ಮಾಂಸಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಹಸುಗಳ ಕಳೇಬರವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.ಹಸುಗಳು ಕಳ್ಳಿಚಂಡ ಪುಣಚ್ಚ, ಕಳ್ಳಿಚಂಡ ಗಣಪತಿ ಹಾಗೂ ಸುಬ್ರ ಅವರಿಗೆ ಸೇರಿವೆ.ಭಾನುವಾರ ಸಂಜೆ ಆರು ಗಂಟೆ ಸಮಯದಲ್ಲಿ ಎಸ್ಟೇಟ್ ಒಳಗೆ ಗುಂಡಿನ ಸದ್ದು ಕೇಳಿಬಂದಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಲವುದಿನಗಳಿಂದ ದೇವರಪುರ ತಿತಿಮತಿ ಭಾಗದಲ್ಲಿ ಹಸುಗಳ ಕಳವು ಹೆಚ್ಚಾಗಿದೆ. ಈಚೆಗೆ ಕೈಕೇರಿ ಗ್ರಾಮದ ಗುಡ್ಡೆಮನೆ ಪ್ರಾಣೇಶ್ ಅವರು ಹಸು ಕಾಣೆಯಾಗಿತ್ತು ಎಂದು ದೂರು ನೀಡಿದ್ದರು.