ಗೋಣಿಗದ್ದೆ ಕೊಡಂಗೆ ಹಾಡಿ ಜನರಿಗೆ ಅರಣ್ಯದ ಅಂಚಿಗೆ ತಲಾ 3 ಎಕರೆ ಭೂಮಿ, ಪುನರ್ವಸತಿ ಕಲ್ಪಿಸಬೇಕು, ಲೈನ್ಮನೆ ವಾಸಿಗಳಿಗೆ ಕೃಷಿ ಭೂಮಿ, 94 ‘ಸಿ’, ‘ಸಿಸಿ’ ಹಾಗೂ 57ರಡಿಯಲ್ಲಿ ಆದಿವಾಸಿಗಳಿಗೆ ಹಕ್ಕು ಪತ್ರ, ಸಾಗುವಳಿ ಮಾಡಿರುವ ಕೃಷಿಭೂಮಿಗೆ ಹಕ್ಕುಪತ್ರ ನೀಡಬೇಕು, ಹುಲಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ಸಹಾಯವನ್ನು ತ್ವರಿತವಾಗಿ ನೀಡಬೇಕು, ಅರಣ್ಯ ಹಕ್ಕು ಕಾಯ್ದೆ ಸಮರ್ಥವಾಗಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.