ಕುಶಾಲನಗರ: ಹಾರಂಗಿ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸುತ್ತಿರುವುದರಿಂದ ಪಟ್ಟಣದ ಸಾಯಿ ಬಡಾವಣೆಗೆ ಸೋಮವಾರ ರಾತ್ರಿ ನೀರು ನುಗ್ಗಿದೆ. ಸಾಯಿ ದೇವಾಲಯದ ಆವರಣ ಜಲಾವೃತಗೊಂಡಿದ್ದು, ನಿವಾಸಿಗಳಲ್ಲಿ ಭೀತಿ ಆವರಿಸಿದೆ.
ನೀರು ಹೆಚ್ಚಾಗುವ ಸಾಧ್ಯತೆ ಇದ್ದು, ಮನೆಯ ಸಾಮಗ್ರಿಗಳನ್ನು ನಿವಾಸಿಗಳು ಚಾವಣಿಯ ಮೇಲೆ ಸಾಗಿಸಿಡುತ್ತಿದ್ದಾರೆ. ಸ್ವಯಂಸೇವಕರು ಸಹಕರಿಸುತ್ತಿದ್ದಾರೆ.