<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯಲ್ಲಿ ಹಲವು ದಿನಗಳ ನಂತರ ಕಾಡಾನೆಗಳ ವಿರುದ್ಧ ಮಹತ್ವದ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಮೇ 14ರಿಂದ ಕಾರ್ಯಾಚರಣೆ ಆರಂಭವಾಗಲಿದ್ದು, 1 ಕಾಡಾನೆ ಸೆರೆ ಹಿಡಿಯಲು ಹಾಗೂ 2 ಕಾಡಾನೆಗಳಿಗೆ ರೇಡಿಯೊ ಕಾಲರಿಂಗ್ ಅಳವಡಿಸಲು ಸಿದ್ಧತೆಗಳು ನಡೆದಿವೆ.</p>.<p>ಸಿದ್ದಾಪುರ ಭಾಗದಲ್ಲಿ ಈ ಕಾರ್ಯಾಚರಣೆ ನಡೆಯಲಿದೆ. ಒಂಟಿ ಸಲಗವೊಂದು ಪದೇ ಪದೇ ದಾಳಿ ನಡೆಸುತ್ತಿದೆ. ಇನ್ನೆರಡು ಆನೆ ಹಿಂಡುಗಳು ರೈತರನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಹಾಗಾಗಿ, ಒಂಟಿ ಸಲಗವನ್ನು ಸೆರೆ ಹಿಡಿಯಲು ಹಾಗೂ 2 ಕಾಡಾನೆ ಹಿಂಡಿನ ಮುಖ್ಯ ಆನೆಗಳಿಗೆ ರೇಡಿಯೊ ಕಾಲರಿಂಗ್ ಅಳವಡಿಸಲಾಗುತ್ತದೆ.</p>.<p>ಈಗಾಗಲೇ ಕೊಡಗು ಜಿಲ್ಲೆಯಲ್ಲಿ 12 ಆನೆಗಳಿಗೆ ರೇಡಿಯೊ ಕಾಲರಿಂಗ್ ಅಳವಡಿಸಲಾಗಿದ್ದು, ಯಶಸ್ವಿಯಾಗಿದೆ. ಇದರಿಂದ ರೈತರ ಜಮೀನುಗಳು, ಜನವಸತಿ ಪ್ರದೇಶಗಳ ಮೇಲಿನ ಆನೆಗಳ ದಾಳಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.</p>.<p>ಪ್ರತಿ 3 ಗಂಟೆಗೆ ಒಂದು ಬಾರಿ ರೇಡಿಯೊ ಕಾಲರಿಂಗ್ನಿಂದ ಸಂದೇಶ ಬರಲಿದ್ದು, ಆ ಆನೆ ಎಲ್ಲಿದೆ ಎಂಬುದು ಗೊತ್ತಾಗಲಿದೆ. ಒಂದು ವೇಳೆ ಜನವಸತಿ ಪ್ರದೇಶಗಳ ಸಮೀಪಕ್ಕೆ ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ಜನರಿಗೆ ಮುನ್ನಚ್ಚರಿಕೆ ನೀಡಬಹುದು. ಇಲ್ಲವೇ, ಆ ಆನೆಗಳನ್ನು ಕಾಡಿನತ್ತ ಓಡಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳುತ್ತಾರೆ.</p>.<p>ರೇಡಿಯೊ ಕಾಲರಿಂಗ್ ಅಳವಡಿಸಿದ್ದಲ್ಲಿ ಆನೆಗಳನ್ನು ಕಂಡು ಜನರು ದೂರು ನೀಡುವವರೆಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾಯಬೇಕಿಲ್ಲ. ಮೊದಲೇ ಅವುಗಳ ಇರುವಿಕೆಯ ಜಾಗವನ್ನು ಅರಿತು ಅದಕ್ಕೆ ಸೂಕ್ತ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಹುದು.</p>.<p><strong>ಆನೆಗಳ ಹಿಂಡಿನ ಯಜಮಾನಿಗೆ ಅಳವಡಿಕೆ!</strong></p>.<p>ಸಾಮಾನ್ಯವಾಗಿ ಆನೆಗಳ ಹಿಂಡಿನ ನಾಯಕತ್ವವನ್ನು ಹೆಣ್ಣಾನೆಯೇ ವಹಿಸಿರುತ್ತದೆ. ಹಾಗಾಗಿ, ಹಿಂಡಿನ ಪ್ರಧಾನ ನಾಯಕಿಗೆ ರೇಡಿಯೊ ಕಾಲರಿಂಗ್ ಅಳವಡಿಸಲಾಗುತ್ತದೆ. ಇದೊಂದು ದೊಡ್ಡಮಟ್ಟದ ಕಾರ್ಯಾಚರಣೆಯಾಗಿದ್ದು, ಅರಣ್ಯ ಇಲಾಖೆ ಎಲ್ಲ ಬಗೆಯ ಸಿದ್ಧತೆಗಳನ್ನೂ ಕೈಗೊಂಡಿದೆ.</p>.<p>ಹಿಂಡಿನ ಆನೆಗಳ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಕುಮ್ಕಿ ಆನೆಗಳನ್ನು ಬಳಕೆ ಮಾಡಲಾಗುತ್ತದೆ. ಹಾಗಾಗಿ, ಈ ಬಗೆಯ ಕಾರ್ಯಾಚರಣೆಗೆ 7ರಿಂದ 8 ಸಾಕಾನೆಗಳನ್ನು ದುಬಾರೆ ಮತ್ತು ಮತ್ತಿಗೋಡು ಶಿಬಿರಗಳಿಂದ ಕರೆಸಿಕೊಳ್ಳಲಾಗಿದೆ. ಒಟ್ಟು 50ಕ್ಕೂ ಅಧಿಕ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.</p>.<p>ಅರವಳಿಕೆ ಚುಚ್ಚುಮದ್ದು ನೀಡಿ ಒಂಟಿ ಸಲಗವನ್ನು ಸೆರೆ ಹಿಡಿಯಲಾಗುತ್ತದೆ. 2 ಹಿಂಡಿನ 2 ಕಾಡಾನೆಗಳಿಗೂ ಅರವಳಿಕೆ ಚುಚ್ಚುಮದ್ದು ನೀಡಿ, ರೇಡಿಯೊ ಕಾಲರಿಂಗ್ ಅಳವಡಿಸಿ, ಬಿಡಲಾಗುತ್ತದೆ.</p>.<p><strong>ಓಡಿಸಿ, ಓಡಿಸಿ ಹೈರಣಾಗಿರುವ ಸಿಬ್ಬಂದಿ!</strong></p>.<p>ಈ 3 ಕಾಡಾನೆಗಳನ್ನು ಕಾಡಿಗೆ ಓಡಿಸಿ ಓಡಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹೈರಣಾಗಿದ್ದಾರೆ. ಬೆಳಿಗ್ಗೆ ಕಾರ್ಯಾಚರಣೆ ಕೈಗೊಂಡು ಕಾಡಿಗೆ ಕಳುಹಿಸಿದರೆ, ಈ ಆನೆಗಳು ರಾತ್ರಿ ವೇಳೆ ಮತ್ತೆ ಬರುತ್ತಿವೆ. ಇದರಿಂದ ಬೇರೆ ವಿಧಿ ಇಲ್ಲದೇ ಈ ಬಗೆಯ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ಕೊಡಗು ಜಿಲ್ಲೆಯಲ್ಲಿ ಹಲವು ದಿನಗಳ ನಂತರ ಕಾಡಾನೆಗಳ ವಿರುದ್ಧ ಮಹತ್ವದ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಮೇ 14ರಿಂದ ಕಾರ್ಯಾಚರಣೆ ಆರಂಭವಾಗಲಿದ್ದು, 1 ಕಾಡಾನೆ ಸೆರೆ ಹಿಡಿಯಲು ಹಾಗೂ 2 ಕಾಡಾನೆಗಳಿಗೆ ರೇಡಿಯೊ ಕಾಲರಿಂಗ್ ಅಳವಡಿಸಲು ಸಿದ್ಧತೆಗಳು ನಡೆದಿವೆ.</p>.<p>ಸಿದ್ದಾಪುರ ಭಾಗದಲ್ಲಿ ಈ ಕಾರ್ಯಾಚರಣೆ ನಡೆಯಲಿದೆ. ಒಂಟಿ ಸಲಗವೊಂದು ಪದೇ ಪದೇ ದಾಳಿ ನಡೆಸುತ್ತಿದೆ. ಇನ್ನೆರಡು ಆನೆ ಹಿಂಡುಗಳು ರೈತರನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಹಾಗಾಗಿ, ಒಂಟಿ ಸಲಗವನ್ನು ಸೆರೆ ಹಿಡಿಯಲು ಹಾಗೂ 2 ಕಾಡಾನೆ ಹಿಂಡಿನ ಮುಖ್ಯ ಆನೆಗಳಿಗೆ ರೇಡಿಯೊ ಕಾಲರಿಂಗ್ ಅಳವಡಿಸಲಾಗುತ್ತದೆ.</p>.<p>ಈಗಾಗಲೇ ಕೊಡಗು ಜಿಲ್ಲೆಯಲ್ಲಿ 12 ಆನೆಗಳಿಗೆ ರೇಡಿಯೊ ಕಾಲರಿಂಗ್ ಅಳವಡಿಸಲಾಗಿದ್ದು, ಯಶಸ್ವಿಯಾಗಿದೆ. ಇದರಿಂದ ರೈತರ ಜಮೀನುಗಳು, ಜನವಸತಿ ಪ್ರದೇಶಗಳ ಮೇಲಿನ ಆನೆಗಳ ದಾಳಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.</p>.<p>ಪ್ರತಿ 3 ಗಂಟೆಗೆ ಒಂದು ಬಾರಿ ರೇಡಿಯೊ ಕಾಲರಿಂಗ್ನಿಂದ ಸಂದೇಶ ಬರಲಿದ್ದು, ಆ ಆನೆ ಎಲ್ಲಿದೆ ಎಂಬುದು ಗೊತ್ತಾಗಲಿದೆ. ಒಂದು ವೇಳೆ ಜನವಸತಿ ಪ್ರದೇಶಗಳ ಸಮೀಪಕ್ಕೆ ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ಜನರಿಗೆ ಮುನ್ನಚ್ಚರಿಕೆ ನೀಡಬಹುದು. ಇಲ್ಲವೇ, ಆ ಆನೆಗಳನ್ನು ಕಾಡಿನತ್ತ ಓಡಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳುತ್ತಾರೆ.</p>.<p>ರೇಡಿಯೊ ಕಾಲರಿಂಗ್ ಅಳವಡಿಸಿದ್ದಲ್ಲಿ ಆನೆಗಳನ್ನು ಕಂಡು ಜನರು ದೂರು ನೀಡುವವರೆಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾಯಬೇಕಿಲ್ಲ. ಮೊದಲೇ ಅವುಗಳ ಇರುವಿಕೆಯ ಜಾಗವನ್ನು ಅರಿತು ಅದಕ್ಕೆ ಸೂಕ್ತ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಹುದು.</p>.<p><strong>ಆನೆಗಳ ಹಿಂಡಿನ ಯಜಮಾನಿಗೆ ಅಳವಡಿಕೆ!</strong></p>.<p>ಸಾಮಾನ್ಯವಾಗಿ ಆನೆಗಳ ಹಿಂಡಿನ ನಾಯಕತ್ವವನ್ನು ಹೆಣ್ಣಾನೆಯೇ ವಹಿಸಿರುತ್ತದೆ. ಹಾಗಾಗಿ, ಹಿಂಡಿನ ಪ್ರಧಾನ ನಾಯಕಿಗೆ ರೇಡಿಯೊ ಕಾಲರಿಂಗ್ ಅಳವಡಿಸಲಾಗುತ್ತದೆ. ಇದೊಂದು ದೊಡ್ಡಮಟ್ಟದ ಕಾರ್ಯಾಚರಣೆಯಾಗಿದ್ದು, ಅರಣ್ಯ ಇಲಾಖೆ ಎಲ್ಲ ಬಗೆಯ ಸಿದ್ಧತೆಗಳನ್ನೂ ಕೈಗೊಂಡಿದೆ.</p>.<p>ಹಿಂಡಿನ ಆನೆಗಳ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಕುಮ್ಕಿ ಆನೆಗಳನ್ನು ಬಳಕೆ ಮಾಡಲಾಗುತ್ತದೆ. ಹಾಗಾಗಿ, ಈ ಬಗೆಯ ಕಾರ್ಯಾಚರಣೆಗೆ 7ರಿಂದ 8 ಸಾಕಾನೆಗಳನ್ನು ದುಬಾರೆ ಮತ್ತು ಮತ್ತಿಗೋಡು ಶಿಬಿರಗಳಿಂದ ಕರೆಸಿಕೊಳ್ಳಲಾಗಿದೆ. ಒಟ್ಟು 50ಕ್ಕೂ ಅಧಿಕ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.</p>.<p>ಅರವಳಿಕೆ ಚುಚ್ಚುಮದ್ದು ನೀಡಿ ಒಂಟಿ ಸಲಗವನ್ನು ಸೆರೆ ಹಿಡಿಯಲಾಗುತ್ತದೆ. 2 ಹಿಂಡಿನ 2 ಕಾಡಾನೆಗಳಿಗೂ ಅರವಳಿಕೆ ಚುಚ್ಚುಮದ್ದು ನೀಡಿ, ರೇಡಿಯೊ ಕಾಲರಿಂಗ್ ಅಳವಡಿಸಿ, ಬಿಡಲಾಗುತ್ತದೆ.</p>.<p><strong>ಓಡಿಸಿ, ಓಡಿಸಿ ಹೈರಣಾಗಿರುವ ಸಿಬ್ಬಂದಿ!</strong></p>.<p>ಈ 3 ಕಾಡಾನೆಗಳನ್ನು ಕಾಡಿಗೆ ಓಡಿಸಿ ಓಡಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹೈರಣಾಗಿದ್ದಾರೆ. ಬೆಳಿಗ್ಗೆ ಕಾರ್ಯಾಚರಣೆ ಕೈಗೊಂಡು ಕಾಡಿಗೆ ಕಳುಹಿಸಿದರೆ, ಈ ಆನೆಗಳು ರಾತ್ರಿ ವೇಳೆ ಮತ್ತೆ ಬರುತ್ತಿವೆ. ಇದರಿಂದ ಬೇರೆ ವಿಧಿ ಇಲ್ಲದೇ ಈ ಬಗೆಯ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>