<p><strong>ಗೋಣಿಕೊಪ್ಪಲು:</strong> ಮಳೆಯಿಂದಾಗಿ ಪೊನ್ನಂಪೇಟೆ ತಾಲ್ಲೂಕು ಚಿಕ್ಕಮಂಡೂರಿನ ಭಗವತಿ ದೇವಸ್ಥಾನ ತಡೆಗೋಡೆ ಬುಧವಾರ ಕುಸಿದು ಬಿದ್ದಿದೆ.</p>.<p>ಚಿಕ್ಕಮಂಡೂರು ಸೇರಿದಂತೆ ಮುಗುಟಗೇರಿ, ಬಲ್ಯಮಂಡೂರು, ನಡಿಕೇರಿ, ಬೇಗೂರು ಭಾಗಕ್ಕೆ ಒಂದೇ ದಿನದಲ್ಲಿ 8 ಇಂಚು ಮಳೆ ಸುರಿದಿತ್ತು. ಇದರಿಂದ ದೇವಸ್ಥಾನದ ಆವರಣದಲ್ಲಿ ಜಲ ಎದ್ದಿದ್ದು, ಈ ನೀರು ತಡೆ ಗೋಡೆಯನ್ನು ಭೇದಿಸಿಕೊಂಡು ಹೊರಬಂದಿದೆ. ಈ ವೇಳೆಯಲ್ಲಿ ಅತಿಯಾದ ಶೀತದಿಂದ ತಡೆಗೋಡೆ ಕುಸಿದು ಬಿದ್ದಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಳ್ಳಿಚಂಡ ಉಮೇಶ್ ಕರುಂಬಯ್ಯ ಹೇಳಿದರು.</p>.<p>ನೂರಾರು ವರ್ಷಗಳ ಹಳೆಯದಾದ ದೇವಸ್ಥಾನವನ್ನು 3 ವರ್ಷದ ಹಿಂದೆ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ₹70 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿತ್ತು. ತಡೆಗೋಡೆ ನಿರ್ಮಾಣಕ್ಕೆ ₹10 ವೆಚ್ಚ ಮಾಡಲಾಗಿತ್ತು. ಅತಿಯಾದ ಮಳೆಯಿಂದ ಎಲ್ಲವೂ ಈಗ ಹಾಳಾಗಿದೆ’ ಎಂದು ಅವರು ಹೇಳಿದರು.</p>.<p>ಕುಸಿದ ತಡೆಗೋಡೆಯನ್ನು ಮರು ನಿರ್ಮಾಣ ಮಾಡಿಕೊಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು:</strong> ಮಳೆಯಿಂದಾಗಿ ಪೊನ್ನಂಪೇಟೆ ತಾಲ್ಲೂಕು ಚಿಕ್ಕಮಂಡೂರಿನ ಭಗವತಿ ದೇವಸ್ಥಾನ ತಡೆಗೋಡೆ ಬುಧವಾರ ಕುಸಿದು ಬಿದ್ದಿದೆ.</p>.<p>ಚಿಕ್ಕಮಂಡೂರು ಸೇರಿದಂತೆ ಮುಗುಟಗೇರಿ, ಬಲ್ಯಮಂಡೂರು, ನಡಿಕೇರಿ, ಬೇಗೂರು ಭಾಗಕ್ಕೆ ಒಂದೇ ದಿನದಲ್ಲಿ 8 ಇಂಚು ಮಳೆ ಸುರಿದಿತ್ತು. ಇದರಿಂದ ದೇವಸ್ಥಾನದ ಆವರಣದಲ್ಲಿ ಜಲ ಎದ್ದಿದ್ದು, ಈ ನೀರು ತಡೆ ಗೋಡೆಯನ್ನು ಭೇದಿಸಿಕೊಂಡು ಹೊರಬಂದಿದೆ. ಈ ವೇಳೆಯಲ್ಲಿ ಅತಿಯಾದ ಶೀತದಿಂದ ತಡೆಗೋಡೆ ಕುಸಿದು ಬಿದ್ದಿದೆ ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಳ್ಳಿಚಂಡ ಉಮೇಶ್ ಕರುಂಬಯ್ಯ ಹೇಳಿದರು.</p>.<p>ನೂರಾರು ವರ್ಷಗಳ ಹಳೆಯದಾದ ದೇವಸ್ಥಾನವನ್ನು 3 ವರ್ಷದ ಹಿಂದೆ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ₹70 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿತ್ತು. ತಡೆಗೋಡೆ ನಿರ್ಮಾಣಕ್ಕೆ ₹10 ವೆಚ್ಚ ಮಾಡಲಾಗಿತ್ತು. ಅತಿಯಾದ ಮಳೆಯಿಂದ ಎಲ್ಲವೂ ಈಗ ಹಾಳಾಗಿದೆ’ ಎಂದು ಅವರು ಹೇಳಿದರು.</p>.<p>ಕುಸಿದ ತಡೆಗೋಡೆಯನ್ನು ಮರು ನಿರ್ಮಾಣ ಮಾಡಿಕೊಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>