<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಸಮೀಪ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದಲ್ಲಿ ಅಪರಾಧಿ, ಕೇರಳದ ಎ.ಕೆ.ಗಿರೀಶ್ (39) ಎಂಬಾತನಿಗೆ ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮರಣದಂಡನೆ ವಿಧಿಸಿದೆ. ಕೃತ್ಯ ನಡೆದ 9 ತಿಂಗಳಿನಲ್ಲಿ ಶಿಕ್ಷೆ ಪ್ರಕಟವಾಗಿದೆ.</p>.<p>2025ರ ಮಾರ್ಚ್ 27ರಂದು ಅಕ್ರಮ ಸಂಬಂಧ ಶಂಕೆಯಡಿ ಪತ್ನಿ ನಾಗಿ (30), ಆಕೆಯ ರಕ್ಷಣೆಗೆ ಬಂದಿದ್ದ ಆಕೆಯ ಅಜ್ಜ ಕರಿಯ (75), ಅಜ್ಜಿ ಗೌರಿ (75), ನಾಗಿ ಅವರ ಪುತ್ರಿ ಕಾವೇರಿ (5) ಅವರನ್ನೂ ಕೊಲೆ ಮಾಡಿದ್ದ. </p>.<p>ತನಿಖಾಧಿಕಾರಿಗಳಾದ ಶಿವರುದ್ರ ಹಾಗೂ ಶಿವರಾಜ್ ಆರ್ ಮುದೋಳ್ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್.ನಟರಾಜ್ ಅವರು ಮರಣದಂಡನೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಆದೇಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಸಮೀಪ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದಲ್ಲಿ ಅಪರಾಧಿ, ಕೇರಳದ ಎ.ಕೆ.ಗಿರೀಶ್ (39) ಎಂಬಾತನಿಗೆ ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಮರಣದಂಡನೆ ವಿಧಿಸಿದೆ. ಕೃತ್ಯ ನಡೆದ 9 ತಿಂಗಳಿನಲ್ಲಿ ಶಿಕ್ಷೆ ಪ್ರಕಟವಾಗಿದೆ.</p>.<p>2025ರ ಮಾರ್ಚ್ 27ರಂದು ಅಕ್ರಮ ಸಂಬಂಧ ಶಂಕೆಯಡಿ ಪತ್ನಿ ನಾಗಿ (30), ಆಕೆಯ ರಕ್ಷಣೆಗೆ ಬಂದಿದ್ದ ಆಕೆಯ ಅಜ್ಜ ಕರಿಯ (75), ಅಜ್ಜಿ ಗೌರಿ (75), ನಾಗಿ ಅವರ ಪುತ್ರಿ ಕಾವೇರಿ (5) ಅವರನ್ನೂ ಕೊಲೆ ಮಾಡಿದ್ದ. </p>.<p>ತನಿಖಾಧಿಕಾರಿಗಳಾದ ಶಿವರುದ್ರ ಹಾಗೂ ಶಿವರಾಜ್ ಆರ್ ಮುದೋಳ್ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್.ನಟರಾಜ್ ಅವರು ಮರಣದಂಡನೆ ಹಾಗೂ ₹ 10 ಸಾವಿರ ದಂಡ ವಿಧಿಸಿ ಆದೇಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>