ಮಡಿಕೇರಿ: ವಿರಾಜಪೇಟೆ ಗೋಣಿಕೊಪ್ಪಲು ರಸ್ತೆಯ ಬಿಟ್ಟಂಗಾಲದ ಸಮೀಪ ಬುಧವಾರ ರಾತ್ರಿ ಅಡ್ಡಬಂದ ಹಸುವಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ಸುಲೇಮಾನ್ (58) ಅವರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಇವರು ವಿರಾಜಪೇಟೆಯಿಂದ ಅಂಬಟ್ಟಿ ಕಡೆಗೆ ಸ್ಕೂಟರ್ನಲ್ಲಿ ತೆರಳುತ್ತುದ್ದರು. ಈ ವೇಳೆ ಅವರು ಕತ್ತಲಿನಲ್ಲಿ ಹಂಪ್ ಮೇಲೆ ಸ್ಕೂಟರ್ ಹತ್ತಿಸುವಾಗ ಅಡ್ಡಬಂದ ಹಸುವಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಕೆಳಗೆ ಬಿದ್ದ ಅವರು ತೀವ್ರವಾಗಿ ಗಾಯಗೊಂಡು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.