<p>ಕುಶಾಲನಗರ : ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಗಜ ಪಡೆಯ ಎರಡನೇ ತಂಡ ಕೊಡಗಿನ ದುಬಾರೆ ಸಾಕಾನೆ ಶಿಬಿರದಿಂದ ವಿಕ್ರಮ್, ಹರ್ಷ, ಗೋಪಿ, ಕಾವೇರಿ ಆನೆಗಳು ಸೆ.14ರಂದು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.<br /> <br /> ಈ ಸಾಕಾನೆಗಳಿಗೆ ಅರಣ್ಯ ಇಲಾಖೆ ವತಿಯಿಂದ ಎರಡು ತಿಂಗಳಿನಿಂದಲೂ `ವಾಕ್~ನೊಂದಿಗೆ ವ್ಯಾಯಾಮ ಮಾಡಿ ಸುವ ಮೂಲಕ ತಾಲೀಮು ನಡೆಸ ಲಾಗುತ್ತಿದೆ. ಮೈಸೂರಿಗೆ ಕಳುಹಿಸುವ ದಿಸೆಯಲ್ಲಿ ದುಬಾರೆ ಸಾಕಾನೆ ಶಿಬಿರದಲ್ಲಿ ಬೀಡುಬಿಟ್ಟಿದ್ದ ಹರ್ಷ, ಗೋಪಿ, ಕಾವೇರಿ ಆನೆಗಳನ್ನು ಸೋಮವಾರ ವನಪಾಲಕ ಅಪ್ಪಸ್ವಾಮಿ ಮಾವುತರ ನೆರವಿನೊಂದಿಗೆ ಮಧ್ಯಾಹ್ನ ಆನೆಕಾಡು ಶಿಬಿರಕ್ಕೆ ಕರೆ ತಂದರು.<br /> <br /> ಹಿರಿಯ ಸಾಕಾನೆ ವಿಕ್ರಮ್ಗೆ ಮಾತ್ರ ಆನೆಕಾಡಿನಲ್ಲೇ ತರಬೇತಿ ನೀಡಲಾಗು ತ್ತಿದ್ದು, ಈ ನಾಲ್ಕು ಆನೆಗಳನ್ನು ಬುಧ ವಾರ ಅರಣ್ಯ ಇಲಾಖೆ ವತಿಯಿಂದ ಆನೆಕಾಡಿನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಂತರ ವಾಹನದ ಮೂಲಕ ಮೈಸೂರಿಗೆ ಬೀಳ್ಕೊಡಲಾಗುವುದು ಎಂದು ಕುಶಾಲನಗರ ಆರ್ಎಫ್ಓ ಅಚ್ಚಪ್ಪ ಸೋಮವಾರ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಕೆಲವು ವರ್ಷಗಳಿಂದ ಸತತವಾಗಿ ದಸರಾ ಉತ್ಸವಕ್ಕೆ ತೆರಳುತ್ತಿರುವ 40 ವರ್ಷದ ವಿಕ್ರಮ್, 36 ವರ್ಷದ ಹರ್ಷ ಉತ್ತಮ ದೇಹ ಧಾರ್ಡ್ಯತೆ ಹೊಂದಿದ್ದು, ಮೆರವಣಿಗೆಯಲ್ಲಿ ತಮ್ಮ ಗಾಂಭೀರ್ಯ ವನ್ನು ಮೆರೆದಿವೆ. <br /> <br /> ಅರಣ್ಯ ಇಲಾಖೆ ವತಿಯಿಂದ ಕಳೆದ ಮೂರು ವರ್ಷಗಳ ಹಿಂದೆ ಅರಣ್ಯದಲ್ಲಿ ನಡೆಸಿದ ಎಲಿಫೆಂಟ್ ಕಾರ್ಯಾಚರಣೆ ಸಂದರ್ಭ ಸೆರೆಯಾದ `ಪುಂಡಾನೆ~ ಕಾವೇರಿ ಮಾತ್ರ ಇದೇ ಮೊದಲ ಸಲ ದಸರಾ ಮೆರವಣಿಗೆಯಲ್ಲಿ ಪಾಲ್ಗೊ ಳ್ಳಲು ತೆರಳುತ್ತಿರುವುದು ಈ ಬಾರಿಯ ವಿಶೇಷ. ಸಾಕಾನೆ ಕಾವೇರಿಗೆ ದುಬಾರೆ ಶಿಬಿರದಲ್ಲಿ ಮಾವುತರು ಈಗಾಗಲೇ ಶಿಸ್ತು - ಸಂಯಮದ ಪಾಠ ಕಲಿಸಿದ್ದಾರೆ. <br /> <br /> ಒಂದೆರೆಡು ಬಾರಿ ಮಾತ್ರ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ ಅನು ಭವ ಹೊಂದಿರುವ ಉತ್ತಮ ಮೈಕಟ್ಟಿನ 32 ವರ್ಷದ ಗೋಪಿಯನ್ನು ಮುಂದಿನ ವರ್ಷಗಳಲ್ಲಿ ಅಂಬಾರಿ ಹೊರಲು ಬಲರಾಮನ ಉತ್ತರಾಧಿಕಾರಿಯಾಗಿ ರೂಪಿಸುವ ಸಾಧ್ಯತೆಯಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಶಾಲನಗರ : ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಗಜ ಪಡೆಯ ಎರಡನೇ ತಂಡ ಕೊಡಗಿನ ದುಬಾರೆ ಸಾಕಾನೆ ಶಿಬಿರದಿಂದ ವಿಕ್ರಮ್, ಹರ್ಷ, ಗೋಪಿ, ಕಾವೇರಿ ಆನೆಗಳು ಸೆ.14ರಂದು ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ.<br /> <br /> ಈ ಸಾಕಾನೆಗಳಿಗೆ ಅರಣ್ಯ ಇಲಾಖೆ ವತಿಯಿಂದ ಎರಡು ತಿಂಗಳಿನಿಂದಲೂ `ವಾಕ್~ನೊಂದಿಗೆ ವ್ಯಾಯಾಮ ಮಾಡಿ ಸುವ ಮೂಲಕ ತಾಲೀಮು ನಡೆಸ ಲಾಗುತ್ತಿದೆ. ಮೈಸೂರಿಗೆ ಕಳುಹಿಸುವ ದಿಸೆಯಲ್ಲಿ ದುಬಾರೆ ಸಾಕಾನೆ ಶಿಬಿರದಲ್ಲಿ ಬೀಡುಬಿಟ್ಟಿದ್ದ ಹರ್ಷ, ಗೋಪಿ, ಕಾವೇರಿ ಆನೆಗಳನ್ನು ಸೋಮವಾರ ವನಪಾಲಕ ಅಪ್ಪಸ್ವಾಮಿ ಮಾವುತರ ನೆರವಿನೊಂದಿಗೆ ಮಧ್ಯಾಹ್ನ ಆನೆಕಾಡು ಶಿಬಿರಕ್ಕೆ ಕರೆ ತಂದರು.<br /> <br /> ಹಿರಿಯ ಸಾಕಾನೆ ವಿಕ್ರಮ್ಗೆ ಮಾತ್ರ ಆನೆಕಾಡಿನಲ್ಲೇ ತರಬೇತಿ ನೀಡಲಾಗು ತ್ತಿದ್ದು, ಈ ನಾಲ್ಕು ಆನೆಗಳನ್ನು ಬುಧ ವಾರ ಅರಣ್ಯ ಇಲಾಖೆ ವತಿಯಿಂದ ಆನೆಕಾಡಿನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ನಂತರ ವಾಹನದ ಮೂಲಕ ಮೈಸೂರಿಗೆ ಬೀಳ್ಕೊಡಲಾಗುವುದು ಎಂದು ಕುಶಾಲನಗರ ಆರ್ಎಫ್ಓ ಅಚ್ಚಪ್ಪ ಸೋಮವಾರ `ಪ್ರಜಾವಾಣಿ~ಗೆ ತಿಳಿಸಿದರು.<br /> <br /> ಕೆಲವು ವರ್ಷಗಳಿಂದ ಸತತವಾಗಿ ದಸರಾ ಉತ್ಸವಕ್ಕೆ ತೆರಳುತ್ತಿರುವ 40 ವರ್ಷದ ವಿಕ್ರಮ್, 36 ವರ್ಷದ ಹರ್ಷ ಉತ್ತಮ ದೇಹ ಧಾರ್ಡ್ಯತೆ ಹೊಂದಿದ್ದು, ಮೆರವಣಿಗೆಯಲ್ಲಿ ತಮ್ಮ ಗಾಂಭೀರ್ಯ ವನ್ನು ಮೆರೆದಿವೆ. <br /> <br /> ಅರಣ್ಯ ಇಲಾಖೆ ವತಿಯಿಂದ ಕಳೆದ ಮೂರು ವರ್ಷಗಳ ಹಿಂದೆ ಅರಣ್ಯದಲ್ಲಿ ನಡೆಸಿದ ಎಲಿಫೆಂಟ್ ಕಾರ್ಯಾಚರಣೆ ಸಂದರ್ಭ ಸೆರೆಯಾದ `ಪುಂಡಾನೆ~ ಕಾವೇರಿ ಮಾತ್ರ ಇದೇ ಮೊದಲ ಸಲ ದಸರಾ ಮೆರವಣಿಗೆಯಲ್ಲಿ ಪಾಲ್ಗೊ ಳ್ಳಲು ತೆರಳುತ್ತಿರುವುದು ಈ ಬಾರಿಯ ವಿಶೇಷ. ಸಾಕಾನೆ ಕಾವೇರಿಗೆ ದುಬಾರೆ ಶಿಬಿರದಲ್ಲಿ ಮಾವುತರು ಈಗಾಗಲೇ ಶಿಸ್ತು - ಸಂಯಮದ ಪಾಠ ಕಲಿಸಿದ್ದಾರೆ. <br /> <br /> ಒಂದೆರೆಡು ಬಾರಿ ಮಾತ್ರ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ ಅನು ಭವ ಹೊಂದಿರುವ ಉತ್ತಮ ಮೈಕಟ್ಟಿನ 32 ವರ್ಷದ ಗೋಪಿಯನ್ನು ಮುಂದಿನ ವರ್ಷಗಳಲ್ಲಿ ಅಂಬಾರಿ ಹೊರಲು ಬಲರಾಮನ ಉತ್ತರಾಧಿಕಾರಿಯಾಗಿ ರೂಪಿಸುವ ಸಾಧ್ಯತೆಯಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>