<p><strong>ಮಡಿಕೇರಿ</strong>: ‘ಬೆಳಕಿನ ದಸರೆ’ ಎಂದೇ ಹೆಸರಾದ ಇಲ್ಲಿನ ದಸರಾ ದಶಮಂಟಪಗಳ ಶೋಭಾಯಾತ್ರೆಯು ನಾಡಿನ ದಸರೆಗೆ ಸಂಭ್ರಮದ ತೆರೆ ಎಳೆಯಿತು.</p><p>‘ದಸರೆಯ ಆರಂಭ ಮೈಸೂರಿನಲ್ಲಾದರೆ ಅದರ ಸಮಾರೋಪ ಮಡಿಕೇರಿಯಲ್ಲಿ’ ಎಂಬ ಮಾತಿನಂತೆ ಮೈಸೂರಿನ ಜಂಬೂಸವಾರಿ ಮುಗಿಯುತ್ತಿದ್ದಂತೆ ತಂಡೋಪತಂಡವಾಗಿ ಜನರು ‘ಮಂಜಿನ ನಗರಿ’ಗೆ ಆಗಮಿಸಿದರು. ಇಲ್ಲಿ ಬೀಳುತ್ತಿದ್ದ ತುಂತುರು ಮಳೆ ಹನಿ, ಬೀಸುತ್ತಿದ್ದ ಶೀತಗಾಳಿ, ಆವರಿಸಿದ್ದ ಚಳಿಯ ನಡುವೆ ಸಾಗಿದ ಮಂಟಪಗಳನ್ನು ಕಣ್ತುಂಬಿಕೊಂಡರು.</p><p>ಮೊದಲಿಗೆ ಪೇಟೆ ಶ್ರೀರಾಮಮಂದಿರವು ‘ಕೃಷ್ಣನಿಂದ ಗೀತೋಪದೇಶ’ ಎಂಬ ಕಥಾಹಂದರವನ್ನಿಟ್ಟುಕೊಂಡು ರೂಪಿಸಲಾದ ಮಂಟಪದೊಂದಿಗೆ ಶೋಭಾಯಾತ್ರೆಗೆ ಮೊದಲಾಯಿತು. ಈ ಮಂಟಪದ ಕಲಾಕೃತಿ ಹಾಗೂ ಬೆಳಕಿನ ವಿನ್ಯಾಸ ಕಂಡ ಜನರು ನಿಂತಲ್ಲೇ ಕೈ ಮುಗಿದರು.</p><p>ಒಟ್ಟು ಹತ್ತು ಮಂಟಪಗಳು ಒಂದೊಂದು ಪೌರಾಣಿಕ ಕಥಾವಸ್ತುವನ್ನು ಪ್ರದರ್ಶಿಸಿದವು. ಕಲಾಕೃತಿಗಳ ಚಲನವಲನ, ಬೆಳಕಿನ ವಿನ್ಯಾಸ, ಕಥಾಹಂದರಗಳನ್ನು ಜನರು ನೋಡಿ ಸಂಭ್ರಮಿಸಿದರು. ರಾತ್ರಿ ಇಡೀ ಬೆಳಕು ತುಂಬಿದ ರಸ್ತೆಗಳಲ್ಲಿ ಮನಬಂದಂತೆ ಓಡಾಡುತ್ತಾ ಖುಷಿಪಟ್ಟರು.</p><p>‘ಇರುಳನ್ನೇ ಹಗಲಾಗಿಸುವ’ ತೆರದಿ ರಾತ್ರಿ ಇಡೀ ದಸರಾ ಮಂಟಪಗಳಲ್ಲಿ ನಡೆದ ವಿವಿಧ ಪೌರಾಣಿಕ ಕಥೆಗಳ ಪ್ರದರ್ಶನವನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ</strong>: ‘ಬೆಳಕಿನ ದಸರೆ’ ಎಂದೇ ಹೆಸರಾದ ಇಲ್ಲಿನ ದಸರಾ ದಶಮಂಟಪಗಳ ಶೋಭಾಯಾತ್ರೆಯು ನಾಡಿನ ದಸರೆಗೆ ಸಂಭ್ರಮದ ತೆರೆ ಎಳೆಯಿತು.</p><p>‘ದಸರೆಯ ಆರಂಭ ಮೈಸೂರಿನಲ್ಲಾದರೆ ಅದರ ಸಮಾರೋಪ ಮಡಿಕೇರಿಯಲ್ಲಿ’ ಎಂಬ ಮಾತಿನಂತೆ ಮೈಸೂರಿನ ಜಂಬೂಸವಾರಿ ಮುಗಿಯುತ್ತಿದ್ದಂತೆ ತಂಡೋಪತಂಡವಾಗಿ ಜನರು ‘ಮಂಜಿನ ನಗರಿ’ಗೆ ಆಗಮಿಸಿದರು. ಇಲ್ಲಿ ಬೀಳುತ್ತಿದ್ದ ತುಂತುರು ಮಳೆ ಹನಿ, ಬೀಸುತ್ತಿದ್ದ ಶೀತಗಾಳಿ, ಆವರಿಸಿದ್ದ ಚಳಿಯ ನಡುವೆ ಸಾಗಿದ ಮಂಟಪಗಳನ್ನು ಕಣ್ತುಂಬಿಕೊಂಡರು.</p><p>ಮೊದಲಿಗೆ ಪೇಟೆ ಶ್ರೀರಾಮಮಂದಿರವು ‘ಕೃಷ್ಣನಿಂದ ಗೀತೋಪದೇಶ’ ಎಂಬ ಕಥಾಹಂದರವನ್ನಿಟ್ಟುಕೊಂಡು ರೂಪಿಸಲಾದ ಮಂಟಪದೊಂದಿಗೆ ಶೋಭಾಯಾತ್ರೆಗೆ ಮೊದಲಾಯಿತು. ಈ ಮಂಟಪದ ಕಲಾಕೃತಿ ಹಾಗೂ ಬೆಳಕಿನ ವಿನ್ಯಾಸ ಕಂಡ ಜನರು ನಿಂತಲ್ಲೇ ಕೈ ಮುಗಿದರು.</p><p>ಒಟ್ಟು ಹತ್ತು ಮಂಟಪಗಳು ಒಂದೊಂದು ಪೌರಾಣಿಕ ಕಥಾವಸ್ತುವನ್ನು ಪ್ರದರ್ಶಿಸಿದವು. ಕಲಾಕೃತಿಗಳ ಚಲನವಲನ, ಬೆಳಕಿನ ವಿನ್ಯಾಸ, ಕಥಾಹಂದರಗಳನ್ನು ಜನರು ನೋಡಿ ಸಂಭ್ರಮಿಸಿದರು. ರಾತ್ರಿ ಇಡೀ ಬೆಳಕು ತುಂಬಿದ ರಸ್ತೆಗಳಲ್ಲಿ ಮನಬಂದಂತೆ ಓಡಾಡುತ್ತಾ ಖುಷಿಪಟ್ಟರು.</p><p>‘ಇರುಳನ್ನೇ ಹಗಲಾಗಿಸುವ’ ತೆರದಿ ರಾತ್ರಿ ಇಡೀ ದಸರಾ ಮಂಟಪಗಳಲ್ಲಿ ನಡೆದ ವಿವಿಧ ಪೌರಾಣಿಕ ಕಥೆಗಳ ಪ್ರದರ್ಶನವನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>