<p><strong>ಸುಂಟಿಕೊಪ್ಪ:</strong> ಇಲ್ಲಿನ ಮೀನು, ಮಾಂಸ ಮಾರಾಟಗಾರರ ನಿರ್ಲಕ್ಷ್ಯದಿಂದ ತ್ಯಾಜ್ಯಗಳು ಹರಡಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.</p>.<p>ಇಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ಜನತಾ ಕಾಲೊನಿಯ ಬಳಿ ಮೀನು, ಮಾಂಸದ ಅಂಗಡಿಗಳು ಕಾರ್ಯಚರಿಸುತ್ತಿದ್ದು, ಅಂಗಡಿಗಳ ಅಕ್ಕಪಕ್ಕದ ಬಳಿ ಕೋಳಿ, ಕುರಿ ಮಾಂಸ, ರಕ್ತ ಹಾಗೂ ತ್ಯಾಜ್ಯದಿಂದ ನೊಣ, ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ.</p>.<p>ಗ್ರಾಮ ಪಂಚಾಯಿತಿ ಆಡಳಿತ ಮಂಡಲಿ ಹಾಗೂ ಆರೋಗ್ಯ ಇಲಾಖೆ ಪರಿಸರವನ್ನು ಶುಚಿಯಾಗಿಡಬೇಕೆಂದು ಸೂಚನೆ ನೀಡಿದ್ದರೂ ಈ ಮಾಂಸದ ಅಂಗಡಿಗಳ ಮಾಲೀಕರು ಈ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜನತಾ ಕಾಲೊನಿಯ ನಿವಾಸಿಗಳು ಮನೆಯ ತ್ಯಾಜ್ಯಗಳನ್ನು ಪಕ್ಕದ ಹೋಟೆಲ್ ಹಿಂಭಾಗದಲ್ಲಿ ಹಾಕಿರುವುದರಿಂದ ಈ ಸ್ಥಳದಲ್ಲೂ ನೊಣ, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ.</p>.<p>ಕೂಡಲೇ ಈ ಬಗ್ಗೆ ಗ್ರಾಮ ಪಂಚಾಯತಿ ಗಮನಹರಿಸಿ ಮಾಂಸದ ಅಂಗಡಿಗಳ ಮಾಲೀಕರು ಮತ್ತು ಈ ಭಾಗದ ನಿವಾಸಿಗಳಿಗೆ ಎಚ್ಚರಿಕೆಯನ್ನು ನೀಡಬೇಕಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಂಟಿಕೊಪ್ಪ:</strong> ಇಲ್ಲಿನ ಮೀನು, ಮಾಂಸ ಮಾರಾಟಗಾರರ ನಿರ್ಲಕ್ಷ್ಯದಿಂದ ತ್ಯಾಜ್ಯಗಳು ಹರಡಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.</p>.<p>ಇಲ್ಲಿನ ಗ್ರಾಮ ಪಂಚಾಯಿತಿಗೆ ಸೇರಿದ ಜನತಾ ಕಾಲೊನಿಯ ಬಳಿ ಮೀನು, ಮಾಂಸದ ಅಂಗಡಿಗಳು ಕಾರ್ಯಚರಿಸುತ್ತಿದ್ದು, ಅಂಗಡಿಗಳ ಅಕ್ಕಪಕ್ಕದ ಬಳಿ ಕೋಳಿ, ಕುರಿ ಮಾಂಸ, ರಕ್ತ ಹಾಗೂ ತ್ಯಾಜ್ಯದಿಂದ ನೊಣ, ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ.</p>.<p>ಗ್ರಾಮ ಪಂಚಾಯಿತಿ ಆಡಳಿತ ಮಂಡಲಿ ಹಾಗೂ ಆರೋಗ್ಯ ಇಲಾಖೆ ಪರಿಸರವನ್ನು ಶುಚಿಯಾಗಿಡಬೇಕೆಂದು ಸೂಚನೆ ನೀಡಿದ್ದರೂ ಈ ಮಾಂಸದ ಅಂಗಡಿಗಳ ಮಾಲೀಕರು ಈ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜನತಾ ಕಾಲೊನಿಯ ನಿವಾಸಿಗಳು ಮನೆಯ ತ್ಯಾಜ್ಯಗಳನ್ನು ಪಕ್ಕದ ಹೋಟೆಲ್ ಹಿಂಭಾಗದಲ್ಲಿ ಹಾಕಿರುವುದರಿಂದ ಈ ಸ್ಥಳದಲ್ಲೂ ನೊಣ, ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ.</p>.<p>ಕೂಡಲೇ ಈ ಬಗ್ಗೆ ಗ್ರಾಮ ಪಂಚಾಯತಿ ಗಮನಹರಿಸಿ ಮಾಂಸದ ಅಂಗಡಿಗಳ ಮಾಲೀಕರು ಮತ್ತು ಈ ಭಾಗದ ನಿವಾಸಿಗಳಿಗೆ ಎಚ್ಚರಿಕೆಯನ್ನು ನೀಡಬೇಕಾಗಿ ಸಾರ್ವಜನಿಕರು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>