<p><strong>ಮಡಿಕೇರಿ:</strong> ನಾಡಿನಲ್ಲೇ ‘ಬೆಳಕಿನ ದಸರೆ’ ಎಂದೇ ಹೆಸರಾದ ಮಡಿಕೇರಿ ದಸರೆಯ ವಿಜಯದಶಮಿಯ ರಾತ್ರಿ ನಡೆಯುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮೊದಲು ಹೊರಡುವುದು ಇಲ್ಲಿನ ಐತಿಹಾಸಿಕ ಪೇಟೆ ಶ್ರೀರಾಮಮಂದಿರದ ಮಂಟಪ.</p>.<p>ಇಂದಿಗೂ ಈ ದೇಗುಲದ ಮಂಟಪವನ್ನು ಬಹುತೇಕ ಎಲ್ಲ ಹಿರಿಯರೂ ಮೆಚ್ಚಿಕೊಳ್ಳುತ್ತಾರೆ. ಶೋಭಾಯಾತ್ರೆಯ ದಿನ ಮಂಟಪದಲ್ಲಿ ಸಾಗುವ ದೇವರ ಕಲಾಕೃತಿಗೆ ಹಿರಿಯರು ಭಕ್ತಿಭಾವದಿಂದ ನಮಿಸುತ್ತಾರೆ.</p>.<p>ಮಂಟಪ ಕಲೆ ಹಾಗೂ ಸಂಸ್ಕೃತಿ ಉಳಿಸುವಿಕೆಯಲ್ಲಿ ಮುಂಚೂಣಿಯಲ್ಲಿರುವ ಪೇಟೆ ಶ್ರೀರಾಮ ಮಂದಿರದ ಮಂಟಪವು ಶೋಭಾಯಾತ್ರೆಯಲ್ಲಿ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಈ ಬಾರಿ ‘ಕೃಷ್ಣನಿಂದ ಗೀತೋಪದೇಶ’ ಎಂಬ ಕಥಾಹಂದರವನ್ನಿಟ್ಟುಕೊಂಡು ಮಂಟಪ ರಚನೆಯಾಗುತ್ತಿದೆ.</p>.<p>ಇದರಲ್ಲಿ ಕೃಷ್ಣ, ಅರ್ಜುನ, ಋಷಿಮುನಿಗಳು ಸೇರಿದಂತೆ 7ರಿಂದ 8 ಕಲಾಕೃತಿಗಳು ಇರುತ್ತವೆ. ಸದ್ಯ, 2 ಟ್ರಾಕ್ಟರ್ನ್ನು ಬಳಕೆ ಮಾಡಲಾಗುತ್ತಿದೆ. ಕಲಾಕೃತಿಗಳು ಬೆಂಗಳೂರಿನಲ್ಲಿ ತಯಾರಾಗುತ್ತಿವೆ.</p>.<p>ಈ ಕುರಿತು ‘ಪ್ರಜಾವಾಣಿ’ ಪ್ರತಿಕ್ರಿಯಿಸಿದ ಪೇಟೆ ಶ್ರೀರಾಮಮಂದಿರ ಮಂಟಪ ಸಮಿತಿ ಅಧ್ಯಕ್ಷ ಶಿವಮೂರ್ತಿ, ‘ಪೇಟೆ ಶ್ರೀರಾಮಮಂದಿರಕ್ಕೆ ಸುಮಾರು 160 ವರ್ಷಗಳಿಗೂ ಅಧಿಕ ಇತಿಹಾಸ ಇದೆ. ಈ ಬಾರಿ ‘ಕೃಷ್ಣನಿಂದ ಗೀತೋಪದೇಶ’ ಕಥಾಹಂದರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.</p>.<p>ಈ ಹಿಂದಿನ ವರ್ಷಗಳಲ್ಲಿ ಪ್ರದರ್ಶಿಸಲಾಗಿದ್ದ ‘ಶಿವದರ್ಶನ’, ‘ವೈಕುಂಠ ದರ್ಶನ’ ಹಾಗೂ ವಿಷ್ಣುವಿನ ಮತ್ಸ್ಯಾವತಾರ’ ಮಂಟಪವು ಜನಮನಸೂರೆಗೊಳ್ಳುವಲ್ಲಿ ಸಫಲವಾಗಿತ್ತು.</p>.<h2>107ನೇ ವರ್ಷಕ್ಕೆ ಅಡಿ ಇಟ್ಟ</h2><p>ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ 2ನೇಯದಾಗಿ ಹೊರಡುವ ದೇಚೂರು ಶ್ರೀರಾಮಮಂದಿರವು ಈಗಾಗಲೇ 106 ವಸಂತಗಳನ್ನು ಪೂರೈಸಿ 107ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಬಾರಿ ‘ರಾಮಾಂಜನೇಯ ವೈಭವ’ ಎಂಬ ಕಥಾಹಂದರವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.</p>.<p>ದೇಗುಲದ ಸಮೀಪ ಭಜನಾ ಮಂದಿರದ ಪುನರ್ನಿರ್ಮಾಣ ಮಾಡುತ್ತಿರುವುದರಿಂದ ಅತಿಯಾದ ಆಡಂಬರ ಈ ಬಾರಿ ಇಲ್ಲ. ಆದರೂ, ಉತ್ತಮ ಕಲಾತ್ಮಕತೆಯಿಂದ ಕೂಡಿರುತ್ತದೆ. ಒಂದೇ ಟ್ರಾಕ್ಟರ್ನಲ್ಲಿ ಇಡೀ ಕಥೆಯನ್ನು ಹೇಳಲು ಸಿದ್ಧತೆ ನಡೆಸಲಾಗಿದೆ.</p>.<p>ಮೈಸೂರು ಸಮೀಪದ ಉದ್ಭೂರಿನಲ್ಲಿ 4 ಕಲಾಕೃತಿಗಳು ನಿರ್ಮಾಣವಾಗುತ್ತಿವೆ. ದಿಂಡಿಗಲ್ಲಿನ ಬೋರ್ಡ್ ಇದೆ ಎಂದು ಮಂಟಪ ಸಮಿತಿ ಅಧ್ಯಕ್ಷ ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಈ ಹಿಂದೆ ಪ್ರದರ್ಶಿಸಿದ್ದ ‘ಮಧುಕೈಟಭರ ವಧಾ ಪ್ರಸಂಗ’ ಹಾಗೂ ಕಾಳಿಂಗ ಮರ್ಧನ’ವು ನೋಡುಗರಿಗೆ ರಸದೌತಣವನ್ನೇ ಬಡಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ:</strong> ನಾಡಿನಲ್ಲೇ ‘ಬೆಳಕಿನ ದಸರೆ’ ಎಂದೇ ಹೆಸರಾದ ಮಡಿಕೇರಿ ದಸರೆಯ ವಿಜಯದಶಮಿಯ ರಾತ್ರಿ ನಡೆಯುವ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಮೊದಲು ಹೊರಡುವುದು ಇಲ್ಲಿನ ಐತಿಹಾಸಿಕ ಪೇಟೆ ಶ್ರೀರಾಮಮಂದಿರದ ಮಂಟಪ.</p>.<p>ಇಂದಿಗೂ ಈ ದೇಗುಲದ ಮಂಟಪವನ್ನು ಬಹುತೇಕ ಎಲ್ಲ ಹಿರಿಯರೂ ಮೆಚ್ಚಿಕೊಳ್ಳುತ್ತಾರೆ. ಶೋಭಾಯಾತ್ರೆಯ ದಿನ ಮಂಟಪದಲ್ಲಿ ಸಾಗುವ ದೇವರ ಕಲಾಕೃತಿಗೆ ಹಿರಿಯರು ಭಕ್ತಿಭಾವದಿಂದ ನಮಿಸುತ್ತಾರೆ.</p>.<p>ಮಂಟಪ ಕಲೆ ಹಾಗೂ ಸಂಸ್ಕೃತಿ ಉಳಿಸುವಿಕೆಯಲ್ಲಿ ಮುಂಚೂಣಿಯಲ್ಲಿರುವ ಪೇಟೆ ಶ್ರೀರಾಮ ಮಂದಿರದ ಮಂಟಪವು ಶೋಭಾಯಾತ್ರೆಯಲ್ಲಿ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಈ ಬಾರಿ ‘ಕೃಷ್ಣನಿಂದ ಗೀತೋಪದೇಶ’ ಎಂಬ ಕಥಾಹಂದರವನ್ನಿಟ್ಟುಕೊಂಡು ಮಂಟಪ ರಚನೆಯಾಗುತ್ತಿದೆ.</p>.<p>ಇದರಲ್ಲಿ ಕೃಷ್ಣ, ಅರ್ಜುನ, ಋಷಿಮುನಿಗಳು ಸೇರಿದಂತೆ 7ರಿಂದ 8 ಕಲಾಕೃತಿಗಳು ಇರುತ್ತವೆ. ಸದ್ಯ, 2 ಟ್ರಾಕ್ಟರ್ನ್ನು ಬಳಕೆ ಮಾಡಲಾಗುತ್ತಿದೆ. ಕಲಾಕೃತಿಗಳು ಬೆಂಗಳೂರಿನಲ್ಲಿ ತಯಾರಾಗುತ್ತಿವೆ.</p>.<p>ಈ ಕುರಿತು ‘ಪ್ರಜಾವಾಣಿ’ ಪ್ರತಿಕ್ರಿಯಿಸಿದ ಪೇಟೆ ಶ್ರೀರಾಮಮಂದಿರ ಮಂಟಪ ಸಮಿತಿ ಅಧ್ಯಕ್ಷ ಶಿವಮೂರ್ತಿ, ‘ಪೇಟೆ ಶ್ರೀರಾಮಮಂದಿರಕ್ಕೆ ಸುಮಾರು 160 ವರ್ಷಗಳಿಗೂ ಅಧಿಕ ಇತಿಹಾಸ ಇದೆ. ಈ ಬಾರಿ ‘ಕೃಷ್ಣನಿಂದ ಗೀತೋಪದೇಶ’ ಕಥಾಹಂದರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.</p>.<p>ಈ ಹಿಂದಿನ ವರ್ಷಗಳಲ್ಲಿ ಪ್ರದರ್ಶಿಸಲಾಗಿದ್ದ ‘ಶಿವದರ್ಶನ’, ‘ವೈಕುಂಠ ದರ್ಶನ’ ಹಾಗೂ ವಿಷ್ಣುವಿನ ಮತ್ಸ್ಯಾವತಾರ’ ಮಂಟಪವು ಜನಮನಸೂರೆಗೊಳ್ಳುವಲ್ಲಿ ಸಫಲವಾಗಿತ್ತು.</p>.<h2>107ನೇ ವರ್ಷಕ್ಕೆ ಅಡಿ ಇಟ್ಟ</h2><p>ದಸರಾ ದಶಮಂಟಪಗಳ ಶೋಭಾಯಾತ್ರೆಯಲ್ಲಿ 2ನೇಯದಾಗಿ ಹೊರಡುವ ದೇಚೂರು ಶ್ರೀರಾಮಮಂದಿರವು ಈಗಾಗಲೇ 106 ವಸಂತಗಳನ್ನು ಪೂರೈಸಿ 107ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಬಾರಿ ‘ರಾಮಾಂಜನೇಯ ವೈಭವ’ ಎಂಬ ಕಥಾಹಂದರವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.</p>.<p>ದೇಗುಲದ ಸಮೀಪ ಭಜನಾ ಮಂದಿರದ ಪುನರ್ನಿರ್ಮಾಣ ಮಾಡುತ್ತಿರುವುದರಿಂದ ಅತಿಯಾದ ಆಡಂಬರ ಈ ಬಾರಿ ಇಲ್ಲ. ಆದರೂ, ಉತ್ತಮ ಕಲಾತ್ಮಕತೆಯಿಂದ ಕೂಡಿರುತ್ತದೆ. ಒಂದೇ ಟ್ರಾಕ್ಟರ್ನಲ್ಲಿ ಇಡೀ ಕಥೆಯನ್ನು ಹೇಳಲು ಸಿದ್ಧತೆ ನಡೆಸಲಾಗಿದೆ.</p>.<p>ಮೈಸೂರು ಸಮೀಪದ ಉದ್ಭೂರಿನಲ್ಲಿ 4 ಕಲಾಕೃತಿಗಳು ನಿರ್ಮಾಣವಾಗುತ್ತಿವೆ. ದಿಂಡಿಗಲ್ಲಿನ ಬೋರ್ಡ್ ಇದೆ ಎಂದು ಮಂಟಪ ಸಮಿತಿ ಅಧ್ಯಕ್ಷ ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಈ ಹಿಂದೆ ಪ್ರದರ್ಶಿಸಿದ್ದ ‘ಮಧುಕೈಟಭರ ವಧಾ ಪ್ರಸಂಗ’ ಹಾಗೂ ಕಾಳಿಂಗ ಮರ್ಧನ’ವು ನೋಡುಗರಿಗೆ ರಸದೌತಣವನ್ನೇ ಬಡಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>