಹಾಣ, ಜ್ಯೋತಿ ಬೆಂಗಳೂರ ಮಾತನಾಡಿದರು.</p>.<p>ನಾಮದೇವ ರಾಠೋಡ ಸ್ವಾಗತಿಸಿದರು. ಪುರಾಣಿಕರಾದ ಶಿವುಶಂಕರ ಬಿರಾದಾರ ಸಂಗೀತ ಸೇವೆ ಸಲ್ಲಿಸಿದರು. ಬಸವರಾಜ ಟೆಂಗಳಿ ಚಂದ್ರಕಾಂತ ನಿರಗುಡಿ ತಬಲಾ ಸಾಥ್ ನೀಡಿದರು. ಮಲ್ಲಿಕಾರ್ಜುನ ಶಾಸ್ತ್ರಿ ಐನಾಪುರ ನಿರೂಪಿಸಿದರು.</p>.<p>ಬೆಳಿಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನಡೆಯಿತು ಬೆಳಿಗ್ಗೆ ಜೇಮಸಿಂಗ ಮಹಾರಾಜರು ಅಗ್ನಿ ತುಳಿದು, ಧರ್ಮಸಭೆಯಲ್ಲಿ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>