‘ಈಗಾಗಲೇ ಸಂಪೂರ್ಣ ಮನೆ ಕಳೆದುಕೊಂಡ 830 ಫಲಾನುಭವಿಗಳಿಗೆತಲಾ ₹ 1 ಲಕ್ಷದಂತೆ₹8.30 ಕೋಟಿ, ಭಾಗಶಃ ಹಾನಿಯಾಗಿರುವ 3,026 ಫಲಾನುಭವಿಗಳಿಗೆ ₹ 12.10 ಕೋಟಿ ಜಮಾ ಮಾಡಲಾಗಿದೆ. ಅನಧಿಕೃತವಾಗಿ ಮನೆ ಕಟ್ಟಿಕೊಂಡಿದ್ದ ಕುಟುಂಬಗಳಿಗೆ ಅಫಿಡವಿಟ್ ಸಲ್ಲಿಸಲು ಸೂಚಿಸಲಾಗಿತ್ತು. ಹಣ ನೀಡಲಾಗಿದೆ ಎಂಬ ಕಾರಣಕ್ಕೆ ಜಾಗದ ಹಕ್ಕುದಾರಿಕೆ ಪ್ರತಿಪಾದಿಸಬಾರದು ಎಂಬ ಷರತ್ತಿನ ಮೇಲೆ ಹಣ ಬಿಡುಗಡೆಗೆ ಸರ್ಕಾರ ಸಮ್ಮತಿಸಿದೆ’ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದರು.