<p><strong>ಸುಂಟಿಕೊಪ್ಪ</strong>: ಸಮೀಪದ ಸೂರ್ಲಬ್ಬಿ ನಾಡಿನ ಹಲವು ಗ್ರಾಮಗಳಲ್ಲಿ ಕಾಡುಪ್ರಾಣಿಗಳ ನಿರಂತರ ಉಪಟಳ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಭಯದ ವಾತಾವರಣದಲ್ಲಿಯೇ ಬದುಕು ಸಾಗಿಸುವಂತಾಗಿದೆ.</p>.<p>5-6 ವರ್ಷಗಳಿಂದ ಆನೆ, ಕಾಡುಕೋಣಗಳು ಈ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಫಿ, ಅಡಕೆ, ಭತ್ತ, ಬಾಳೆ ಮತ್ತು ಇನ್ನಿತರ ಬೆಳೆಗಳನ್ನು ನಾಶಪಡಿಸುತ್ತಿವೆ. ಇದರಿಂದ ಅಲ್ಪ ಪ್ರಮಾಣದಲ್ಲಿ ಕೃಷಿ ಮಾಡಿಕೊಂಡು ಜೀವನ ಮಾಡುವ ಇಲ್ಲಿನ ಜನರಿಗೆ ಅತಿವೃಷ್ಟಿ ಹಾಗೂ ಕಾಡು ಪ್ರಾಣಿಗಳ ನಿರಂತರ ಉಪಟಳದಿಂದ ನಷ್ಟವಾಗುತ್ತಿದೆ.</p>.<p>ಕಾಡು ಪ್ರಾಣಿಗಳ ಮೇಲೆ ಅತಿಯಾದ ಕಾಳಜಿ ಇದೆ. ಆದರೆ, ಅದರಿಂದ ಉಂಟಾಗುವ ಹಾನಿಯ ಬಗ್ಗೆ ನಿರ್ಲಕ್ಷ್ಯ ಏಕೆ ಎಂದು ಸ್ಥಳೀಯ ರೈತ ತಿಲಕ್ ಪ್ರಶ್ನಿಸುತ್ತಾರೆ.</p>.<p>‘ಅರಣ್ಯ ಇಲಾಖೆ ನೀಡುವ ಪರಿಹಾರ ಧನದಲ್ಲಿ ಬದುಕು ನಡೆಸಲು ಸಾಧ್ಯವಾಗುವುದಿಲ್ಲ’ ಎಂದು ಮುಟ್ಲು ಗ್ರಾಮದ ನಿವಾಸಿ ಉ.ಕಾ.ತಿಲಕ ಹೇಳಿದರು.</p>.<p>ಜತೆಗೆ ಈ ಭಾಗದಲ್ಲಿ ಜಂಟಿ ಖಾತೆಯಲ್ಲೆ ಹಲವು ತೋಟಗಳಿವೆ. ಇನ್ನೂ ಸಹ ಪಟ್ಟೆದಾರರ ಹೆಸರಿನಲ್ಲೇ ಇವೆ. ಪರಿಹಾರದ ಹಣವು ನಿಜವಾಗಿ ಸಾಗುವಳಿ ಮಾಡುತ್ತಿರುವವರಿಗೆ ತಲುಪುತ್ತಿಲ್ಲ.</p>.<p>ಕೂಡಲೇ ಅರಣ್ಯ ಇಲಾಖೆ ಮತ್ತು ಸರ್ಕಾರ ಕೃಷಿ ಬೆಳೆ ಮತ್ತು ಕೃಷಿಕರ ಮೇಲೆ ನಿರಂತರವಾಗಿ ವನ್ಯಪ್ರಾಣಿಗಳ ದಾಳಿಯನ್ನು ತಡೆಯುವುದರ ಜತೆಗೆ ಜನರ ರಕ್ಷಣೆಗೆ ನೆರವಾಗಬೇಕು ಎಂಬುದು ಸೂರ್ಲಬ್ಬಿ ವ್ಯಾಪ್ತಿಯ ಕೃಷಿಕರ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುಂಟಿಕೊಪ್ಪ</strong>: ಸಮೀಪದ ಸೂರ್ಲಬ್ಬಿ ನಾಡಿನ ಹಲವು ಗ್ರಾಮಗಳಲ್ಲಿ ಕಾಡುಪ್ರಾಣಿಗಳ ನಿರಂತರ ಉಪಟಳ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಭಯದ ವಾತಾವರಣದಲ್ಲಿಯೇ ಬದುಕು ಸಾಗಿಸುವಂತಾಗಿದೆ.</p>.<p>5-6 ವರ್ಷಗಳಿಂದ ಆನೆ, ಕಾಡುಕೋಣಗಳು ಈ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಫಿ, ಅಡಕೆ, ಭತ್ತ, ಬಾಳೆ ಮತ್ತು ಇನ್ನಿತರ ಬೆಳೆಗಳನ್ನು ನಾಶಪಡಿಸುತ್ತಿವೆ. ಇದರಿಂದ ಅಲ್ಪ ಪ್ರಮಾಣದಲ್ಲಿ ಕೃಷಿ ಮಾಡಿಕೊಂಡು ಜೀವನ ಮಾಡುವ ಇಲ್ಲಿನ ಜನರಿಗೆ ಅತಿವೃಷ್ಟಿ ಹಾಗೂ ಕಾಡು ಪ್ರಾಣಿಗಳ ನಿರಂತರ ಉಪಟಳದಿಂದ ನಷ್ಟವಾಗುತ್ತಿದೆ.</p>.<p>ಕಾಡು ಪ್ರಾಣಿಗಳ ಮೇಲೆ ಅತಿಯಾದ ಕಾಳಜಿ ಇದೆ. ಆದರೆ, ಅದರಿಂದ ಉಂಟಾಗುವ ಹಾನಿಯ ಬಗ್ಗೆ ನಿರ್ಲಕ್ಷ್ಯ ಏಕೆ ಎಂದು ಸ್ಥಳೀಯ ರೈತ ತಿಲಕ್ ಪ್ರಶ್ನಿಸುತ್ತಾರೆ.</p>.<p>‘ಅರಣ್ಯ ಇಲಾಖೆ ನೀಡುವ ಪರಿಹಾರ ಧನದಲ್ಲಿ ಬದುಕು ನಡೆಸಲು ಸಾಧ್ಯವಾಗುವುದಿಲ್ಲ’ ಎಂದು ಮುಟ್ಲು ಗ್ರಾಮದ ನಿವಾಸಿ ಉ.ಕಾ.ತಿಲಕ ಹೇಳಿದರು.</p>.<p>ಜತೆಗೆ ಈ ಭಾಗದಲ್ಲಿ ಜಂಟಿ ಖಾತೆಯಲ್ಲೆ ಹಲವು ತೋಟಗಳಿವೆ. ಇನ್ನೂ ಸಹ ಪಟ್ಟೆದಾರರ ಹೆಸರಿನಲ್ಲೇ ಇವೆ. ಪರಿಹಾರದ ಹಣವು ನಿಜವಾಗಿ ಸಾಗುವಳಿ ಮಾಡುತ್ತಿರುವವರಿಗೆ ತಲುಪುತ್ತಿಲ್ಲ.</p>.<p>ಕೂಡಲೇ ಅರಣ್ಯ ಇಲಾಖೆ ಮತ್ತು ಸರ್ಕಾರ ಕೃಷಿ ಬೆಳೆ ಮತ್ತು ಕೃಷಿಕರ ಮೇಲೆ ನಿರಂತರವಾಗಿ ವನ್ಯಪ್ರಾಣಿಗಳ ದಾಳಿಯನ್ನು ತಡೆಯುವುದರ ಜತೆಗೆ ಜನರ ರಕ್ಷಣೆಗೆ ನೆರವಾಗಬೇಕು ಎಂಬುದು ಸೂರ್ಲಬ್ಬಿ ವ್ಯಾಪ್ತಿಯ ಕೃಷಿಕರ ಮನವಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>